ಬೇಕಾದರೆ ಪ್ರಧಾನಿ ಮೋದಿಯನ್ನು ಗುಂಡಿಕ್ಕಿ ಸಾಯಿಸಿ: ಬೇಳೂರು ಗೋಪಾಲಕೃಷ್ಣ ಉದ್ದಟತನ
Recommended Video
ಬೆಂಗಳೂರು, ಮಾರ್ಚ್ 5: ಪುಲ್ವಾಮಾ ಘಟನೆಯನ್ನು ಇಡೀ ದೇಶ ಖಂಡಿಸಿದೆ. ಯಾರೂ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯವರ ಬಗ್ಗೆ ಕೆಲವರು ಮಾತನಾಡುತ್ತಾರೆ. ಅಂತವರು ಈ ದೇಶದಲ್ಲಿ ಇರಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಹೊರಟವರು ಈ ದೇಶದಲ್ಲಿ ಇರಬಾರದು ಎಂದು ಬಿಜೆಪಿಯನ್ನು ಉಲ್ಲೇಖಿಸುತ್ತಾ, ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಮಾಟ, ಮಂತ್ರದಿಂದ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಬೇಳೂರು ಗೋಪಾಲಕೃಷ್ಣ
ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ದ ಹೋಗುವವರನ್ನು, ನಿಮಗೆ ತಾಕತ್ ಇದ್ದರೆ, ನಿಮ್ಮ ಮೋದಿಯವರನ್ನು ಮೊದಲು ಗುಂಡಿಕ್ಕಿ ಸಾಯಿಸಿ. ಹಾಗೆ ಮಾಡಿದರೆ ಈ ದೇಶದಲ್ಲಿ ಬೇರೆ ಯಾರನ್ನೂ ಸಾಯಿಸುವ ಅಗತ್ಯವಿಲ್ಲ ಎನ್ನುವ ವಿವಾದಕಾರಿ ಹೇಳಿಕೆಯನ್ನು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಹಾಲಪ್ಪ, ಯಡಿಯೂರಪ್ಪ, ಶೋಭಾಗೆ ಪರೋಕ್ಷವಾಗಿ ಕುಟುಕಿದ ಬೇಳೂರು
ಈ ಬಗ್ಗೆ ವಿಡಿಯೋ ತುಣುಕು ಸಮೇತ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಘಟಕ, ಪ್ರಜಾತಂತ್ರ ವ್ಯವಸ್ಥೆಯ ಮೂಲಕ ಆಯ್ಕೆಯಾಗಿರುವ ಪ್ರಧಾನಿಯೊಬ್ಬರನ್ನು ಗುಂಡಿಕ್ಕಿ ಸಾಯಿಸಿ ಎನ್ನುವ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಬೇಳೂರು ಗೋಪಾಲಕೃಷ್ಣ ನೀಡಿದ್ದಾರೆ.
Belur Gopalakrishna, a Congress leader in a official party function calls for assassination of democratically elected PM Sri @narendramodi ji.
— BJP Karnataka (@BJP4Karnataka) March 5, 2019
Instigating for assassination of PM of a country is a nation threat & we urge @HMOIndia, @CPBlr to impose legal action immediately. pic.twitter.com/Tg9GO0FCdM
ಪ್ರಧಾನಿಯವರನ್ನು ಸಾಯಿಸಿ ಎನ್ನುವವರು ದೇಶಕ್ಕೆ ಅಪಾಯಕಾರಿ ಮನುಷ್ಯನಾಗುತ್ತಾರೆ. ಇಂತವರ ವಿರುದ್ದ ತುರ್ತಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ, ಕೇಂದ್ರ ಗೃಹಸಚಿವಾಲಯ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಅವರನ್ನು ಟ್ಯಾಗ್ ಮಾಡಿ, ಟ್ವೀಟ್ ಮಾಡಿದೆ.
ಫೆಬ್ರವರಿ ನಾಲ್ಕರಂದು ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಬೇಳೂರು ಗೋಪಾಲಕೃಷ್ಣ ನೀಡಿದ್ದ ಹೇಳಿಕೆಯನ್ನು, ಬಿಜೆಪಿ ಈಗ ಟ್ವೀಟ್ ಮಾಡಿದೆ.
'ಯಡಿಯೂರಪ್ಪ ಅವರು ಯಾವುದೇ ಚಿಕಿತ್ಸೆ ಪಡೆದುಕೊಳ್ಳಲು ಕೇರಳಕ್ಕೆ ಹೋಗಿಲ್ಲ, ಬದಲಾಗಿ ಮಾಟ, ಮಂತ್ರ ಮಾಡಿಸಲು ಶೋಭಾ ಕರಂದ್ಲಾಜೆ ಅವರೊಂದಿಗೆ ಹೋಗಿದ್ದಾರೆ', ಈ ರೀತಿಯ ವಿವಾದಕಾರಿ ಹೇಳಿಕೆಯನ್ನು ನೀಡುವುದರಲ್ಲಿ ಬೇಳೂರು ಗೋಪಾಲಕೃಷ್ಣ ನಿಸ್ಸೀಮರು.