ಕೆಪಿಸಿಸಿ ಅಧ್ಯಕ್ಷ ಗಾದಿ: ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತರು ಮುಂದೆ
ನವದೆಹಲಿ, ಅ.28: ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಜೊತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಹಾಲಿ ಅಧ್ಯಕ್ಷ ಜಿ ಪರಮೇಶ್ವರ ಅವರು ಸಿದ್ದರಾಮಯ್ಯ ಅವರ ಸಂಪುಟ ಸೇರಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಲವಾರು ಹೆಸರುಗಳು ಕೇಳಿ ಬಂದಿದೆ.
ಕಾಂಗ್ರೆಸ್ ಹೈಕಮಾಂಡ್ ಜೊತೆ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಲು ಜಿ ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ.
ಸಚಿವ
ಸಂಪುಟ
ವಿಸ್ತರಣೆಯಾದರೆ
ಇರುವ
ನಾಲ್ಕು
ಸ್ಥಾನಕ್ಕೆ
15
ರಿಂದ
20
ಜನ
ಶಾಸಕರು
ಮುಗಿಬೀಳುತ್ತಿರುವುದೇಕೆ
ಎಂಬ
ಪ್ರಶ್ನೆ
ಹುಟ್ಟುಕೊಂಡಿತ್ತು.
ಈಗ
ಬಹುತೇಕ
ನಾಲ್ವರ
ಹೆಸರುಗಳು
ಪಕ್ಕಾ
ಆಗಿದ್ದು,
ಪ್ರಮಾಣ
ವಚನ
ಸ್ವೀಕಾರಕ್ಕೆ
ವೇದಿಕೆ
ಏರುವ
ತನಕ
ಹೆಸರು
ಬದಲಾವಣೆಯಾಗುವ
ಎಲ್ಲಾ
ಸಾಧ್ಯತೆಗಳು
ಇವೆ.
[ನಾಲ್ವರನ್ನು
ಸಂಪುಟಕ್ಕೆ
ಸೇರಿಸಿಕೊಳ್ಳುತ್ತೇನೆ
:
ಸಿದ್ದರಾಮಯ್ಯ]
ಕೆಪಿಸಿಸಿ
ಅಧ್ಯಕ್ಷ
ಸ್ಥಾನ
ಯಾರಿಗೆ?
:
ಕೆಪಿಸಿಸಿ
ಅಧ್ಯಕ್ಷ
ಸ್ಥಾನ
ಯಾರಿಗೆ
ನೀಡಬಹುದು
ಎಂಬ
ಪ್ರಶ್ನೆಗೆ
ಉತ್ತರಿಸಿದ
ಪರಮೇಶ್ವರ,
ಕೆಎಚ್
ಮುನಿಯಪ್ಪ
ಅವರು
ಸಮರ್ಥರು
ಎಂದಿದ್ದರು.
ಕಾಂಗ್ರೆಸ್
ಪಕ್ಷ
ಸದೃಢಗೊಳ್ಳಬೇಕು.
ಬೇರೆ
ಬೇರೆ
ಕಾರಣಗಳಿಂದ
ಸಂಪುಟ
ವಿಸ್ತರಣೆ
ವಿಳಂಬವಾಗಿದೆ.
ನನಗೆ
ಯಾವ
ಹುದ್ದೆ
ನೀಡಬೇಕು
ಎಂಬುದು
ಹೈಕಮಾಂಡ್
ಗೆ
ಬಿಟ್ಟಿದ್ದು
ಎಂದು
ಹೇಳಿದ್ದರು.
ಅದರೆ,
ಜಾತಿ
ಲೆಕ್ಕಾಚಾರದಂತೆ
ಈ
ಬಾರಿ
ಲಿಂಗಾಯತ
ನಾಯಕರಿಗೆ
ಕೆಪಿಸಿಸಿ
ಅಧ್ಯಕ್ಷ
ಸ್ಥಾನ
ಒಲಿಯಲಿದೆ.
ಡಿಸಿಎಂ ಸ್ಥಾನವೇ ಬೇಕು ಎಂದು ಪರಂ ಹಠ ಏಕೆ?
ಕೆಪಿಸಿಸಿ ಅಧ್ಯಕ್ಷರಾದ ಡಾ ಪರಮೇಶ್ವರ ಅವರು ಮೊದಲಿಂದಲೂ ಸಂಪುಟ ಸೇರಬೇಕು ಅದರಲ್ಲೂ ಡಿಸಿಎಂ ಆಗಲೇಬೇಕು ಎಂದು ಬಯಸುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಗೂ ಮುಂಚಿತವಾಗಿಯೇ ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪರಂ ಘೋಷಿಸಿದರು. ಈಗಲೂ ಅಹಿಂದ(ದಲಿತರೂ ಸೇರಿ) ನಾಯಕರಾಗಿ ಸಿದ್ದರಾಮಯ್ಯ ಅವರನ್ನೇ ಗುರುತಿಸಲಾಗುತ್ತದೆ. ಪರಮೇಶ್ವರಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ದಲಿತ ವರ್ಗದ ಮತದಾರರನ್ನು ತೃಪ್ತಿಪಡಿಸಿದಂತಾಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಜಾತಿ ಸಮೀಕರಣದ ಲೆಕ್ಕಾಚಾರ ಯಾರ ನಿರ್ಧಾರ
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ಗಾಂಧಿ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ಸಿಂಗ್, ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಹಾಗೂ ರಾಜ್ಯದಿಂದ ಎಐಸಿಸಿಯನ್ನು ಪ್ರತಿನಿಧಿಸುವ ಹಿರಿಯ ನಾಯಕರ ಜತೆ ಸಂಪುಟ ವಿಸ್ತರಣೆಯ ಬಗ್ಗೆ ಪರಮೇಶ್ವರ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಜಾತಿ ಲೆಕ್ಕಾಚಾರದ ಪಟ್ಟಿಯನ್ನೂ ನೀಡಲಾಗಿದೆ. ಬಹುತೇಕ ಲಿಂಗಾಯತ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಗ್ಯಾರಂಟಿ.
ವೀರಶೈವರಿಗೆ ನಾಯಕತ್ವ ನೀಡಬೇಕು
ವೀರಶೈವರಿಗೆ ನಾಯಕತ್ವ ನೀಡಬೇಕು. ಬಿಜೆಪಿಯತ್ತ ವಾಲಿರುವ ಲಿಂಗಾಯತರನ್ನು ಪುನಃ ಕಾಂಗ್ರೆಸ್ ನತ್ತ ಒಲಿಸಿಕೊಳ್ಳಲು ಕೆಪಿಸಿಸಿಯಲ್ಲಿ ಬದಲಾವಣೆ ಅನಿವಾರ್ಯ ಎಂದು ಖಾಯಂ ಖಜಾಂಜಿಯೂ ಆಗಿರುವ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರು 2012ರಿಂದ ವರಾತ ಹಿಡಿದಿದ್ದಾರೆ. ಅದರೆ, ಅವರಿಗೆ ಅನುಭವವಿದ್ದರೂ ವಯೋವೃದ್ಧರಿಗೆ ಪಟ್ಟ ತಪ್ಪಿ ಮತ್ತೊಬ್ಬ ನಾಯಕರಿಗೆ ಸಿಗಲಿದೆ.
ರಾಜ್ಯಾಧ್ಯಕ್ಷ ಪಟ್ಟಕ್ಕೆ ಏಕೆ ಪ್ರಾಮುಖ್ಯತೆ
1989ರಲ್ಲಿ ವೀರೇಂದ್ರಪಾಟೀಲ್, 1999ರಲ್ಲಿ ಎಸ್.ಎಂ.ಕೃಷ್ಣ ಅವರ ಸಾರಥ್ಯದಲ್ಲಿ ಚುನಾವಣೆ ಎದುರಿಸಿದಾಗ ಪಕ್ಷಕ್ಕೆ ಬಹುಮತ ದೊರೆತು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಅದೇ ಕಾರ್ಯತಂತ್ರವನ್ನು ಅನುಸರಿಸಿ ಪ್ರಬಲ ವರ್ಗದ ನಾಯಕರೊಬ್ಬರಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕು ಎಂದು ವೀರಶೈವ ವರ್ಗ ಆಗ್ರಹಿಸಿದೆ. ಹೀಗಾಗಿ ಹಾಲಿ ಐಟಿ ಬಿಟಿ ಸಚಿವ ಎಸ್.ಅರ್ ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆಯಿದೆ