KSRTC ಸಂಚಾರ: 'ಈ' ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಪ್ರಾರಂಭ
ಬೆಂಗಳೂರು: ಮೇ 19: ಇಂದು ಬೆಳಗ್ಗೆಯಿಂದ ಕೆ.ಎಸ್.ಆರ್.ಟಿ.ಸಿ ಸಂಚಾರಕ್ಕೆ ಕರ್ನಾಟಕ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡದ ಕೆ.ಎಸ್.ಆರ್.ಟಿ.ಸಿ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಸಂಚಾರ ನಡೆಸಲಿದೆ.
ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಬಸ್ ಸಂಚಾರ ಇರುವುದಿಲ್ಲ. ಸಿಬ್ಬಂದಿ ಮತ್ತು ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವೈಯುಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಬೇಕಿದೆ.
ಕೆಎಸ್ಆರ್ಟಿಸಿ ಮುಂಗಡ ಬುಕ್ಕಿಂಗ್ ಆರಂಭ; ಮಾರ್ಗದ ವಿವರಗಳು
ಒಂದು ಬಸ್ ನಲ್ಲಿ ಗರಿಷ್ಠ 30 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಕೆ.ಎಸ್.ಆರ್.ಟಿ.ಸಿ ವೆಬ್ ಸೈಟ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದು. ಸದ್ಯ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದ್ದು, ಈ ಕೆಳಗಿನ ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು.
ಈ ಮಾರ್ಗಗಳ ಟಿಕೆಟ್ ಬುಕ್ಕಿಂಗ್ ಓಪನ್
* ಬೆಂಗಳೂರು-ಶಿವಮೊಗ್ಗ
* ಶಿವಮೊಗ್ಗ-ಬೆಂಗಳೂರು
* ಬೆಂಗಳೂರು-ಚಿಕ್ಕಮಗಳೂರು
* ಚಿಕ್ಕಮಗಳೂರು-ಬೆಂಗಳೂರು
* ಬೆಂಗಳೂರು-ದಾವಣಗೆರೆ
* ದಾವಣಗೆರೆ-ಬೆಂಗಳೂರು
* ಬೆಂಗಳೂರು-ಮೈಸೂರು
* ಮೈಸೂರು-ಬೆಂಗಳೂರು
ಮಡಿಕೇರಿ, ಮಂಗಳೂರು, ಕುಂದಾಪುರಕ್ಕೂ ಟಿಕೆಟ್ ಬುಕ್ಕಿಂಗ್ ಓಪನ್
* ಬೆಂಗಳೂರು-ಮಡಿಕೇರಿ
* ಮಡಿಕೇರಿ-ಬೆಂಗಳೂರು
* ಬೆಂಗಳೂರು-ಮಂಗಳೂರು
* ಮಂಗಳೂರು-ಬೆಂಗಳೂರು
* ಬೆಂಗಳೂರು-ಕುಂದಾಪುರ
* ಕುಂದಾಪುರ-ಬೆಂಗಳೂರು
ಕೆ.ಎಸ್.ಆರ್.ಟಿ.ಸಿ ಸಂಚಾರ: ಹೊಸ ನಿಯಮಗಳು ಇಂತಿವೆ
ಈ ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಓಪನ್
* ಬೆಂಗಳೂರು-ಹೊಸಪೇಟೆ
* ಹೊಸಪೇಟೆ-ಬೆಂಗಳೂರು
* ಬೆಂಗಳೂರು-ಬಳ್ಳಾರಿ
* ಬಳ್ಳಾರಿ- ಬೆಂಗಳೂರು
* ಬೆಂಗಳೂರು-ಹುಬ್ಬಳ್ಳಿ
* ಬೆಂಗಳೂರು-ಸಿರ್ಸಿ
* ಬೆಂಗಳೂರು-ರಾಯಚೂರು
* ಬೆಂಗಳೂರು-ಬೆಳಗಾವಿ
* ಬೆಂಗಳೂರು-ಧಾರವಾಡ
ಕೆ.ಎಸ್.ಆರ್.ಟಿ.ಸಿ ಮನವಿ
ಬಸ್ ನಿಲ್ದಾಣಗಳಲ್ಲಿ ಜನ ಸಂದಣಿ ಮತ್ತು ಕ್ಯೂ ನಲ್ಲಿ ಕಾಯುವುದನ್ನು ತಪ್ಪಿಸಲು ಆನ್ ಲೈನ್ ಮೂಲಕವೇ ಟಿಕೆಟ್ ಬುಕ್ ಮಾಡಲು ಪ್ರಯಾಣಿಕರಲ್ಲಿ ಕೆ.ಎಸ್.ಆರ್.ಟಿ.ಸಿ ಮನವಿ ಮಾಡಿದೆ. ಬಸ್ಸುಗಳು 50% ಆಸನಗಳ ಪ್ರಮಾಣದಲ್ಲಿ ಕಾರ್ಯಚರಣೆ ಮಾಡುತ್ತಿರುವುದರಿಂದ ಅತ್ಯಧಿಕ ಬಸ್ಸುಗಳು ಕಾರ್ಯಚರಣೆಗೆ ಅವಶ್ಯಕವಿದ್ದು, ಈ ಸಂಬಂಧ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಲ್ಲಿ, ಅವರ ಪ್ರಯಾಣವು ಸುಗಮವಾಗಿರಲಿದೆ ಎಂದು ಕೆ.ಎಸ್.ಆರ್.ಟಿ.ಸಿ ತಿಳಿಸಿದೆ.