"ಎಸ್ಸೆಸ್ಸೆಲ್ಸಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ"
ಬೆಂಗಳೂರು, ಏಪ್ರಿಲ್, 01: ಒಂದೆಡೆ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಗೊಂದಲ ತಾರಕಕ್ಕೆ ಏರಿದ್ದರೆ ಇನ್ನೊಂದೆಡೆ ಎಸ್ ಎಸ್ ಎಲ್ ಸಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿವೆ ಎಂಬ ವದಂತಿಗಳು ಎದ್ದಿವೆ.
ಆದರೆ ಈ ಬಗ್ಗೆ ಸ್ಷಷ್ಟನೆ ನೀಡಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ, ವಿದ್ಯಾರ್ಥಿಗಳು ಇಂಥ ವದಂತಿಗಳಿಗೆ ಕಿವಿ ಕೊಡಬಾರದು. ಯಾವ ಪತ್ರಿಕೆಗಳು ಸೋರಿಕೆಯಾಗಿಲ್ಲ ಎಂದು ತಿಳಿಸಿದ್ದಾರೆ.[ದ್ವೇಷಕ್ಕಾಗಿ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ?]
ವಿದ್ಯಾರ್ಥಿಗಳು ವಾಟ್ಸಪ್ ಸಂದೇಶಗಳ ಕಡೆ ಗಮನ ಹರಿಸಬಾರದು. ಪರೀಕ್ಷೆ ಮತ್ತು ಓದಿನ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಪಿಯುಸಿ ಪತ್ರಿಕೆ ವಾಟ್ಸಪ್ ನಲ್ಲಿ ಹರಿದಾಡಿತ್ತು ಎಂಬ ಕಾರಣಕ್ಕೆ ಪರೀಕ್ಷೆ ರದ್ದು ಮಾಡಲಾಗಿತ್ತು.
ಎಸ್
ಎಸ್
ಎಲ್
ಸಿ
ಪರೀಕ್ಷೆಗಳು
ಮಾರ್ಚ್
30
ರಿಂದ
ಆರಂಭವಾಗಿದ್ದು
ಏಪ್ರಿಲ್
13ರವರೆಗೆ
ನಡೆಯಲಿವೆ.
ಸುಮಾರು
8
ಲಕ್ಷ
ವಿದ್ಯಾರ್ಥಿಗಳು
ಈ
ಸಾರಿ
ಪರೀಕ್ಷೆ
ಬರೆಯುತ್ತಿದ್ದಾರೆ.
ಎಸ್
ಎಸ್
ಎಲ್
ಸಿ
ಪರೀಕ್ಷಾ
ವೇಳಾಪಟ್ಟಿ
ಇಲ್ಲಿದೆ..