ಕೆಐಎಡಿಬಿ ಹಗರಣ: ಮಾಜಿ ಸಚಿವ ಕಟ್ಟಾ ನಾಯ್ಡುಗೆ ಬಿಗ್ ರಿಲೀಫ್
ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ವಿರುದ್ಧ ದಾಖಲಾಗಿದ್ದ ಕೆಐಎಡಿಬಿ ಭೂ ಹಗರಣ ಪ್ರಕರಣಗಳನ್ನು ಹೈಕೋರ್ಟಿನ ಏಕಸದಸ್ಯ ಪೀಠ ಗುರುವಾರ ರದ್ದುಗೊಳಿಸಿದೆ.
ಬೆಂಗಳೂರು, ನವೆಂಬರ್ 03: ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ವಿರುದ್ಧ ದಾಖಲಾಗಿದ್ದ ಕೆಐಎಡಿಬಿ ಭೂ ಹಗರಣ ಪ್ರಕರಣಗಳನ್ನು ಹೈಕೋರ್ಟಿನ ಏಕಸದಸ್ಯ ಪೀಠ ಗುರುವಾರ ರದ್ದುಗೊಳಿಸಿದೆ. ಕಟ್ಟಾ ನಾಯ್ಡು ಅಲ್ಲದೆ ಬಿಜೆಪಿ ಶಾಸಕರಾದ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು ಅವರಿಗೆ ಇದರಿಂದ ರಿಲೀಫ್ ಸಿಕ್ಕಿದೆ.
ಯಲಹಂಕ
ಕ್ಷೇತ್ರದ
ಶಾಸಕ
ವಿಶ್ವನಾಥ್
ಹಾಗೂ
ದಾಸರಹಳ್ಳಿ
ಶಾಸಕ
ಮುನಿರಾಜ್
ವಿರುದ್ಧ
ಕೋರ್ಟ್ನಲ್ಲಿ
ಪ್ರಕರಣ
ದಾಖಲಾಗಿತ್ತು.
ಇದನ್ನು
ಪ್ರಶ್ನಿಸಿ
ಹೈಕೋರ್ಟ್
ಮೆಟ್ಟಿಲೇರಿದ್ದರು
ಎಂದು
ಹೈಕೋರ್ಟ್ನ
ಏಕಸದಸ್ಯ
ಪೀಠ
ಪ್ರಕರಣವನ್ನು
ರದ್ದುಗೊಳಿಸಿದೆ.
ವಿಶ್ವನಾಥ್ ವಿರುದ್ಧ ಭೂಕಬಳಿಕೆ ಹಾಗೂ ಮುನಿರಾಜು ವಿರುದ್ಧ ಖಾಸಗಿ ಜಮೀನು ಒತ್ತುವರಿ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.
ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಪಟ್ಟಂತೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸಚಿವ ಸ್ಥಾನವನ್ನು ಕಳೆದುಕೊಂಡು, ಜೈಲುಪಾಲಾಗಿದ್ದರು. ಆದರೆ,2011ರ ಡಿಸೆಂಬರ್ ನಲ್ಲಿ ಕೆಐಎಡಿಬಿ ಹಗರಣದ ಆರೋಪಿಯಾಗಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕಟ್ಟಾ ಜಗದೀಶ್ ಮತ್ತು ಇಟಸ್ಕಾ ಎಂಡಿ ಶ್ರೀನಿವಾಸ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು.
ಹೈಕೋರ್ಟ್ನ ಏಕಸದಸ್ಯ ಪೀಠ ಬಿಜೆಪಿಯ ಈ ಮೂವರು ಮುಖಂಡರ ವಿರುದ್ಧ ದಾಖಲಾಗಿದ್ದ ಭೂಹಗರಣದ ಪ್ರಕರಣಗಳನ್ನು ರದ್ದುಗೊಳಿಸಿದೆ.