ಕರ್ನಾಟಕದ 18 ಜಿಲ್ಲೆಗಳ 49 ತಾಲೂಕು ಬರಪೀಡಿತ: ಸರ್ಕಾರದ ಘೋಷಣೆ
ಬೆಂಗಳೂರು, ಅಕ್ಟೋಬರ್ 28: ರಾಜ್ಯದಲ್ಲಿ ನೆರೆ ಸಂಕಷ್ಟಕ್ಕೆ ಸಿಲುಕಿ, ನಲುಗಿದ ಜನರ ಸಮಸ್ಯೆ ಹಾಗೇ ಇದೆ. ಈ ಮಧ್ಯೆ 2019-20ನೇ ಸಾಲಿನಲ್ಲಿ ಮಳೆ ಕೊರತೆ ಎದುರಿಸಿದ ಹದಿನೆಂಟು ಜಿಲ್ಲೆಗಳ ನಲವತ್ತೊಂಬತ್ತು ತಾಲೂಕುಗಳನ್ನು ಸೋಮವಾರ ರಾಜ್ಯ ಸರ್ಕಾರ ಬರಪೀಡಿತ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಅವುಗಳ ಜಿಲ್ಲಾವಾರು ವಿವರ ಹೀಗಿದೆ.
ಬೆಂಗಳೂರು ನಗರ: ಅನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ
ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ
ರಾಮನಗರ: ಕನಕಪುರ, ರಾಮನಗರ
ಕೋಲಾರ: ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಲು, ಶ್ರೀನಿವಾಸಪುರ
ಚಿಕ್ಕಬಳ್ಳಾಪುರ: ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ
ತುಮಕೂರು: ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ
ಚಿತ್ರದುರ್ಗ: ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು
ದಾವಣಗೆರೆ: ಜಗಳೂರು
ಚಾಮರಾಜನಗರ: ಕೊಳ್ಳೇಗಾಲ
ಬಳ್ಳಾರಿ: ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರುಗುಪ್ಪ
ಕೊಪ್ಪಳ: ಗಂಗಾವತಿ
ರಾಯಚೂರು: ಮಾನ್ವಿ, ರಾಯಚೂರು, ಸಿಂಧನೂರು
ಕಲಬುರಗಿ: ಚಿಂಚೋಳಿ, ಜೇವರ್ಗಿ, ಸೇಡಂ
ಯಾದಗಿರಿ: ಯಾದಗಿರಿ
ಬೆಳಗಾವಿ: ಅಥಣಿ
ಬಾಗಲಕೋಟೆ: ಬಾದಾಮಿ, ಬೀಳಗಿ, ಜಮಖಂಡಿ
ವಿಜಯಪುರ: ಬಸವನಬಾಗೇವಾದಿ, ಇಂಡಿ, ಸಿಂದಗಿ, ವಿಜಯಪುರ
ಗದಗ: ನರಗುಂದ