ಕರ್ನಾಟಕದ ರಾಜಕೀಯ ಕ್ಷಿಪ್ರ ಕ್ರಾಂತಿ ಹುಟ್ಟುಹಾಕಿರುವ 5 ಪ್ರಶ್ನೆಗಳು
ಕರ್ನಾಟಕದ ರಾಜಕೀಯ ಸನ್ನಿವೇಶದಲ್ಲಿ ಏಕಾಏಕಿ ನಡೆದ ಬೆಳವಣಿಗೆ 5 ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗಿನ ಅತೃಪ್ತ ಶಾಸಕರು ಶನಿವಾರವೇ ರಾಜೀನಾಮೆಗೆ ಮುಂದಾಗಿದ್ದರ ಹಿಂದಿನ ಉದ್ದೇಶ ಏನು ಎಂಬ ಪ್ರಶ್ನೆ ಮೂಡುತ್ತದೆ. ಆಪರೇಷನ್ ಕಮಲದ ವಿಚಾರವೇ ಬೇರೆ. ಆದರೆ ರಾಮಲಿಂಗಾ ರೆಡ್ಡಿಯಂಥವರು ಸಹ ರಾಜೀನಾಮೆ ನೀಡಲು ಮುಂದಾಗಿದ್ದು ಏಕೆ? ಈ ಬಗೆಗಿನ ಪ್ರಶ್ನೆಗಳು ಹೀಗಿವೆ.
* ಶನಿವಾರವಾದ್ದರಿಂದ ರಾಜೀನಾಮೆಯನ್ನು ಅಂಗೀಕಾರ ಮಾಡಲು ಹೇಗಿದ್ದರೂ ಸ್ಪೀಕರ್ ತಡ ಮಾಡುತ್ತಾರೆ ಎಂಬ ಬಗ್ಗೆ ಮುಂಚೆಯೇ ಲೆಕ್ಕಾಚಾರ ಇತ್ತೆ?
ಕುಮಾರಸ್ವಾಮಿ ಅವರಿಗೆ ಮತ್ತೆ ಕೈ ಕೊಡಲಿದೆಯೇ ಅವೇ 5 ಅಂಶಗಳು?
* ಶನಿವಾರದಿಂದ ಕನಿಷ್ಠ ಸೋಮವಾರದ ತನಕ ಸಮಯ ಸಿಗುತ್ತದೆ. ಅಷ್ಟರೊಳಗೆ ಹೈ ಕಮಾಂಡ್ ನ ಜತೆಗೆ ಚೌಕಾಶಿ ಮಾಡಬಹುದು ಎಂಬ ಅಂದಾಜು ಇತ್ತೆ?
* ಆಪರೇಷನ್ ಕಮಲದ ಆತಂಕ ಇರುವಾಗಲೇ ರಾಜೀನಾಮೆ ನೀಡಿದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಸಂಧಾನಕ್ಕೆ ಸಲೀಸಾಗುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೇ?
* ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಇವರೆಲ್ಲರಿಗಿಂತ ರಾಮಲಿಂಗಾ ರೆಡ್ಡಿ ಅವರ ಕೈಲಿ ಸರಕಾರ ಉಳಿಸುವ ಮಂತ್ರ ದಂಡ ಇದೆಯಾ?
ಕುಮಾರಸ್ವಾಮಿಗೆ 'ಕಾಮರಾಜ ಮಾರ್ಗ' ಈಗ ಉಳಿದಿರುವ ಏಕೈಕ ಆಯ್ಕೆ
* ಜೆಡಿಎಸ್- ಕಾಂಗ್ರೆಸ್ ಎರಡೂ ಪಕ್ಷಗಳ ಶಾಸಕರು ಏಕ ಕಾಲಕ್ಕೆ ರಾಜೀನಾಮೆ ಸಲ್ಲಿಸುವುದಕ್ಕೆ ಸಮನ್ವಯಕಾರರಾಗಿ ಕೆಲಸ ಮಾಡಿರುವವರು ಯಾರು?