ಕಿರಣ್ ಮಜುಂದಾರ್ ಟ್ವೀಟ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ
ಬೆಂಗಳೂರು, ಜು.10: ರಾಜ್ಯದ 28 ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಸಾಹಿತಿಗಳು ವಿರೋಧಿಸಿದ ಬೆನ್ನಲ್ಲೇ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ವಿವಾದಾತ್ಮಕ ಟ್ವೀಟ್ ಕನ್ನಡಪರ ಹೋರಾಟಗಾರರನ್ನು ಕೆರಳಿಸಿದೆ,
ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಕಾಳಜಿ ಇಲ್ಲದ ಅನಗತ್ಯ ತಂಟೆಕೋರ ಸಣ್ಣ ಮತ್ತು ಅಪ್ರಸ್ತುತ ಹೋರಾಟಗಾರರ ಗುಂಪಿಗೆ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ ಎಂದು ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದರು.
ಕೇಂದ್ರ ಸಚಿವ ರಾಜ್ಯವರ್ಧನ್ ರಿಂದ ಬಯೋಕಾನ್ ಮಜುಂದಾರ್ ಭೇಟಿ
ಇದಕ್ಕೆ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಕಿಡಿಕಾರಿದ್ದು ಇಂತಹ ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಿ ಎಂದು ತಾಕೀತು ಮಾಡಿ ಷಾಗೆ ಪತ್ರ ಬರೆದಿದ್ದಾರೆ. ಕನ್ನಡದ ಸೌಲಭ್ಯಗಳನ್ನು ಬಳಸಿಕೊಂಡು, ಈ ರೀತಿ ಹೇಳಿಕೆ ನೀಡಿರುವುದು ಕನ್ನಡ ವಿರೋಧಿ ನಡೆಯಗಿದೆ. ಕೂಡಲೇ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
Political malcontents r trying to play mischief with my tweets. I have said students shd learn both Kannada and English for good job opportunities. I stand by this for the sake of Karnataka’s youth. Pls don’t twist my comments. CM is also saying this @CMofKarnataka
— Kiran Mazumdar Shaw (@kiranshaw) July 9, 2018
ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದೀರಿ, ಶಿಕ್ಷಣವನ್ನು ವ್ಯಾಪಾರಿ ದೃಷ್ಟಿಕೋನದಲ್ಲಿ ನೋಡುವ ನಿಮಗೆ ಭಾಷೆ ಮೂಲಭೂತ ಜವಾಬ್ದಾರಿಯನ್ನು ಅರ್ಥೈಸುವ ಕೆಲಸ ಕನ್ನಡ ಹೋರಾಟಗಾರರ ಜತೆಗೂಡಿ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಹೋರಾಟಗಾರರನ್ನು ಅನವಶ್ಯ ಪ್ರಚಾರಗಿಟ್ಟಿಸಿಕೊಳ್ಳುವ ವ್ಯಕ್ತಿಗಳು ಎಂದು ಟ್ವೀಟ್ ಮಾಡಿ ಪ್ರಚಾರ ಗಿಟ್ಟಿಸಿಕೊಂಡಿರುವ ಕಿರಣ್ ಮಜೂಂದಾರ್ ಷಾರವರೇ, ಮುಂದಿನ ದಿನಗಳಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆಗಳಿಗೆ ಕಡಿವಾಣ ಹಾಕಿ @kiranshaw pic.twitter.com/Pt1s86rxnI
— ಕ.ಅ.ಪ್ರಾ. (@kdabengaluru) July 9, 2018
ಆಂಗ್ಲ ಮಾಧ್ಯಮವೊಂದೇ ಬದುಕನ್ನು ಉದ್ಧಾರ ಮಾಡುತ್ತದೆ ಎಂದು ಅರ್ಥೈಸಿಕೊಳ್ಳುವ ನೀವು ಹಳ್ಳಿಗಾಡಿನ ಅಸಹಾಯಕ ಹೆಣ್ಣುಮಕ್ಕಳೊಂದಿಗೆ ಒಂದಷಟು ಕಾಲ ಕಳೆಯಿರಿ ಎಂದು ಶಾಗೆ ತಿರುಗೇಟು ನೀಡಿದ್ದಾರೆ.