ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ: ಜಿಲ್ಲೆಗಳ ಅಪ್ ಡೇಟ್ಸ್
ಕರ್ನಾಟಕ, ಜೂನ್ 25: ಕೊರೊನಾ ವೈರಸ್ ಭೀತಿಯ ನಡುವೆಯೂ ಗುರವಾರದಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಒಟ್ಟು 8,48,203 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಒಟ್ಟು 2879 ಪರೀಕ್ಷೆ ಕೇಂದ್ರಗಳಿವೆ. ಒಂದು ಹಾಲ್ನಲ್ಲಿ ಕೇವಲ 18 ವಿದ್ಯಾರ್ಥಿಗಳು ಮಾತ್ರ ಬರೆಯಲಿದ್ದು, ಪ್ರತಿಯೊಬ್ವರೂ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಬೇಕಿದೆ. ಎಲ್ಲರ ತಾಪಮಾನ ಪರೀಕ್ಷೆ ಮಾಡಲಾಗುತ್ತೆ, ಹೆಚ್ಚು ತಾಪಮಾನ ಇದ್ರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ತೀರ್ಮಾನಿಸಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಕುರಿತು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಕುರಿತು ಕುಮಾರಸ್ವಾಮಿ ಕೊನೆಯ ಎಚ್ಚರಿಕೆ
""ಪರೀಕ್ಷಾ ಅಕ್ರಮಗಳನ್ನು ತಡೆಯಲು ಬಿಗಿ ಕ್ರಮಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರಗಳಲ್ಲಿ ದಟ್ಡಣೆ ತಡೆಯಲು, ದಟ್ಟಣೆ ಆಗದಂತೆ ತಡೆಯಲು ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮಕ್ಕಳ ನಡುವೆ ನೂಕು ನುಗ್ಗಲು ಆಗದಂತೆ ನೋಡಿಕೊಳ್ಳಬೇಕಿದೆ. ಎಲ್ಲರೂ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಲು ನಿಗಾ ಇಡ್ತೇವೆ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಎಸ್ಎಸ್ಎಲ್ಸಿ ಪರೀಕ್ಷಾ ಮಾಹಿತಿ ಇಲ್ಲಿದೆ.
ಕೋಲಾರ ಜಿಲ್ಲಾ ವರದಿ
ಕೋಲಾರ ಜಿಲ್ಲೆಯಲ್ಲಿ ಒಟ್ಟು 20,906 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರಿಯುತ್ತಿದ್ದು, ಜಿಲ್ಲೆಯಲ್ಲಿ 70 ಪರೀಕ್ಷಾ ಕೇಂದ್ರಗಳಿವೆ. ಬಂಗಾರಪೇಟೆ 11, ಕೆಜಿಎಫ್ 9, ಕೋಲಾರ 17, ಮಾಲೂರು 9, ಮುಳಬಾಗಿಲು 11, ಶ್ರೀನಿವಾಸಪುರದಲ್ಲಿ 13 ಪರೀಕ್ಷಾ ಕೇಂದ್ರಗಳಿವೆ. ವಿದ್ಯಾರ್ಥಿಗಳಿಗಾಗಿ 150 KSRTC ಬಸ್ ಗಳನ್ನು ಬಿಡಲಾಗುತ್ತಿದ್ದು, ಜೊತೆಗೆ ಖಾಸಗಿ ಶಾಲೆ ಬಸ್ ಗಳನ್ನು ಸಹ ಬಳಕೆ ಮಾಡಲಾಗುತ್ತಿದೆ.
70 ಪರೀಕ್ಷಾ ಕೇಂದ್ರಗಳಿಗೂ ಸ್ಯಾನಿಟೈಸರ್ ಸಿಂಪಡಣೆ ಆಗಿದೆ. ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಖಾಸಗಿ ಬಸ್ ನ ವ್ಯವಸ್ಥೆ ಮಾಡಲಾಗಿದೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ಪ್ರವೇಶ ಮಾಡಿದಾಗಿನಿಂದ, ಪರೀಕ್ಷೆ ಬರೆದು ಹೊರ ಹೋಗುವವರೆಗೂ ಹಂತ ಹಂತವಾಗಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ವಿದ್ಯಾರ್ಥಿಗಳು ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ, ಸಾಮಾಜಿಕ ಅಂತರದ ಬಾಕ್ಸ್ನಲ್ಲಿ ನಿಲ್ಲಬೇಕು. ನಂತರ ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು. ಥರ್ಮಲ್ ಸ್ಕ್ರೀನಿಂಗ್ ಮಾಡಿ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು.
ಹೊರ ರಾಜ್ಯದ ಜಿಲ್ಲೆಯ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ ನೀಡಿದೆ. ಕಂಟೈನ್ಮೆಂಟ್ ಜೋನ್ ನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಬೀದರ್ ಜಿಲ್ಲಾ ವರದಿ
ಗುರುವಾರದಿಂದ ಗಡಿ ಜಿಲ್ಲೆ ಬೀದರ್ ನಲ್ಲಿ ಮಹಾಮಾರಿ ಕೊರೊನಾ ವೈರಸ್ ಮಧ್ಯೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಜಿಲ್ಲೆಯ 99 ಪರೀಕ್ಷಾ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯಲ್ಲಿ ಜಿಲ್ಲೆಯ 26,882 ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.
ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಒಟ್ಟು 523 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಶಿಕ್ಷಣ ಇಲಾಖೆ ಎರಡು ಸಲ ಸ್ಯಾನಿಟೈಸರ್ ಮಾಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೆಶಕ ಚಂದ್ರಶೇಖರ್ ಹೇಳಿದ್ದಾರೆ.SSLC ಪರೀಕ್ಷೆ ಸುದ್ದಿಗೋಷ್ಠಿ: ವಿದ್ಯಾರ್ಥಿಗಳು ತಿಳಿಯಬೇಕಾದ ವಿಷಯಗಳು
ಉಡುಪಿ ಜಿಲ್ಲಾ ವರದಿ
ಉಡುಪಿ ಜಿಲ್ಲೆಯಲ್ಲಿ 51 ಪರೀಕ್ಷಾ ಕೇಂದ್ರ ಗಳಿದ್ದು, ಜಿಲ್ಲೆಯಲ್ಲಿ ಈ ಬಾರಿ 14 ಸಾವಿರದ 34 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರದಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳ ಸಂಖ್ಯೆ 04.
ಕ್ವಾರಂಟೈನ್ ಕೇಂದ್ರದಿಂದ ತೆರಳುವ ಮಕ್ಕಳಿಗೆ ವಿಶೇಷ ವಾಹನ ಹಾಗೂ ವಿಶೇಷ ಕೋಣೆಯ ವ್ಯವಸ್ಥೆಯಿರುತ್ತದೆ. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಯಿಂದ 82 ಬಸ್ ಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದ್ದು, ಹೊರ ಜಿಲ್ಲೆಯಿಂದ 82 ಮಕ್ಕಳು ಪರೀಕ್ಷೆ ಬರೆಯಲು ಬರುತ್ತಿದ್ದಾರೆ. ಹೊರ ಜಿಲ್ಲೆಗೆ ಉಡುಪಿಯಿಂದ 589 ಮಕ್ಕಳು ಪರೀಕ್ಷೆ ಬರೆಯಲು ತೆರಳುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಯಾವುದೇ ಕ್ವಾರಂಟೈನ್ ಕೇಂದ್ರಗಳನ್ನು ಪರೀಕ್ಷಾ ಕೇಂದ್ರಗಳಾಗಿ ಮಾಡಲಾಗಿಲ್ಲ.
ಮೈಸೂರು ಜಿಲ್ಲಾ ವರದಿ
ಎಸ್ಎಸ್ಎಲ್ಸಿ ಪರೀಕ್ಷೆ ಇಂದಿನಿಂದ ಆರಂಭವಾದ ಹಿನ್ನೆಲೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಅವಿಲಾ ಕಾನ್ವೆಂಟ್ ಪರೀಕ್ಷಾ ಕೇಂದ್ರದಿಂದ ಮಹಾರಾಣಿ ಪ್ರೌಢ ಶಿಕ್ಷಣ ಶಾಲೆಗೆ ಶಿಫ್ಟ್ ಆಗಿದೆ.
ಮಾಹಾರಾಣಿ ಶಾಲೆಯಲ್ಲಿ 298 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೊರೊನಾ ವೈರಸ್ ಸೋಂಕು ಹಿನ್ನೆಲೆ ಕೃಷ್ಣವಿಲಾಸ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸೀಲ್ ಡೌನ್ ಪ್ರದೇಶದ ಬಳಿಯೇ ಅವಿಲಾ ಕಾನ್ವೆಂಟ್ ಶಾಲೆ ಇತ್ತು.
15 ಕೊಠಡಿಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ದತೆ ಮಡಿಕೊಂಡಿದ್ದು, ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಬೆಳಿಗ್ಗೆ 10.30 ಕ್ಕೆ ಪರೀಕ್ಷೆ ಆರಂಭವಾಗಲಿದೆ. ಸ್ಯಾನಿಟೈಸೇಷನ್ ಗೆ ಆದ್ಯತೆ ನೀಡಲಾಗಿದ್ದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಮನವಿ ಮಾಡಿದೆ.
ದಾವಣಗೆರೆ ಜಿಲ್ಲಾ ವರದಿ
ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ ದಾವಣಗೆರೆಯ ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ದತೆ ಮಾಡಿಕೊಂಡಿದೆ. ದಾವಣಗೆರೆ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಪರೀಕ್ಷೆಗಳು ನಡೆಯಲಿವೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಬ್ಯಾರಿಕೇಡ್ ಗಳನ್ನು ಹಾಕಿ ಸಾಲಾಗಿ ಹೋಗುವಂತೆ ಶಾಲೆ ಸಿಬ್ಬಂದಿ ವ್ಯವಸ್ಥೆ ಮಾಡಿದೆ. ಜಿಲ್ಲೆಯಲ್ಲಿ 93 ಪರೀಕ್ಷಾ ಕೇಂದ್ರಗಳಿದ್ದು, 21,683 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯ 1,242 ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.ಕಂಟೈನ್ಮೆಂಟ್ ವಲಯಗಳಿಂದ 96 ವಿದ್ಯಾರ್ಥಿಗಳು ಬರುತ್ತಿದ್ದು, ಕಂಟೈನ್ಮೆಂಟ್ ವಲಯಗಳಲ್ಲಿ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೇಜರ್ ವ್ಯವಸ್ಥೆ ಇರುತ್ತದೆ.
ರಾಯಚೂರು ಜಿಲ್ಲಾ ವರದಿ
ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ ರಾಯಚೂರು ಜಿಲ್ಲೆಯ ಒಟ್ಟು 77 ಕೇಂದ್ರಗಳಲ್ಲಿ 40,413 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 271 ವಿದ್ಯಾರ್ಥಿಗಳು ಹೊರ ಜಿಲ್ಲೆಯವರು, 486 ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯಲ್ಲಿ ತೆಲಂಗಾಣದಿಂದ 4 ಹಾಗೂ ರಾಜಸ್ತಾನದಿಂದ 2 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಕಂಟೈನ್ಮೆಂಟ್ ಝೋನ್ ನಿಂದ 3 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಈ ಮೊದಲು 11,671 ಕೊಠಡಿಗಳಿದ್ದವು, ಈಗ ಹೆಚ್ಚುವರಿಯಾಗಿ 350 ಕೊಠಡಿಗಳನ್ನು ಸಿದ್ಧಪಡಿಸಿದ್ದಾರೆ.
ಹೊರರಾಜ್ಯ ಹಾಗೂ ಕಂಟೈನ್ಮೆಂಟ್ ಝೋನ್ ನಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಮಾಡಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳ ಸಾಮಾಜಿಕ ಅಂತರಕ್ಕಾಗಿ ಮಾರ್ಕ್ ಮಾಡಲಾಗಿದೆ.
ಥರ್ಮಲ್ ಸ್ಕಾನರ್, ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷೆಯು ಸಕಲ ಸಿದ್ಧವಾಗಿದ್ದು, ವಿದ್ಯಾರ್ಥಿಗಳು, ಪಾಲಕರು ಭಯವಿಲ್ಲದೆ ಪರೀಕ್ಷೆ ಬರೆಯಬೇಕು ಎಂದು ರಾಯಚೂರು ಡಿಡಿಪಿಐ ಬಿ.ಹೆಚ್ ಗೋನಾಳ ಮಾಹಿತಿ ನೀಡಿದರು.
ಮಂಡ್ಯ ಜಿಲ್ಲಾ ವರದಿ
ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಇರುವ ಹಿನ್ನೆಲೆ ಮಂಡ್ಯದಲ್ಲೂ ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿದೆ. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮದೊಂದಿಗೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯು ಜಿಲ್ಲೆಯ 82 ಕೇಂದ್ರಗಳಲ್ಲಿ ನಡೆಯಲಿದೆ.
ಜಿಲ್ಲೆಯಲ್ಲಿ ಒಟ್ಟು 21260, ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಪರೀಕ್ಷೆಯಲ್ಲಿ 11,099 ಗಂಡು ಮಕ್ಕಳು ಹಾಗೂ 10,161 ಹೆಣ್ಣು ಮಕ್ಕಳು ಹಾಜರಾಗಲಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಉಚಿತ KSRTC ಬಸ್ ನ ವಾಹನದ ವ್ಯವಸ್ಥೆ, ಪರೀಕ್ಷಾ ಕೇಂದ್ರಗಳಲ್ಲಿ ಬಳಿ ತಪಾಸಣೆ ಕೇಂದ್ರ, ವೈದ್ಯರ ತಂಡ ನೇಮಕ ಹಾಗೂ ಪೋಲಿಸರ ನಿಯೋಜನೆಗೊಳಿಸಿ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಬಳಿ ನಿಷೇಧಾಜ್ಞೆ ಹೇರಲಾಗಿದೆ.
ಯಾದಗಿರಿ ಜಿಲ್ಲಾ ವರದಿ
ಇಂದು
ಎಸ್ಎಸ್ಎಲ್ಸಿ
ಪರೀಕ್ಷೆ
ಹಿನ್ನೆಲೆ
ಯಾದಗಿರಿ
ಜಿಲ್ಲೆಯಲ್ಲಿ
59
ಪರೀಕ್ಷಾ
ಕೇಂದ್ರಗಳಲ್ಲಿ
ಸೋಡಿಯಂ
ಹೈಪೋಕ್ಲೋರೈಡ್
ಬಳಸಿ
ಸ್ಯಾನಿಟೈಸ್
ಮಾಡಲಾಗಿದೆ.
52
ಮುಖ್ಯ
ಪರೀಕ್ಷಾ
ಕೇಂದ್ರಗಳು
ಮತ್ತು
7
ಉಪ
ಪರೀಕ್ಷಾ
ಕೇಂದ್ರಗಳನ್ನು
ರಚಿಸಲಾಗಿದೆ.
ಒಟ್ಟು
870
ಪರೀಕ್ಷಾ
ಕೊಠಡಿಗಳನ್ನು
ಸಿದ್ಧಪಡಿಸಿಕೊಳ್ಳಲಾಗಿದೆ.
ಶಹಾಪುರ
ತಾಲೂಕಿನ
5,007
ವಿದ್ಯಾರ್ಥಿಗಳು,
ಸುರಪುರ
ತಾಲೂಕಿನ
5,837,
ಯಾದಗಿರಿ
ತಾಲೂಕಿನ
6,552
ವಿದ್ಯಾರ್ಥಿಗಳು
ಸೇರಿದಂತೆ
ಒಟ್ಟು
17,396
ಮಕ್ಕಳು
ಪರೀಕ್ಷೆ
ಬರೆಯಲಿದ್ದಾರೆ.
ವಿದ್ಯಾರ್ಥಿಗಳಿಗೆ
ಕೆಸ್ಆರ್ಟಿಸಿ
ವತಿಯಿಂದ
50
ಬಸ್
ಗಳ
ವ್ಯವಸ್ಥೆ
ಮಾಡಲಾಗಿದೆ
ಎಂದು
ಯಾದಗಿರಿ
ಜಿಲ್ಲಾಧಿಕಾರಿ
ಎಮ್.
ಕೂರ್ಮಾರಾವ್
ಮಾಹಿತಿ
ನೀಡಿದ್ದಾರೆ.
ತುಮಕೂರು ಜಿಲ್ಲಾ ವರದಿ
ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ ತುಮಕೂರು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೈಕ್ಷಣಿಕವಾಗಿ ತುಮಕೂರು ಮತ್ತು ಮಧುಗಿರಿ ಎರಡು ಜಿಲ್ಲೆಗಳನ್ನು ಹೊಂದಿದೆ.
ಒಟ್ಟು 144 ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದ್ದು, 37,306 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತುಮಕೂರು ಶೈಕ್ಷಣಿಕ ಜಿಲ್ಲೆಯಿಂದ 23,783 ವಿದ್ಯಾರ್ಥಿಗಳು, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 13,523 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಚಾಮರಾಜನಗರ ಜಿಲ್ಲಾ ವರದಿ
ಎಸ್ಎಸ್ಎಲ್ಸಿ ಪರೀಕ್ಷೆಗೆ ಚಾಮರಾಜನಗರ ಜಿಲ್ಲಾಡಳಿತ ಸಜ್ಜುಗೊಂಡಿದ್ದು, ಪರ-ವಿರೋಧದ ನಡುವೆಯೇ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ.
ವಿದ್ಯಾರ್ಥಿಗಳಿಗೆ ಪಠ್ಯ ಪರೀಕ್ಷೆಯಾದರೆ, ಜಿಲ್ಲಾಡಳಿತಕ್ಕೆ ಇದು ಸತ್ವ ಪರೀಕ್ಷೆಯಾಗಿದೆ. ಈ ಬಾರಿ ಒಟ್ಟು 54 ಪರೀಕ್ಷಾ ಕೇಂದ್ರಗಳಿರಲಿದ್ದು, ಹೊರ ರಾಜ್ಯದಲ್ಲಿ ಸಿಲುಕಿದ್ದ ನಾಲ್ವರು ಮತ್ತು ಹೊರ ಜಿಲ್ಲೆಗಳ 41 ಮಂದಿ ಸೇರಿದಂತೆ 11,839 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 10,806 ಹೊಸ ವಿದ್ಯಾರ್ಥಿಗಳು, 629 ಪುನಾರವರ್ತಿತ, 247 ಖಾಸಗಿ ಹಾಗೂ 81 ವಿದ್ಯಾರ್ಥಿಗಳು ವಿಶೇಷ ಚೇತನರಿದ್ದಾರೆ.
ಬೆಳಗಾವಿ ಜಿಲ್ಲಾ ವರದಿ
ಇಂದಿನಿಂದ
ಎಸ್ಎಸ್ಎಲ್ಸಿ
ಪರೀಕ್ಷೆ
ಹಿನ್ನೆಲೆ
ವಿದ್ಯಾರ್ಥಿಗಳಿಗೆ
ಬೆಳಗಾವಿ
ಜಿಲ್ಲಾಡಳಿತ
ಸಕಲ
ವ್ಯವಸ್ಥೆ
ಮಾಡಿದೆ.
ಬೆಳಗಾವಿ
ಹಾಗೂ
ಚಿಕ್ಕೋಡಿ
ಶೈಕ್ಷಣಿಕ
ಜಿಲ್ಲೆಗಳಲ್ಲೂ
ಸಕಲ
ಸಿದ್ಧತೆ
ಮಾಡಿಕೊಂಡಿದೆ.
ಬೆಳಗಾವಿ
ಶೈಕ್ಷಣಿಕ
ಜಿಲ್ಲೆಯ
7
ವಲಯಗಳಲ್ಲಿ
124
ಕೇಂದ್ರಗಳಿದ್ದು,
36,327
ವಿದ್ಯಾರ್ಥಿಗಳು
ಪರೀಕ್ಷೆ
ಬರೆಯಲಿದ್ದಾರೆ.
ನಕಲು
ತಡೆಯುವ
ದೃಷ್ಟಿಯಿಂದ
ಎಲ್ಲ
ಕೇಂದ್ರಗಳಲ್ಲೂ
ಸಿಸಿಟಿವಿ
ಕ್ಯಾಮೆರಾಗಳನ್ನು
ಅಳವಡಿಕೆ
ಮಾಡಲಾಗಿದೆ.
|
124
ಸ್ಥಾನಿಕ
ಜಾಗೃತ
ದಳಗಳು,
104
ಮುಖ್ಯ
ಸೂಪರಿಂಟೆಂಡೆಂಟ್
ಗಳು,
30
ಉಪ
ಮುಖ್ಯ
ಸೂಪರಿಂಟೆಂಡೆಂಟ್
ಗಳು,
1,923
ಕೊಠಡಿ
ಮೇಲ್ವಿಚಾರಕರು,
44
ಮಾರ್ಗಾಧಿಕಾರಿಗಳು
ಹಾಗೂ
65
ಜಿಲ್ಲಾಮಟ್ಟದ
ವೀಕ್ಷಕರನ್ನು
ಶಿಕ್ಷಣ
ಇಲಾಖೆ
ನೇಮಿಸಿದೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 58 ವಿದ್ಯಾರ್ಥಿಗಳು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಿಂದ ಬಂದವರಾಗಿದ್ದಾರೆ. ಇವರಲ್ಲಿ 44 ವಿದ್ಯಾರ್ಥಿಗಳು ಬೆಳಗಾವಿ ತಾಲ್ಲೂಕು, 3 ಕಿತ್ತೂರು ಹಾಗೂ 11 ವಿದ್ಯಾರ್ಥಿಗಳು ಸವದತ್ತಿ ತಾಲ್ಲೂಕಿನವರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಒಬ್ಬ ಸೋಂಕಿತ ವಿದ್ಯಾರ್ಥಿ ಹಾಗೂ ಕ್ವಾರಂಟೈನ್ ನಲ್ಲಿರುವ ಇಬ್ಬರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಶಿಕ್ಷಣ ಇಲಾಖೆ ಅವಕಾಶ ನೀಡಿಲ್ಲ.
ಹಾವೇರಿ ಜಿಲ್ಲಾ ವರದಿ
ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾವೇರಿ ಜಿಲ್ಲೆಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಹಾವೇರಿ ಜಿಲ್ಲೆಯಲ್ಲಿ 75 ಮುಖ್ಯ ಪರೀಕ್ಷಾ ಕೇಂದ್ರ ಹಾಗೂ 15 ಉಪ ಪರೀಕ್ಷಾ ಕೇಂದ್ರಗಳಿವೆ. 22,511 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಬಾಕ್ಸ್ ನಿರ್ಮಾಣ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗಿದೆ. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲು ಥರ್ಮಲ್ ಸ್ಕ್ರೀನಿಂಗ್, ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ ಮಾಡಿದೆ.
ಶಿಕ್ಷಣ ಇಲಾಖೆಯು 81 ಸರ್ಕಾರಿ ಬಸ್, 69 ಖಾಸಗಿ ವಾಹನ ಬುಕ್ ಮಾಡಿದೆ. ಕಂಟೈನ್ಮೆಂಟ್ ಝೋನ್ ನಿಂದ ಬರುವ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಇದ್ದು, ಓರ್ವ ಕೊರೊನಾ ವೈರಸ್ ಸೋಂಕಿತ ವಿದ್ಯಾರ್ಥಿನಿ ಪರೀಕ್ಷೆಯಿಂದ ದೂರ ಉಳಿಯಲಿದ್ದಾಳೆ.
ಚಿತ್ರದುರ್ಗ ಜಿಲ್ಲಾ ವರದಿ
ಎಸ್ಎಸ್ಎಲ್ಸಿ ಪರೀಕ್ಷೆಗೆ ಚಿತ್ರದುರ್ಗ ಜಿಲ್ಲಾ ಶಿಕ್ಷಣ ಇಲಾಖೆಯು ಸಜ್ಜಾಗಿದ್ದು, ಜಿಲ್ಲೆಯಲ್ಲಿ ಒಟ್ಟು 22,615 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು 379 ವಲಸೆ ವಿದ್ಯಾರ್ಥಿಗಳು ಅನುಮತಿ ಪಡೆದಿರುತ್ತಾರೆ. ಬೇರೆ ರಾಜ್ಯದಿಂದ ಬಂದಿರುವ 27 ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕೊಠಡಿ ಮತ್ತು ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ 87 ಪರೀಕ್ಷಾ ಕೇಂದ್ರಗಳಿದ್ದು, ಹೆಚ್ಚುವರಿಯಾಗಿ 12 ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗಾಗಿ 197 ಖಾಸಗಿ ಬಸ್ ಗಳಿವೆ. 215 ಮಾರ್ಗಗಳಲ್ಲಿ ವಾಹನಗಳು ಸಂಚರಿಸಲಿವೆ.ಪ್ರತೀ ವಿದ್ಯಾರ್ಥಿಗೆ 2 ಮಾಸ್ಕ್ ಮತ್ತು ಸ್ಯಾನಿಟೈಜರ್ ವ್ಯವಸ್ಥೆ ಇದ್ದು, ಪರೀಕ್ಷಾ ಕೇಂದ್ರಗಳ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ವ್ಯವಸ್ಥೆ ಮಾಡಲಾಗಿದೆ.
ನಗರಸಭೆ
ಸೇರಿದಂತೆ
ಸ್ಥಳೀಯ
ಸಂಸ್ಥೆಗಳ
ಮೂಲಕ
ಪರೀಕ್ಷಾ
ಕೊಠಡಿಗಳಿಗೆ
ಸ್ಯಾನಿಟೈಸೇಷನ್
ಮಾಡಿದ್ದು,
200
ವಿದ್ಯಾರ್ಥಿಗಳಿಗೆ
ಒಂದರಂತೆ
ಆರೋಗ್ಯ
ತಪಾಸಣಾ
ಕೌಂಟರ್
ತೆರೆಯಲಾಗಿದೆ.
ಪರೀಕ್ಷೆ
ಮುಗಿಯುವವರೆಗೆ
ಆರೋಗ್ಯ
ಸಿಬ್ಬಂದಿಗಳನ್ನು
ನಿಯೋಜನೆ
ಮಾಡಲಾಗಿದೆ.
ಅನಾರೋಗ್ಯದಿಂದ
ಬಳಲುತ್ತಿರುವ
ವಿದ್ಯಾರ್ಥಿಗಳಿಗೆ
N95
ಮಾಸ್ಕ್
ವಿತರಣೆ
ವ್ಯವಸ್ಥೆ
ಇದೆ.
ಪರೀಕ್ಷೆಗೆ
ಬರುವ
ವಿದ್ಯಾರ್ಥಿಗಳಿಗೆ
ಥರ್ಮಲ್
ಸ್ಕ್ರೀನಿಂಗ್
ಮಾಡಿ
ಪ್ರವೇಶಕ್ಕೆ
ಅವಕಾಶ
ನೀಡಲಾಗುತ್ತದೆ.
ಪರೀಕ್ಷಾ
ಕೇಂದ್ರದ
ಬಳಿ
ಪೋಷಕರು
100
ಮೀಟರ್
ಅಂತರ
ಕಾಯ್ದುಕೊಳ್ಳಲು
ಸೂಚಿಸಿದ್ದು,
ವಿದ್ಯಾರ್ಥಿಗಳು
ಸಾಮಾಜಿಕ
ಅಂತರ
ಕಾಪಾಡಿಕೊಳ್ಳಲು
ಶಿಕ್ಷಣ
ಇಲಾಖೆ
ಮಾರ್ಕಿಂಗ್
ಮಾಡಿದೆ.