ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕದ ಯಾತ್ರಿಗಳು ಸಂಕಷ್ಟದಲ್ಲಿ

|
Google Oneindia Kannada News

ಬೆಂಗಳೂರು, ಜುಲೈ 02: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕ 200 ಮಂದಿ ಯಾತ್ರಿಗಳು ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಮಾನಸ ಸರೋವರ ಯಾತ್ರೆಯ ಹಾದಿಯಲ್ಲಿ ನೇಪಾಳದ ಸಿಮಿಕೋಟ್ನ ಎಂಬಲ್ಲಿ ಭಾರಿ ಮಳೆ ಮತ್ತು ಮಂಜಿನಿಂದಾಗಿ ಯಾತ್ರಾರ್ತಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯದ ಯಾತ್ರಿಗಳೊಂದಿಗೆ ಸಂಪರ್ಕವನ್ನೂ ಕಡಿದುಕೊಂಡಿದ್ದಾರೆ.

 Karnatakas 200 pilgrims were in trouble in Nepal

ಮೈಸೂರು, ರಾಮನಗರ, ಚನ್ನಪಟ್ಟಣದ ನಿವಾಸಿಗಳೇ ಹೆಚ್ಚಿಗಿದ್ದಾರೆ ಎನ್ನಲಾಗಿದ್ದು, ಯಾತ್ರಾರ್ತಿಗಳ ನೆರವಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೆಹಲಿಯ ಕರ್ನಾಟಕ ಸ್ಥಾನಿಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಅಲ್ಲದೆ ನೇಪಾಳದ ಭಾರತ ರಾಯಭಾರಿಯೊಂದಿಗೂ ಮಾತನಾಡಿದ್ದಾರೆ.

ಕರ್ನಾಟಕದ ಎಲ್ಲಾ ಯಾತ್ರಾರ್ತಿಗಳು ಸುರಕ್ಷಿತವಾಗಿಯೇ ಇದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಹೇಳಿದ್ದಾರೆ.

ನೇಪಾಳದಲ್ಲಿ ಸಿಲುಕಿಕೊಂಡಿರುವ ನಿಮ್ಮವರ ಬಗ್ಗೆ ಮಾಹಿತಿ ಪಡೆಯಲು 009779868253838 ಗೆ ಕರೆ ಮಾಡಿ ಮಲ್ಲೇಶ್ ಅಥವಾ ರಾಧಾ ಅವರಿಗೆ ಫೋನ್ ನೀಡುವಂತೆ ಹಿಂದಿಯಲ್ಲಿ ಕೇಳಿದರೆ ಕನ್ನಡಿಗರಿಗೆ ಫೋನ್ ನೀಡುತ್ತಾರೆ.

English summary
Karnataka pilgrims who were travailing to Manasa Sarovara were in trouble. They were trapped in Nepal's Simikotna due to heavy rain and fog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X