ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ರಾಜಕೀಯ ಕ್ಷಿಪ್ರ ಕ್ರಾಂತಿ ಹುಟ್ಟುಹಾಕಿರುವ 5 ಪ್ರಶ್ನೆಗಳು

By ಅನಿಲ್ ಆಚಾರ್
|
Google Oneindia Kannada News

ಕರ್ನಾಟಕದ ರಾಜಕೀಯ ಸನ್ನಿವೇಶದಲ್ಲಿ ಏಕಾಏಕಿ ನಡೆದ ಬೆಳವಣಿಗೆ 5 ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗಿನ ಅತೃಪ್ತ ಶಾಸಕರು ಶನಿವಾರವೇ ರಾಜೀನಾಮೆಗೆ ಮುಂದಾಗಿದ್ದರ ಹಿಂದಿನ ಉದ್ದೇಶ ಏನು ಎಂಬ ಪ್ರಶ್ನೆ ಮೂಡುತ್ತದೆ. ಆಪರೇಷನ್ ಕಮಲದ ವಿಚಾರವೇ ಬೇರೆ. ಆದರೆ ರಾಮಲಿಂಗಾ ರೆಡ್ಡಿಯಂಥವರು ಸಹ ರಾಜೀನಾಮೆ ನೀಡಲು ಮುಂದಾಗಿದ್ದು ಏಕೆ? ಈ ಬಗೆಗಿನ ಪ್ರಶ್ನೆಗಳು ಹೀಗಿವೆ.

* ಶನಿವಾರವಾದ್ದರಿಂದ ರಾಜೀನಾಮೆಯನ್ನು ಅಂಗೀಕಾರ ಮಾಡಲು ಹೇಗಿದ್ದರೂ ಸ್ಪೀಕರ್ ತಡ ಮಾಡುತ್ತಾರೆ ಎಂಬ ಬಗ್ಗೆ ಮುಂಚೆಯೇ ಲೆಕ್ಕಾಚಾರ ಇತ್ತೆ?

ಕುಮಾರಸ್ವಾಮಿ ಅವರಿಗೆ ಮತ್ತೆ ಕೈ ಕೊಡಲಿದೆಯೇ ಅವೇ 5 ಅಂಶಗಳು? ಕುಮಾರಸ್ವಾಮಿ ಅವರಿಗೆ ಮತ್ತೆ ಕೈ ಕೊಡಲಿದೆಯೇ ಅವೇ 5 ಅಂಶಗಳು?

* ಶನಿವಾರದಿಂದ ಕನಿಷ್ಠ ಸೋಮವಾರದ ತನಕ ಸಮಯ ಸಿಗುತ್ತದೆ. ಅಷ್ಟರೊಳಗೆ ಹೈ ಕಮಾಂಡ್ ನ ಜತೆಗೆ ಚೌಕಾಶಿ ಮಾಡಬಹುದು ಎಂಬ ಅಂದಾಜು ಇತ್ತೆ?

Karnataka political crisis raises 5 question

* ಆಪರೇಷನ್ ಕಮಲದ ಆತಂಕ ಇರುವಾಗಲೇ ರಾಜೀನಾಮೆ ನೀಡಿದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಸಂಧಾನಕ್ಕೆ ಸಲೀಸಾಗುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೇ?

* ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಇವರೆಲ್ಲರಿಗಿಂತ ರಾಮಲಿಂಗಾ ರೆಡ್ಡಿ ಅವರ ಕೈಲಿ ಸರಕಾರ ಉಳಿಸುವ ಮಂತ್ರ ದಂಡ ಇದೆಯಾ?

ಕುಮಾರಸ್ವಾಮಿಗೆ 'ಕಾಮರಾಜ ಮಾರ್ಗ' ಈಗ ಉಳಿದಿರುವ ಏಕೈಕ ಆಯ್ಕೆ ಕುಮಾರಸ್ವಾಮಿಗೆ 'ಕಾಮರಾಜ ಮಾರ್ಗ' ಈಗ ಉಳಿದಿರುವ ಏಕೈಕ ಆಯ್ಕೆ

* ಜೆಡಿಎಸ್- ಕಾಂಗ್ರೆಸ್ ಎರಡೂ ಪಕ್ಷಗಳ ಶಾಸಕರು ಏಕ ಕಾಲಕ್ಕೆ ರಾಜೀನಾಮೆ ಸಲ್ಲಿಸುವುದಕ್ಕೆ ಸಮನ್ವಯಕಾರರಾಗಿ ಕೆಲಸ ಮಾಡಿರುವವರು ಯಾರು?

English summary
Karnataka political crisis raises 5 question. Here are the points to be discussed at current political scenario. How Congress and JDS MLA's submit their resignation at same time. this is the big question.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X