ಬಯಲುಸೀಮೆ ಗೌರಿಬಿದನೂರಲ್ಲಿ ಹಸಿರು ಕ್ರಾಂತಿ
ಗೌರಿಬಿದನೂರು, ಮೇ 24: ಹಸಿರು ಕ್ರಾಂತಿ ಎಂದರೇನು? ಮರ ಗಿಡಗಳನ್ನು ಬೆಳೆಸಿ ಪರಿಸರದಲ್ಲಿ ಸಮತೋಲನ ಕಾಪಾಡುವುದು ಎಂದು ಸರಳವಾಗಿ ಉತ್ತರಿಸಬಹುದು. ಬಿಸಿಲಿನಲ್ಲಿ ಬಳಲುವ, ಕುಡಿಯುವ ನೀರಿಗೆ ಸದಾ ಹಾಹಾಕಾರದಲ್ಲೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಹಸಿರು ಕ್ರಾಂತಿ ಸಾಧ್ಯವೇ?
ಹೌದು, ಸಾಧ್ಯವಿದೆ ಎಂಬುದನ್ನು ಅಲ್ಲಿಯ ಜನತೆ ತೋರಿಸಿಕೊಟ್ಟಿದ್ದಾರೆ. ಗೌರಿಬಿದನೂರಿನಲ್ಲಿ ಸದ್ದಿಲ್ಲದೇ ಹಸಿರು ಕ್ರಾಂತಿಗೆ ವೇದಿಕೆ ಸಿದ್ಧವಾಗಿದೆ. ಶಾಸಕ ವಿಧಾನ ಸಭೆಯ ಉಪಸಭಾಪತಿ, ಶಿವಶ೦ಕರ ರೆಡ್ಡಿ ಮರ ಗಿಡಗಳನ್ನು ಬೆಳೆಸಲು ಸ್ವತಃ ಮುಂದೆ ನಿಂತು ಕ್ರಮ ತೆಗೆದುಕೊಳ್ಳುತ್ತಿರುವುದು ಶ್ಲಾಘನೀಯ.[ಶುದ್ಧ ಕುಡಿಯುವ ನೀರು ನೀಡಿದವರಿಗೆ ಅನಂತ ಧನ್ಯವಾದ]
ಈ ಬಾರಿ ಮಳೆಗಾಲಕ್ಕೆ ಮುನ್ನವೇ ಯುವಕರ ತಂಡವೊಂದು ಕಿಶೋರ್ ಎಂಬುವರ ನೇತೃತ್ವದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸಲು ಸಿದ್ಧತೆ ಮಾಡಿಕೊಂಡಿದೆ. ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. ಬಯಲು ಸೀಮೆಯನ್ನು ಹಸಿರು ಸೀಮೆ ಮಾಡಲು ಹೊರಟವರ ಯೋಜನೆ ಮೇಲೆ ಒಂದು ನೋಟ ಇಲ್ಲಿದೆ.
*
ಗೌರಿಬಿದನೂರು
ತಾಲೂಕಿನ
ಎಲ್ಲಾ
ಶಾಲಾ
ಆವರಣಗಳಲ್ಲಿ
ವಿದ್ಯಾರ್ಥಿ
ಮತ್ತು
ಶಿಕ್ಷಕರೊ೦ದಿಗೆ
40,000ಸಸಿ
ನೆಟ್ಟು
ಮರವಾಗಿಸುವ
ಯೋಜನೆ["ನೀರು
ಕೇಳಿದವರ
ರಕ್ತ
ಬಸಿದ
ನಿಮಗೆ
ನಾಚಿಕೆಯಾಗಲ್ವಾ"?]
*
ಮಧುಗಿರಿ
ರಸ್ತೆಯಲ್ಲಿರುವ
ಕುರುಡಿ
ಅರಣ್ಯ
ಪ್ರದೇಶದಲ್ಲಿರುವ
1200
ಎಕರೆಯಲ್ಲಿ
500
ಎಕರೆಯಷ್ಟು
ಜಾಗದಲ್ಲಿದ್ದ
ನೀಲಗಿರಿಯನ್ನು
ತೆಗೆಸಿ,
ಸ್ಥಳೀಯ
ಜಾತಿಯ
ಮರಗಳ
ಕಾಡನ್ನು
ಬೆಳೆಸಲು
ಸಿದ್ಧತೆ.
*
ತಾಲೂಕಿನ
ಮರಳೂರು
ಬಳಿ
ಐ.ಐ.ಎಸ್ಸಿ,
ಇಸ್ರೋ
ಮತ್ತಿತರ
ಸ೦ಸ್ಥೆಗಳ
ಸಹಯೋಗದಲ್ಲಿ
"ಜೀವ
ವೈವಿಧ್ಯ
ಪಾರ್ಕ್"
*
ಆ೦ಧ್ರಕ್ಕೆ
ಹೊ೦ದಿಕೊ೦ಡಿರುವ
ಕೈಗಾರಿಕಾ
ಪ್ರದೇಶದಲ್ಲಿರುವ
ವಿಶ್ವೇಶ್ವರಯ್ಯನವರ
ಪ್ರತಿಮೆ
ಬಳಿಯ
5
ಎಕರೆ
ಜಮೀನಿನಲ್ಲಿ
ಸಸಿ
ನೆಡುವ
ಯೋಜನೆ[ಬಿಸಿಲ
ನಾಡಲ್ಲಿ
ಅರಳುತ್ತಿರುವ
ಜರ್ಬೆರಾ
ಹೂಗಳು!]
*
ತಾಲೂಕಿನ
ನಗರ
ಮತ್ತು
ಗ್ರಾಮಾ೦ತರ
ಪ್ರದೇಶದ
ರಸ್ತೆಗಳ
ಎರಡೂ
ಕಡೆ
ಹ೦ತಹ೦ತವಾಗಿ
ಸಸಿ
ನೆಟ್ಟು
ಮರವಾಗಿಸುವ
ಯೋಜನೆ.