ಹರಿದಾಡುತ್ತಿರುವ ಸಂದೇಶವನ್ನೊಮ್ಮೆ ನೋಡಿ: ಇನ್ನಾದರೂ ಆತ್ಮವಿಮರ್ಶೆ ಮಾಡಿಕೊಳ್ಳಿ
ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ತಲೆತಗ್ಗಿಸುವಂತದ್ದು. ರಾಜಕಾರಣಿಗಳ 'ಅವಕಾಶವಾದ ರಾಜಕಾರಣ'ದ ಬಗ್ಗೆ ಜನ ಬೀದಿಬೀದಿಯಲ್ಲಿ ಲೇವಡಿ ಮಾಡುತ್ತಿದ್ದಾರೆ.
ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಈ ಸಂದೇಶವನ್ನೊಮ್ಮೆ ರಾಜಕಾರಣಿಗಳು ಓದಿ, ಆತ್ಮವಿಮರ್ಶೆ ಮಾಡಿಕೊಳ್ಳಲಿ. ವಾಟ್ಸಾಪ್ ನಲ್ಲಿ ಬಂದ ಸಂದೇಶ ಹೀಗಿದೆ. ಓವರ್ ಟು ಪೊಲಿಟಿಶಿಯನ್ಸ್
ಸಂಜೆ ತನಕ ಕಾದುನೋಡಿ: ಹೊಸ ಬಾಂಬ್ ಸಿಡಿಸಿದ ಡಿ ಕೆ ಶಿವಕುಮಾರ್
> ಒಬ್ಬನೇ ಒಬ್ಬ ತನ್ನ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ ಎಂದು ರಾಜೀನಾಮೆ ಕೊಡಲಿಲ್ಲ. ತನ್ನ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು, ಆಸ್ಪತ್ರೆ ಆಗಲಿಲ್ಲ ಎಂದು ಸಹ ರಾಜೀನಾಮೆ ನೀಡಲಿಲ್ಲ.
> ಒಬ್ಬನೇ ಒಬ್ಬ ಚಿಕ್ಕ ಕಂದಮ್ಮಗಳ ಮೇಲೆ ಅತ್ಯಾಚಾರ ಆಗುತ್ತಿದೆ, ಕಾನೂನು ವ್ಯವಸ್ಥೆ ಪ್ರಬಲವಾಗುವ ವರೆಗೂ ನನಗೆ ಅಧಿಕಾರ ಬೇಡ ಎಂದು ರಾಜೀನಾಮೆ ನೀಡಿಲ್ಲ. ಸಾಲದ ಸುಳಿಗೆ ಸಿಲುಕಿ ಅನ್ನದಾತ ಸಾವಿಗೆ ಶರಣಾಗುತ್ತಿದ್ದಾನೆ ಎಂದು ಒಬ್ಬನೂ ರಾಜೀನಾಮೆ ನೀಡಲಿಲ್ಲ.
> ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಒಬ್ಬನೇ ಒಬ್ಬ ರಾಜೀನಾಮೆ ನೀಡಲಿಲ್ಲ. ಕರ್ನಾಟಕದಲ್ಲಿ ಉದ್ಯೋಗ ಕನ್ನಡಿಗರಿಗೇ ನೀಡಿ ಎಂದು ಒತ್ತಾಯಿಸಿ ಯಾರೊಬ್ಬನೂ ರಾಜೀನಾಮೆ ನೀಡಲಿಲ್ಲ.
> ಕಾವೇರಿ ನದಿಗಾಗಿ ಇಲ್ಲ, ಶರಾವತಿ, ನೇತ್ರಾವತಿ ಉಳಿವಿಗಾಗಿ ಯಾರೊಬ್ಬನೂ ರಾಜೀನಾಮೆ ನೀಡಲಿಲ್ಲ. ಬಡಜನರಿಗೆ ತಲುಪುವ ಸೌಲಭ್ಯಗಳು ಹಾಗೂ ಯೋಜನೆಗಳು ತಲುಪದೇ ಇದ್ದಾಗ ರಾಜೀನಾಮೆ ಕೊಡಲಿಲ್ಲ
> ಮಹದಾಯಿ ನೀರಿಗಾಗಿ ರಾಜ್ಯದಲ್ಲಿ ಹೋರಾಟ ನಡೆದಾಗ ರಾಜೀನಾಮೆಯ ಪದ ಬಳಸಲಿಲ್ಲ. ಕಳಸ ಬಂಡೂರಿ ಹೋರಾಟ ನಡೆದಾಗ ರಾಜೀನಾಮೆ ಕೊಡಲಿಲ್ಲ. ಕಬ್ಬು ಬೆಳೆಗಾರರು ಸಂಕಷ್ಟದಲ್ಲಿರುವಾಗ ರಾಜೀನಾಮೆ ನೀಡಲಿಲ್ಲವೇಕೆ ...
ರಾಜಕೀಯ ಅಸಹ್ಯ ಮೂಡಿಸಿದೆ : ಕ್ಷಮೆ ಕೇಳಿದ ಯುವ ಕಾಂಗ್ರೆಸ್ ಶಾಸಕ
'ಸ್ವಾರ್ಥ, ಸ್ವಹಿತ, ಅಧಿಕಾರ ವ್ಯಾಮೋಹಕ್ಕಾಗಿ "ಪ್ರಜಾಪ್ರಭುತ್ವ" ವನ್ನೇ ಕಗ್ಗೊಲೆ ಮಾಡಲು ಹೊರಟಿರುವ ಎಲ್ಲಾ ಶಾಸಕರಿಗೂ ನಮ್ಮ ಧಿಕ್ಕಾರವಿರಲಿ ಹಾಗೂ ತಕ್ಕ ಶಾಸ್ತಿಯಾಗಲಿ ಕಠಿಣ ಕ್ರಮ ಜರುಗಿಸಲು ತಿದ್ದುಪಡಿ ತರಲಿ'