ಕಲಬುರಗಿಯಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ
ಕಲಬುರಗಿ, ಜುಲೈ 06 : ಕಲಬುರಗಿಯಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಪೀಠ ಸ್ಥಾಪನೆ ಬೇಡಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ರಾಜ್ಯ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಕಲಬುರಗಿ
ಜಿಲ್ಲೆಯ
ಚಿತ್ತಾಪುರ
ಪಟ್ಟಣದಲ್ಲಿ
ಹಿರಿಯ
ಸಿವಿಲ್
ಮತ್ತು
ಜೆಎಂಎಫ್ಸಿ
ನ್ಯಾಯಾಲಯ
ಕಟ್ಟಡದ
ಉದ್ಘಾಟನಾ
ಸಮಾರಂಭದಲ್ಲಿ
ಶನಿವಾರ
ಪಾಲ್ಗೊಂಡಿದ್ದ
ಜಯಚಂದ್ರ
ಅವರು,
ಈ
ಕುರಿತು
ಹೇಳಿಕೆ
ನೀಡಿದ್ದಾರೆ.
ಕೆಎಟಿ
ಪೀಠ
ಸ್ಥಾಪನೆ
ಕುರಿತು
ಮುಖ್ಯಮಂತ್ರಿಗಳೊಂದಿಗೆ
ಚರ್ಚೆ
ನಡೆಸಿದ್ದು,
ಅವರು
ಸಕಾರಾತ್ಮಕ
ಸ್ಪಂದನೆ
ನೀಡಿದ್ದಾರೆ
ಎಂದು
ಹೇಳಿದರು.
[ಕಲಬುರಗಿಗೆ
ಕೆಎಟಿ
ಪೀಠ
ಕೊಡಿ]
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ ಸಚಿವರು, ಇದರಿಂದ ವಕೀಲರು ನಡೆಸುತ್ತಿದ್ದ ಹೋರಾಟಕ್ಕೆ ಸ್ಪಂದನೆ ಸಿಕ್ಕಿದಂತಾಗಿದೆ. ಆದ್ದರಿಂದ ಅವರು ತಮ್ಮ ಹೋರಾಟವನ್ನು ಕೈಬಿಡುವಂತೆಯೂ ಮನವಿ ಮಾಡಿದರು.
ಕೆಎಟಿ
ಪೀಠದ
ಜೊತೆಗೆ
ಮೈಸೂರು,
ಬೆಳಗಾವಿ,
ಬೆಂಗಳೂರು
ಮತ್ತು
ಕಲಬುರಗಿಯಲ್ಲಿ
ಸಹಕಾರ,
ಕಂದಾಯ
ಮತ್ತು
ತೆರಿಗೆ
ಟ್ರಿಬ್ಯುನಲ್
ಸಂಚಾರಿ
ಪೀಠಗಳನ್ನು
ಸ್ಥಾಪಿಸಲಾಗುವುದು
ಎಂದು
ಸಚಿವರು
ಭರವಸೆ
ನೀಡಿದರು.
ವಕೀಲರ ಪ್ರತಿಭಟನೆ : ಕೆಲವು ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಪೀಠವನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಕಲಬುರಗಿಯಲ್ಲಿ ಪೀಠ ಸ್ಥಾಪಿಸುವಂತೆ ಒತ್ತಾಯಿಸಿ ವಕೀಲರು ಕಲಬುರಗಿ ಬಂದ್ ನಡೆಸಿದ್ದರು ಮತ್ತು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರು.