ರಾಜ್ಯದಲ್ಲಿ ತುಂಬಿ ಹರಿಯುತ್ತಿರುವ ನದಿಗಳು: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು, ಆಗಸ್ಟ್ 8: ರಾಜ್ಯಾದ್ಯಂತ ಎಡಬಿಡದೆ ಮಳೆ ಸುರಿಯುತ್ತಿದ್ದು, ಬಹುತೇಕ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಜಲಾಶಯಗಳಿಗೆ ದಾಖಲೆಯ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಬಹುತೇಕ ಎಲ್ಲಾ ಜಲಾಶಗಳು ಭರ್ತಿಯಾಗಿವೆ, ಹೆಚ್ಚುವರಿ ನೀರನ್ನು ನದಿಗಳಿಗೆ ಹರಿಸಲಾಗುತ್ತಿದ್ದು ಹಲವು ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ.
ಕರ್ನಾಟಕದ ಹಲವು ಭಾಗಗಳಲ್ಲಿ ವಿಶೇಷವಾಗಿ ತುಂಗಾ ಮತ್ತು ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಮತ್ತು ವಿಜಯನಗರ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ನೀರಿನ ಒಳಹರಿವು ಹಿನ್ನೆಲೆಯಲ್ಲಿ ತುಂಗಭದ್ರಾ ಅಣೆಕಟ್ಟಿನಿಂದ ಕನಿಷ್ಠ 100,000 ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗಿದೆ.
1,633 ಅಡಿ ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಅಣೆಕಟ್ಟಿನಲ್ಲಿ ಈಗಾಗಲೇ ನೀರಿನ ಮಟ್ಟ 1,631 ಅಡಿ ತಲುಪಿದೆ. ನೀರಿನ ಮಟ್ಟದಲ್ಲಿ ಸಮತೋಲನ ಕಾಯ್ದುಕೊಳ್ಳಲು ಒಂದು ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದ್ದು, ತುಂಗಭದ್ರಾ ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ನದಿ ಹರಿಯುವ ಪ್ರದೇಶದಲ್ಲಿರುವ ಸ್ಥಳೀಯರಿಗೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಭಾನುವಾರ ಕೂಡ ಮೋಡ ಕವಿದ ವಾತಾವರಣವಿತ್ತು. ಅಲ್ಲಲ್ಲಿ ಚದುರಿದ ಮಳೆಯಾಗಿದೆ. ಸೋಮವಾರ ಕೂಡ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರಿ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ನದಿಗಳು
33 ದ್ವಾರಗಳ ಪೈಕಿ 30 ಗೇಟ್ಗಳನ್ನು ಭಾನುವಾರ ತೆರೆಯಲಾಗಿದ್ದು, ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಅನೇಕ ಪಾರಂಪರಿಕ ತಾಣಗಳು ಮುಳುಗಿವೆ.
ಭದ್ರಾವತಿ,
ಘಟಪ್ರಭಾ,
ಮಲಪ್ರಭಾ,
ಕೃಷ್ಣಾ,
ಕಾವೇರಿ,
ಕಬಿನಿ,
ಹೇಮಾವತಿ,
ಸೂಪಾ
ಮತ್ತು
ವಾರಾಹಿ
ಮತ್ತು
ಅವುಗಳ
ಅಂಗ
ನದಿಗಳು
ಉಕ್ಕಿ
ಹರಿಯುತ್ತಿವೆ
ಎಂದು
ಜಲಸಂಪನ್ಮೂಲ
ಇಲಾಖೆ
ಅಧಿಕಾರಿಗಳು
ತಿಳಿಸಿದ್ದಾರೆ.
ಕರಾವಳಿ
ಕರ್ನಾಟಕದ
ನದಿಗಳು
ಕೂಡ
ಭೋರ್ಗರೆದು
ಹರಿಯುತ್ತಿವೆ
ಮತ್ತು
ಈ
ನದಿಗಳಿಗೆ
ನಿರ್ಮಿಸಲಾದ
ಹೆಚ್ಚಿನ
ಅಣೆಕಟ್ಟುಗಳು
ಬಹುತೇಕ
ಭರ್ತಿಯಾಗಿವೆ.
ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ
ಹವಾಮಾನ ಇಲಾಖೆ ಪ್ರಕಾರ, ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಖಿನ್ನತೆಗೆ ಕಾರಣವಾಗಿದೆ.
ಕೊಡಗು,
ಕ್ಯಾಸಲ್
ರಾಕ್,
ಸಿದ್ದಾಪುರ,
ಉಡುಪಿ,
ಮೂರ್ನಾಡುಗಳಲ್ಲಿ
ಭಾರಿ
ಮಳೆಯಾಗಿದೆ,
ಉತ್ತರ
ಕನ್ನಡ
ಜಿಲ್ಲೆಯ
ನಿಲ್ಕುಂದ,
ಉಡುಪಿ
ಜಿಲ್ಲೆಯ
ಕೋಟ,
ದಕ್ಷಿಣ
ಕನ್ನಡದಲ್ಲಿ
ಪಣಂಬೂರು,
ಧರ್ಮಸ್ಥಳ
ಮತ್ತು
ಬೆಳ್ತಂಗಡಿ,
ಉತ್ತರ
ಕನ್ನಡದಲ್ಲಿ
ಹೊನಾವರ,
ದಕ್ಷಿಣ
ಕನ್ನಡದಲ್ಲಿ
ಪುತ್ತೂರು,
ಮಂಗಳೂರು,
ಮಂಗಳೂರು
ವಿಮಾನ
ನಿಲ್ದಾಣಗಳಲ್ಲಿ
ದಾಖಲೆಯ
ಮಳೆಯಾಗಿದೆ.
ಕರಾವಳಿ
ಕರ್ನಾಟಕದ
ಎಲ್ಲಾ
ಜಿಲ್ಲೆಗಳಲ್ಲಿ
ಕೆಲವು
ಸ್ಥಳಗಳಲ್ಲಿ
ಭಾರಿ
ಮಳೆಯಾಗುವ
ಸಾಧ್ಯತೆಯಿದೆ
ಎಂದು
ಹವಾಮಾನ
ಇಲಾಖೆ
ಮುನ್ಸೂಚನೆ
ನೀಡಿದೆ.
ದಕ್ಷಿಣ ಒಳನಾಡಿನಲ್ಲೂ ಭಾರಿ ಮಳೆ ಮುನ್ಸೂಚನೆ
ಕಳಸ, ಶೃಂಗೇರಿ, ಚಿಕ್ಕಮಗಳೂರು ಮತ್ತು ಚಿಕ್ಕಮಗಳೂರಿನ ಕೊಪ್ಪ, ಶಿವಮೊಗ್ಗದ ಹುಂಚದಕಟ್ಟೆ ಭಾಗಗಳಲ್ಲಿ ದಾಖಲೆಯ ಮಳೆಯಾಗಿದೆ.
ದಕ್ಷಿಣ ಒಳನಾಡಿನ ಕರ್ನಾಟಕದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಯಾದಗಿರಿ, ಬಾಗಲಕೋಟೆ, ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಕೂಡ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
Recommended Video
ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಭಾರತದ
ಹವಾಮಾನ
ಇಲಾಖೆ
(IMD)
ಕರ್ನಾಟಕದಾದ್ಯಂತ
ವಿಶೇಷವಾಗಿ
ದಕ್ಷಿಣ
ಒಳನಾಡಿನಲ್ಲಿ
ಮುಂದಿನ
ಮೂರು
ದಿನಗಳವರೆಗೆ
ಅತ್ಯಂತ
ಭಾರಿ
ಮಳೆಯಾಗಲಿದೆ
ಎಂದು
ಎಚ್ಚರಿಸಿದೆ.
ಕರ್ನಾಟಕ
ರಾಜ್ಯ
ವಿಪತ್ತು
ನಿರ್ವಹಣಾ
ಪ್ರಾಧಿಕಾರವು
ಬೀದರ್,
ಕಲಬುರಗಿ
ಮತ್ತು
ಯಾದಗಿರಿಗೆ
ಸೋಮವಾರ
ಯೆಲ್ಲೂ
ಅಲರ್ಟ್
ನೀಡಿದೆ.
ಯಾದಗಿರಿ,
ವಿಜಯಪುರ,
ರಾಯಚೂರು,
ಹಾವೇರಿ
ಮತ್ತು
ಧಾರವಾಡ
ಜಿಲ್ಲೆಗಳಲ್ಲೂ
ಮಳೆ
ಮುಂದುವರೆಯುವ
ಸಾಧ್ಯತೆ
ಇದೆ
ಎಂದು
ತಿಳಿಸಿದೆ.
ಕರ್ನಾಟಕದ
ದಕ್ಷಿಣ
ಒಳನಾಡಿನಲ್ಲಿ
ದಾವಣಗೆರೆಗೆ
ಹಳದಿ
ಎಚ್ಚರಿಕೆ
ಮತ್ತು
ಉಳಿದ
ಜಿಲ್ಲೆಗಳಿಗೆ
ಆಗಸ್ಟ್
10
ರವರೆಗೆ
ಯಾವುದೇ
ಎಚ್ಚರಿಕೆ
ನೀಡಿಲ್ಲದಿದ್ದರೂ
ಉತ್ತಮ
ಮಳೆಯಾಗುವ
ಸಾಧ್ಯತೆ
ಇದೆ
ಎಂದು
ಹೇಳಿದೆ.