ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ

|
Google Oneindia Kannada News

ಬೆಂಗಳೂರು, ಮೇ 27 : ಕೆಎಸ್ಆರ್‌ಟಿಸಿಯ ಬೆಂಗಳೂರು-ತಿರುಪತಿ ಪ್ಯಾಕೇಜ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ, ರಾಜ್ಯದ ವಿವಿಧ ನಗರಗಳಿಂದ ತಿರುಪತಿಗೆ ಪ್ಯಾಕೇಜ್ ಪ್ರವಾಸವನ್ನು ವಿಸ್ತರಣೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನಿಂದ ತಿರುಪತಿ ಪ್ಯಾಕೇಜ್ ಪ್ರವಾಸ ಆರಂಭಿಸಿದೆ. ಮಂಗಳೂರು, ದಾವಣಗೆರೆ, ಶಿವಮೊಗ್ಗದಿಂದ ತಿರುಪತಿ-ಕಾಳಹಸ್ತಿ ಪ್ಯಾಕೇಜ್ ಪ್ರವಾಸ ಆರಂಭಿಸಲಾಗಿದೆ.

ಮೈಸೂರು : ಪ್ರವಾಸಿ ಸ್ಥಳಗಳ ಭೇಟಿಗೆ ಕೆಎಸ್ಆರ್‌ಟಿಸಿ ದರ್ಶಿನಿ ಪ್ಯಾಕೇಜ್ಮೈಸೂರು : ಪ್ರವಾಸಿ ಸ್ಥಳಗಳ ಭೇಟಿಗೆ ಕೆಎಸ್ಆರ್‌ಟಿಸಿ ದರ್ಶಿನಿ ಪ್ಯಾಕೇಜ್

ಕೆಎಸ್ಆರ್‌ಟಿಸಿ ಕೌಂಟರ್ ಅಥವ ಆನ್‌ಲೈನ್/ಮೊಬೈಲ್ ಮೂಲಕ 30 ದಿನ ಮುಂಚಿತವಾಗಿ ಜನರು ಸೀಟು ಕಾಯ್ದಿರಿಸುವ ಮೂಲಕ ಪ್ಯಾಕೇಜ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಪ್ಯಾಕೇಜ್‌ನ ದರಪಟ್ಟಿಯನ್ನು ಕೆಎಸ್ಆರ್‌ಟಿಸಿ ಬಿಡುಗಡೆ ಮಾಡಿದೆ.

2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ

ಪ್ಯಾಕೇಜ್ ಪ್ರವಾಸ ಆಯ್ಕೆ ಮಾಡಿಕೊಂಡರೆ ಐರಾವತ ಕ್ಲಬ್ ಕ್ಲಾಸ್ ಬಸ್‌ನಲ್ಲಿ ಸಂಚಾರ ನಡೆಸಬಹುದಾಗಿದೆ. ರಜಾ ದಿನಗಳಿಗೆ ಮತ್ತು ಸಾಮಾನ್ಯ ದಿನಗಳಿಗೆ ಬೇರೆ-ಬೇರೆ ದರ ನಿಗದಿ ಮಾಡಲಾಗಿದೆ. ಈ ಪ್ಯಾಕೇಜ್‌ನ ವಿವರ ಇಲ್ಲಿದೆ....

ಹೊಸ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ, ವಿವರಹೊಸ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ, ವಿವರ

ಪ್ಯಾಕೇಜ್‌ ಏನನ್ನು ಒಳಗೊಂಡಿದೆ

ಪ್ಯಾಕೇಜ್‌ ಏನನ್ನು ಒಳಗೊಂಡಿದೆ

ತಿರುಪತಿ-ಕಾಳಹಸ್ತಿ ಪ್ಯಾಕೇಜ್‌ ಪ್ರವಾಸದಲ್ಲಿ ಐರಾವತ ಕ್ಲಬ್ ಕ್ಲಾಸ್ ಬಸ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಹೋಟೆಲ್‌ನಲ್ಲಿ ಫ್ರೆಶ್‌ ಅಪ್, ಪದ್ಮಾವತಿದೇವಿ ದರ್ಶನ, ಉಪಹಾರ, ತಿರುಪತಿ ತಿರುಮಲಕ್ಕೆ ಎಪಿಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರ ದರ್ಶನ ಮತ್ತು ಊಟ, ತಿರುಪತಿ ಸ್ಥಳೀಯ ದೇವಾಲಯಗಳ ಭೇಟಿ. ಕಾಳಹಸ್ತಿ ದೇವಸ್ಥಾನದಲ್ಲಿ ರಾತ್ರಿ ಊಟ ಮತ್ತು ತಂಗಲು ವ್ಯವಸ್ಥೆ, ಬೆಳಗ್ಗೆ ದೇಗುಲ ದರ್ಶನ, ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.

ಶೀಘ್ರ ದರ್ಶನ ವ್ಯವಸ್ಥೆ

ಶೀಘ್ರ ದರ್ಶನ ವ್ಯವಸ್ಥೆ

ಮೈಸೂರು-ತಿರುಪತಿ ಪ್ಯಾಕೇಜ್‌ನಲ್ಲಿ ಹೋಟೆಲ್‌ನಲ್ಲಿ ಫ್ರೆಶ್ ಅಪ್, ಪದ್ಮವತಿ ದರ್ಶನ, ಉಪಹಾರ, ತಿರುಪತಿ ತಿರುಮಲಕ್ಕೆ ಎಪಿಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರ ದರ್ಶನ ಮತ್ತು ಊಟ ಒಳಗೊಂಡಿದೆ.

ಪ್ಯಾಕೇಜ್ ದರಗಳ ವಿವರ

ಪ್ಯಾಕೇಜ್ ದರಗಳ ವಿವರ

* ಮಂಗಳೂರಿನಿಂದ ಮಧ್ಯಾಹ್ನ 12ಕ್ಕೆ ಬಸ್ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 5,100, ಮಕ್ಕಳಿಗೆ 4,100 ದರವಿದೆ. ವಾರಾಂತ್ಯದಲ್ಲಿ ವಯಸ್ಕರಿಗೆ 5,400, ಮಕ್ಕಳಿಗೆ 4,300 ದರ ನಿಗದಿ ಮಾಡಲಾಗಿದೆ.

* ದಾವಣಗೆರೆ (ಚಿತ್ರದುರ್ಗ ಮಾರ್ಗ) ಸಂಜೆ 4.06ಕ್ಕೆ ಬಸ್ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 4500, ಮಕ್ಕಳಿಗೆ 3600 ದರವಿದೆ. ವಾರಾಂತ್ಯದಲ್ಲಿ ವಯಸ್ಕರಿಗೆ 4800, ಮಕ್ಕಳಿಗೆ 3900 ದರವಿದೆ.

ಶಿವಮೊಗ್ಗ,ಮೈಸೂರು

ಶಿವಮೊಗ್ಗ,ಮೈಸೂರು

* ಶಿವಮೊಗ್ಗ (ಭದ್ರಾವತಿ ಮಾರ್ಗ) ಸಂಜೆ 4.01ಕ್ಕೆ ಬಸ್ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 4500, ಮಕ್ಕಳಿಗೆ 3600 ದರವಿದೆ. ವಾರಾಂತ್ಯದಲ್ಲಿ ವಯಸ್ಕರಿಗೆ 4800, ಮಕ್ಕಳಿಗೆ 3900 ದರವಿದೆ.

* ಮೈಸೂರು ರಾತ್ರಿ 7.31ಕ್ಕೆ ಬಸ್ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 3100, ಮಕ್ಕಳಿಗೆ 2200 ದರವಿದೆ. ವಾರಾಂತ್ಯದಲ್ಲಿ ವಯಸ್ಕರಿಗೆ 3,300, ಮಕ್ಕಳಿಗೆ 2400 ದರವಿದೆ.

English summary
Karnataka State Road Transport Corporation (KSRTC) extended Tirupathi package tour to Mysuru, Davanagere, Shivamogga and Mangaluru city. Bengaluru-Tirupathi package get the good response from people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X