ಯಡಿಯೂರಪ್ಪ ಅರ್ಜಿ ವಜಾ, ಮತ್ತೆ ಕಾಡಿದ ಕೆಎಚ್ ಬಿ ಹಗರಣ
ಬೆಂಗಳೂರು, ಆಗಸ್ಟ್ 11: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಕೆಎಚ್ ಬಿ ನಿವೇಶನ ಹಂಚಿಕೆ ಹಗರಣ ಕಾಡುತ್ತಿದೆ. ಈ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಬಿಎಸ್ವೈ ಹಾಗೂ ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.
ಶಿವಮೊಗ್ಗ
ಮೂಲದ
ವಕೀಲ
ಬಿ
ವಿನೋದ್
ಅವರು
ಸಲ್ಲಿಸಿದ್ದ
ಖಾಸಗಿ
ಅರ್ಜಿ
ವಿಚಾರಣೆಯಂತೆ
ಲೋಕಾಯುಕ್ತ
ಸಂಸ್ಥೆಯಿಂದ
ಬಿಎಸ್
ಯಡಿಯೂರಪ್ಪ
ಹಾಗೂ
ಅವರ
ಪುತ್ರಿ
ಬಿವೈ
ಅರುಣಾ
ದೇವಿ
ಹಾಗೂ
ಇತರರ
ವಿರುದ್ಧ
ತನಿಖೆ
ನಡೆಸಲಾಗಿತ್ತು.
ಬಿಎಸ್
ಯಡಿಯೂರಪ್ಪ
ಅವರು
ಉಪಮುಖ್ಯಮಂತ್ರಿಯಾಗಿದ್ದ
ಕಾಲದಲ್ಲಿ
ಸ್ವಜನ
ಪಕ್ಷಪಾತ,
ಅಧಿಕಾರ
ದುರ್ಬಳಕೆ
ಮಾಡಿಕೊಂಡು
ಕರ್ನಾಟಕ
ಹೌಸಿಂಗ್
ಬೋರ್ಡ್
ನಿವೇಶನಗಳನ್ನು
ಅಕ್ರಮವಾಗಿ
ಹಂಚಿಕೆ
ಮಾಡಿದ
ಆರೋಪ
ಎದುರಿಸುತ್ತಿದ್ದಾರೆ.
ಈ ಕೇಸಿಗೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್ 2012ರ ಫೆಬ್ರವರಿ 12ರಂದು ಆದೇಶ ಹೊರಡಿಸಿದ್ದು ಸರಿಯಿಲ್ಲ, ಸಿಆರ್ ಪಿಸಿ ಸೆಕ್ಷನ್ 197ರ ಪ್ರಕಾರ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬೇಕಾದರೆ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮ ಉಲ್ಲೇಖಿಸಿ ಯಡಿಯೂರಪ್ಪ ಅವರು ಮೇಲ್ಮನವಿ ಸಲ್ಲಿಸಿದ್ದರು.
ಆದರೆ, ನ್ಯಾ ಆನಂದ್ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಯಡಿಯೂರಪ್ಪ ಅವರ ಅಧಿಕಾರ ದುರ್ಬಳಕೆ ಬಗ್ಗೆ ಪರಿಶೀಲನೆ ನಡೆಸುವಂತೆ ವಿಶೇಷ ಕೋರ್ಟಿಗೆ ಸೂಚಿಸಿದ್ದು, ಶಿವಮೊಗ್ಗದ ಲೋಕಾಯುಕ್ತ ಸಂಸ್ಥೆ ಮತ್ತೊಮ್ಮೆ ತನಿಖೆ ಕೈಗೊಳ್ಳಲು ಸೂಚಿಸಿದ್ದಾರೆ.
ಏನಿದು ಕೇಸ್: ಶಿವಮೊಗ್ಗದ ವಿನೋಬಾ ನಗರದಲ್ಲಿ 2011ರಲ್ಲಿ ಕರ್ನಾಟಕ ಗೃಹ ಮಂಡಳಿಯ ನಿವೇಶನ ಹಂಚಿಕೆ ಮಾಡುವಾಗ ಪತ್ರಕರ್ತರ ಕೋಟಾದ ನಿವೇಶನಗಳನ್ನು ಬಿಎಸ್ ವೈ ಅವರು ತಮ್ಮ ಪುತ್ರಿಗೆ ಈ ನಿವೇಶನವನ್ನು ಹಂಚಿದ್ದಾರೆ ಎಂದು ವಿನೋದ್ ಅವರು ಆರೋಪಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಅಡಿ ಕ್ರಮ ಜರುಗಿಸುವಂತೆ ಲೋಕಾಯುಕ್ತ ಕೋರ್ಟಿನಲ್ಲಿ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಬಿಎಸ್ ವೈ ಅವರು ಅಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರು.