ಸಿಎಂ ಕಾರ್ಯಕ್ರಮ ಪಟ್ಟಿ: ಕೋವಿಡ್ 19 ಸಭೆ, ದೆಹಲಿಗೆ ಪಯಣ, ಇನ್ನಷ್ಟು
ಬೆಂಗಳೂರು
ಏ.25:
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಅವರು
ಕೋವಿಡ್ಗೆ
ಸಂಬಂಧಿಸಿದ
ಇತ್ತೀಚಿನ
ಪರಿಸ್ಥಿತಿಯನ್ನು
ಪರಿಶೀಲಿಸಲು
ಏಪ್ರಿಲ್
25ರಂದು
ಮಧ್ಯಾಹ್ನ
ಕೋವಿಡ್
ಪರಿಶೀಲನಾ
ಸಭೆಯಲ್ಲಿ
ಪಾಲ್ಗೊಳ್ಳಲಿದ್ದಾರೆ.
ಏಪ್ರಿಲ್
25
ಸೋಮವಾರ
ಮಧ್ಯಾಹ್ನ
12.30
ಗಂಟೆಗೆ
ಕೃಷ್ಣಾ
ಕಚೇರಿಯಲ್ಲಿ
ಮುಖ್ಯಮಂತ್ರಿಗಳ
ನೇತೃತ್ವದಲ್ಲಿ
ಸಭೆ
ನಡೆಯಲಿದೆ.
ಕೋವಿಡ್
19
ಪರಿಶೀಲನಾ
ಸಭೆಯಲ್ಲಿ
ಕಂದಾಯ
ಸಚಿವರು
ಮತ್ತು
ಪ್ರಧಾನ
ಕಾರ್ಯದರ್ಶಿ,
ಕಂದಾಯ
ಇಲಾಖೆ,
ಆರೋಗ್ಯ
ಆಯುಕ್ತರೊಂದಿಗೆ
ಆರೋಗ್ಯ
ಸಚಿವರು
ಮತ್ತು
ಆರೋಗ್ಯ
ಮತ್ತು
ವೈದ್ಯಕೀಯ
ಶಿಕ್ಷಣದ
ಪ್ರಧಾನ
ಕಾರ್ಯದರ್ಶಿಗಳು,
ಉನ್ನತ
ಶಿಕ್ಷಣ
ಮತ್ತು
ಐಟಿ
ಮತ್ತು
ಬಿಟಿ
ಸಚಿವರು
ಹಾಗೂ
TAC
ಅಧ್ಯಕ್ಷರು
ಮತ್ತು
ಸದಸ್ಯರು
ಪಾಲ್ಗೊಳ್ಳಲಿದ್ದಾರೆ.
ಕೋವಿಡ್ 19 ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕೋವಿಡ್ 19 ಮಾರ್ಗಸೂಚಿಯಲ್ಲಿ ಬದಲಾವಣೆ, ಬೋಸ್ಟರ್ ಡೋಸ್ ಹಾಗೂ ಮೂಲ ಸೌಕರ್ಯ ಲಭ್ಯತೆ ಬಗ್ಗೆ ಚರ್ಚೆ ನಡೆಯಲಿದೆ.
Recommended Video
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏ.26ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದು,. ಸಚಿವ ಸಂಪುಟ ವಿಸ್ತರಣೆ ಕುರಿತು ಅಂತಿಮ ಸಾಧ್ಯತೆ ಇದೆ. ಏಪ್ರಿಲ್ ತಿಂಗಳ ಅಂತ್ಯದಲ್ಲೇ ರಾಜ್ಯ ಸಚಿವ ಸಂಪುಟ ಪುನರ್ ರಚನೆ/ ವಿಸ್ತರಣೆ ನಡೆಯುವ ನಿರೀಕ್ಷೆಯಿದೆ.