ಕರ್ನಾಟಕಕ್ಕೆ ಶಾಕ್ ನೀಡಿದ ಎಂಸಿಐ:1,200 ಮೆಡಿಕಲ್ ಸೀಟ್ ಖೋತಾ
ಬೆಂಗಳೂರು, ಜೂನ್ 7: ಭಾರತೀಯ ವೈದ್ಯಕೀಯ ಮಂಡಳಿ ಮಾನ್ಯತೆ ನೀಡದಿರುವುದರಿಂದ ಈ ಶೈಕ್ಷಿಣಿಕ ವರ್ಷದಲ್ಲಿ ರಾಜ್ಯಕ್ಕೆ 1200 ಪದವಿ ಕೋರ್ಸ್ ವೈದ್ಯ ಸೀಟು ಕೈತಪ್ಪುವ ಸಾಧ್ಯತೆ ಇದೆ. ಇದು ವೈದ್ಯ ಕೋರ್ಸ್ ಪ್ರವೇಶ ನಿರೀಕ್ಷೆಯಲ್ಲಿರುವವರಿಗೆ ಆತಂಕ ಉಂಟುಮಾಡಿದೆ.
ರಾಜ್ಯದಲ್ಲಿ ಒಟ್ಟು 8 ಹೊಸ ವೈದ್ಯಕೀಯ ಕಾಲೇಜುಗಳಿಗೆ ಮಂಡಳಿ ಮಾನ್ಯತೆ ನೀಡಿಲ್ಲ, ಇನ್ನೂ ಎಂಟು ಹಳೆಯ ಕಾಲೇಜುಗಳಿಗೆ ಮಾನ್ಯತೆ ನವೀಕರಿಸಿಲ್ಲ, ಈ ಕಾರಣದಿಂದ ಇಷ್ಟು ಸೀಟುಗಳು ಕೈತಪ್ಪಲಿವೆ ಎಂದು ಎಂಸಿಐ ಮೂಲಗಳ ಪ್ರಕಾರ ತಿಳಿದುಬಂದಿದೆ.
ದಾಖಲಾತಿ ಕಡಿಮೆ ಆದರೆ ಶಿಕ್ಷಕರಿಗೆ ಶಿಕ್ಷೆ: ಶಿಕ್ಷಣ ಇಲಾಖೆ ಎಚ್ಚರಿಕೆ
ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೂ ಮಂಡಳಿ ಮಾನ್ಯತೆ ನವೀಕರಿಸಿಲ್ಲ, ಮೂಲ ಸೌಕರ್ಯಗಳ ಕೊರತೆ ಹಾಗೂ ಪ್ರಾಧ್ಯಾಪಕರ ನೇಮಕ ವಿಳಂಬದಿಂದ ಈ ಸಂಸ್ಥೆಗೆ ಮಾನ್ಯತೆ ಸಿಗದಿರಲು ಕಾರಣ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಚಿಕ್ಕಮಗಳೂರು ವೈದ್ಯ ಕಾಲೇಜು, ಬಾಗಲಕೋಟೆ, ಚಿತ್ರದುರ್ಗ, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯ ಕಾಲೇಜಿಗೆ ಮಾನ್ಯತೆ ನೀಡಬೇಕೆಂಬ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಅನುಮತಿ ಸಿಕ್ಕಿಲ್ಲ.
ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಂತೆ ಸರ್ಕಾರಿ ವೈದ್ಯ ಕಾಳೇಜುಗಳಾಗಿದ್ದು ಈ ಕಾಲೇಜುಗಳಲ್ಲಿ ತಲಾ 150 ಸೀಟುಗಳು ಲಭ್ಯವಾಗಲಿವೆ ಎಂದಬ ನಿರೀಕ್ಷೆ ಇತ್ತು. ಖಾಸಗಿ ಸೇರಿ ಈ ವರ್ಷ ಎಂಟು ಹೊಸ ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡದ ಎಂಸಿಐನ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ನ ಮೆಟ್ಟಿಲೇರುವುದಾಗಿ ಸರ್ಕಾರ ತಿಳಿಸಿದೆ.
ಭಾರತೀಯ ವೈದ್ಯಕೀಯ ಮಂಡಳಿ ಮೊದಲೇ ಎಚ್ಚರಿಸಿದ್ದರೂಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸದಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಕ್ರಮಕ್ಕೆ ಸರ್ಕಾರ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.