ಕೊಡಗು ಪ್ರವಾಹ: ನೆರವಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಿಎಂ ನಿರ್ಧಾರ
ಬೆಂಗಳೂರು, ಆಗಸ್ಟ್ 27: ಕೊಡಗು ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳಿನಿಂದ ಬಿದ್ದ ಭಾರಿ ಮಳೆಯಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಂದು ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಆಗಿರುವ ಹಾನಿಯ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಸಿಎಂ ಪರಿಹಾರ ನಿಧಿಗೆ ಹರಿದುಬಂದ ದೇಣಿಗೆ: ಜನತೆಗೆ ಲೆಕ್ಕಕೊಟ್ಟ ಎಚ್ಡಿಕೆ
ಸುಮಾರು 800 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇತರೆ ಜಿಲ್ಲೆಗಳಲ್ಲೂ ಸಹ ಹಲವಾರು ಮನೆಗಳು ಹಾನಿಯಾಗಿವೆ ಸಾವಿರಾರು ಎಕರೆ ಕೃಷಿ ಭೂಮಿ ಮಳೆಗೆ ಆಹುತಿಯಾಗಿದೆ. ಎಂಬ ವಿಷಯವನ್ನು ಸಭೆಯ ಗಮನಕ್ಕೆ ತರಲಾಯಿತು.
ಕೊಡಗಿನಲ್ಲಿ ಮತ್ತೆ ಮನೆ ನಿರ್ಮಿಸುವ ನಿರಾಶ್ರಿತರ ಕನಸು ನನಸಾಗುವುದೇ?
ಇನ್ನು ಎರಡೇ ದಿನದಲ್ಲಿ ಕೊಡಗು ಸೇರಿದಂತೆ ಮಳೆಯಿಂದಾಗಿ ರಾಜ್ಯಕ್ಕೆ ಆಗಿರುವ ಹಾನಿಗೆ ಸಂಬಂಧಿಸಿದಂತೆ ವರದಿ ತಯಾರಿಸಿ ಕೇಂದ್ರಕ್ಕೆ ಕಳುಹಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.
2225 ಕಿ.ಮೀ ಹೆದ್ದಾರಿ ಹಾಳು
ಪ್ರಾಥಮಿಕ ಅಧ್ಯಯನದ ಪ್ರಕಾರ ಒಟ್ಟಾರೆ 2225 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳು ಹಾನಿಗೊಳಗಾಗಿವೆ 240 ಸೇತುವೆಗಳು ಕುಸಿದಿವೆ, 65 ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ರಸ್ತೆ ಮತ್ತು ಸೇತುವೆ ಹಾಗೂ ಸರ್ಕಾರಿ ಕಟ್ಟಡಗಳ ದುರಸ್ತಿಗೆ ಸುಮಾರು 3000 ಕೋಟಿ ರೂ.ಗಳ ಅಗತ್ಯವಿರುವುದನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
4500 ಜನರನ್ನು ಪ್ರವಾಹದಿಂದ ರಕ್ಷಿಸಲಾಗಿದೆ
ಕೊಡಗು ಜಿಲ್ಲೆಯಲ್ಲಿ ಒಟ್ಟಾರೆ 4500 ಜನರನ್ನು ಜಲಾವೃತ ಪ್ರದೇಶದಿಂದ ರಕ್ಷಿಸಲಾಗಿದೆ. 53 ಪುನರ್ವಸತಿ ಕೇಂದ್ರಗಳಲ್ಲಿ 7500 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಪ್ರತಿ ದಿನ 50 ಸಾವಿರ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತಿದ್ದು, ಹಾನಿಗೊಳಗಾಗಿರುವ ಕುಟುಂಬಗಳಿಗೆ ದವಸ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಸಭೆಗೆ ವಿವರಿಸಲಾಯಿತು.
ಕೊಡಗು ಸಂತ್ರಸ್ತರಿಗೆ 758 ಮನೆ ನಿರ್ಮಾಣ: ಯು.ಟಿ. ಖಾದರ್
ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಸಂಪರ್ಕ ಕಳೆದುಕೊಂಡಿವೆ
ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಸಂಪರ್ಕ ಕಳೆದುಕೊಂಡಿವೆ . ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಡಿಕೇರಿ ಮತ್ತು ಸುಳ್ಯ ನಡುವೆ ರಾಷ್ಟ್ರೀಯ ಹೆದ್ದಾರಿ 75 -ಸಕಲೇಶಪುರ ಮತ್ತು ಗುಂಡ್ಯ ನಡುವೆ, ರಾಷ್ಟ್ರೀಯ ಹೆದ್ದಾರಿ-234 ರಲ್ಲಿ ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ನಡುವೆ ಭೂ ಕುಸಿತದಿಂದಾಗಿ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕಟ್ಟಡಗಳಿಗೆ ಆಗಿರುವ ಹಾನಿಯ ಅಂದಾಜು ವಿವರ
ಪ್ರವಾಹ ಪೀಡಿತರಿಗೆ ಪರಿಹಾರ ಮತ್ತು ಪ್ರವಾಹದಿಂದ ಆಗಿರುವ ಹಾನಿಯನ್ನು ಸರಿಪಡಿಸಲು ಕೆಳಕಂಡ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು.
1.
ರಸ್ತೆ,
ಸೇತುವೆ,
ಸರ್ಕಾರಿ
ಕಟ್ಟಡಗಳ
ಹಾನಿಯ
ಬಗ್ಗೆ
ವಿವರವಾದ
ಪ್ರಸ್ತಾವನೆಯನ್ನು
ಸಿದ್ಧಪಡಿಸುವುದು.
2.
ಖಾಸಗಿ
ಕಟ್ಟಡಗಳಿಗೆ
ಹಾಗೂ
ಮನೆಗಳಿಗೆ
ಆಗಿರುವ
ಹಾನಿಯ
ಅಂದಾಜು
ವಿವರವನ್ನು
ಸಂಗ್ರಹಿಸುವುದು.
3.
ಕಾಫಿ,
ಅಡಿಕೆ,
ಮೆಣಸು,
ಭತ್ತ
ಮುಂತಾದ
ಬೆಳೆಗಳ
ಹಾನಿಯ
ಬಗ್ಗೆ
ಪ್ರತ್ಯೇಕ
ಪ್ರಸ್ತಾವನೆಯನ್ನು
ಸಿದ್ಧಪಡಿಸುವುದು.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಪುನರ್ವಸತಿ ಕಲ್ಪಿಸುವ ಬಗ್ಗೆ ಜನಾಭಿಪ್ರಾಯ
4.
ಮನೆಗಳನ್ನು
ಕಳೆದುಕೊಂಡಿರುವ
ಕುಟುಂಬಗಳಿಗೆ
ಪುನರ್ವಸತಿ
ಕಲ್ಪಿಸುವ
ಬಗ್ಗೆ
ಜನಾಭಿಪ್ರಾಯ
ಸಂಗ್ರಹಿಸುವುದು.
ಅವರ
ಅಭಿಪ್ರಾಯಕ್ಕೆ
ಅನುಗುಣವಾಗಿ
ಮನೆ
ನಿರ್ಮಾಣದ
ಪ್ರಸ್ತಾವನೆಯನ್ನು
ಸಲ್ಲಿಸುವುದು
5.
ಈ
ಪ್ರಾಕೃತಿಕ
ವಿಕೋಪದಲ್ಲಿ
ಮಡಿದವರ
ಹಾಗೂ
ಗಾಯಗೊಂಡವರ
ಕುಟುಂಬಗಳಿಗೆ
ನೀಡಲಾಗಿರುವ
ಪರಿಹಾರದ
ವಿವರಗಳನ್ನು
ಪ್ರಸ್ತಾವನೆಯಲ್ಲಿ
ಲಗತ್ತಿಸುವುದು.
6.
ಹಾನಿಗೊಳಗಾದ
ಗ್ರಾಮಗಳನ್ನು
ಮಾದರಿ
ಗ್ರಾಮಗಳನ್ನಾಗಿ
ಅಭಿವೃದ್ಧಿಪಡಿಸಲು
ನೀಲನಕ್ಷೆ
ಸಿದ್ಧಪಡಿಸುವುದು.
ಪಡಿತರ ವಿತರಣಾ ಕೇಂದ್ರದ ಮೂಲಕ ಆಹಾರ ವಿತರಣೆ
7.
ಶುದ್ಧೀಕರಿಸಿದ
ಕುಡಿಯುವ
ನೀರನ್ನು
ಮಾತ್ರ
ಪೂರೈಸಬೇಕು.
ಆದಷ್ಟೂ
ಕುದಿಸಿದ
ನೀರನ್ನೇ
ಕುಡಿಯುವಂತೆ
ಜನರಲ್ಲಿ
ಜಾಗೃತಿ
ಮೂಡಿಸುವುದು.
8.
ಪಡಿತರ
ವಿತರಣಾ
ಕೇಂದ್ರಗಳ
ಮೂಲಕ
ಆಹಾರವನ್ನು
ವಿತರಿಸುವುದು
9.
ಸಾಂಕ್ರಾಮಿಕ
ರೋಗಗಳು
ಹರಡದಂತೆ
ನಿಗಾ
ವಹಿಸುವುದು.
ವಿದ್ಯುತ್ ಮತ್ತು ದೂರವಾಣಿ ಸುಸ್ಥಿತಿಗೆ ತರಬೇಕು
10.
ವಿದ್ಯುತ್
ಹಾಗೂ
ದೂರವಾಣಿ
ಸಂಪರ್ಕವನ್ನು
ಸುಸ್ಥಿತಿಗೆ
ತರಲಾಗಿದ್ದರೂ
ಕುಗ್ರಾಮಗಳಲ್ಲಿ
ಈ
ಸಂಪರ್ಕಗಳು
ಇನ್ನೂ
ಲಭ್ಯವಾಗಿಲ್ಲ
ಎಂಬ
ದೂರುಗಳನ್ನು
ಗಂಭೀರವಾಗಿ
ಪರಿಗಣಿಸುವುದು.
11.
ಸಂಪರ್ಕ
ಕಳೆದುಕೊಂಡಿರುವ
ಗ್ರಾಮೀಣ
ರಸ್ತೆಗಳನ್ನು
ಆದ್ಯತೆಯ
ಮೇಲೆ
ದುರಸ್ತಿಗೊಳಿಸುವುದು.
12.
ಕೇಂದ್ರ
ಸರ್ಕಾರದ
ನೆರವಿಗಾಗಿ
ವಿವರವಾದ
ಪ್ರಸ್ತಾವನೆಯನ್ನು
ಎರಡು
ದಿನಗಳೊಳಗಾಗಿ
ಸಿದ್ಧಪಡಿಸುವುದು.
ಸಭೆಯಲ್ಲಿ ಈ ಎಲ್ಲಾ ಮಂತ್ರಿಗಳು ಹಾಜರಿದ್ದರು
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್, ವಸತಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ. ಎಸ್. ಎನ್. ಪ್ರಸಾದ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ. ರವಿಶಂಕರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಅವರುಗಳು ಭಾಗವಹಿಸಿದ್ದರು.