ಮಹಿಳಾ ವಿವಿಯ 34 ಸಾವಿರ ಪುಸ್ತಕಗಳು ನೀರುಪಾಲು
ಬಿಜಾಪುರ, ಅ, 14 : ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸುಮಾರು 34 ಸಾವಿರ ಪುಸ್ತಕಗಳು ಮಳೆ ನೀರಿನಲ್ಲಿ ಒದ್ದೆಯಾಗಿವೆ. ಕೆಳ ಮಹಡಿಯಲ್ಲಿದ್ದ ಉಪಯುಕ್ತ ಪುಸ್ತಕಗಳು ಪ್ರಯೋಜನಕ್ಕೆ ಬಾರದಂತಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲದ ರಜಿಸ್ಟ್ರಾರ್ ಎಸ್. ಎ.ಖಾಜಿ ಮತ್ತು ವೈಸ್ ಛಾನ್ಸೆಲರ್ ಮೀನಾ ಚಂದ್ರಶೇಖರ್ ಪುಸ್ತಕಗಳನ್ನು ಒಣಗಿಸಲಾಗಿದೆ. ಯಾವುದೆ ನಷ್ಟ ಉಂಟಾಗಿಲ್ಲ ಎಂದಿದ್ದಾರೆ.[ನಿಮ್ಮ ಇಷ್ಟದ ಪುಸ್ತಕ ಓದಲೊಂದು ತಾಣ]
ಸರ್ಕಾರದ 1 ಕೋಟಿ ರೂಪಾಯಿ ಅನುದಾನದಲ್ಲಿ ಪ್ರಕಟವಾದ ಪುಸ್ತಕಗಳನ್ನು ಕಟ್ಟಡವೊಂದರ ಕೆಳಮಹಡಿಯಲ್ಲಿ ದಾಸ್ತಾನು ಮಾಡಲಾಗಿತ್ತು. ಆಗಸ್ಟ್ 31 ರಂದು ಸುರಿದ ಭೀಕರ ಮಳೆ ಪರಿಣಾಮ ಕೆಳಮಹಡಿಗೆ ನೀರು ನುಗ್ಗಿದ್ದು ಪುಸ್ತಕಗಳು ಹಾಳಾಗಿವೆ. ನಂತರ ತಾರಸಿಯ ಮೇಲೆ ಒಣಗಿಸುವ ಪ್ರಯತ್ನ ಮಾಡಲಾಗಿದೆ ಎಂದು ವಿವಿಯ ಮೂಲಗಳು ಹೇಳುತ್ತವೆ.
ಸಂಗತಿ ರಾಜ್ಯಪಾಲ, ಕುಲಪತಿ ವಜುಭಾಯಿ ರುಡವಾಲಾ ಗಮನಕ್ಕೂ ಹೋಗಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಒಂದು ಸಮಿತಿ ನೇಮಕವೂ ಆಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಜಾಪುರದ ಮಹಿಳಾ ವಿವಿಗೆ 1 ಕೋಟಿ ರೂ. ಅನುದಾನ ನೀಡಿತ್ತು. ಅದನ್ನು ಬಳಸಿಕೊಂಡು ವಿವಿ ಪುಸ್ತಕ ಪ್ರಕಟ ಮಾಡಿತ್ತು. ಆದರೆ ಸರಿಯಾದ ನಿರ್ವಹಣೆಯಿಲ್ಲದೇ ಎಲ್ಲ ಪುಸ್ತಗಳು ನೀರು ಪಾಲಾಗಿವೆ.[ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ]
40 ಲ್ಷ ರೂ ಮೌಲ್ಯದ ಪುಸ್ತಕಗಳು ಉಪಯೋಗಕ್ಕೆ ಬರುವುದು ಅನುಮಾನ. ಡಾ. ಜಯಶ್ರೀ ನೇತೃತ್ವದ ಸಮಿತಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದು ಆಡಳಿತ ಮಂಡಳಿಗೆ ಸ್ಪಷ್ಟನೆ ಕೇಳಿ ಈಗಾಗಲೇ ನೋಟಿಸ್ ಜಾರಿ ಮಾಡಿದೆ.