ಗೃಹ ಇಲಾಖೆಯ ಪದಕಕ್ಕೆ; ಕರ್ನಾಟಕದ ನಾಲ್ವರು ಪೊಲೀಸರು ಆಯ್ಕೆ
ಬೆಂಗಳೂರು, ಆಗಸ್ಟ್ 12 : ಕರ್ನಾಟಕದ ನಾಲ್ವರು ಸೇರಿದಂತೆ 120 ಪೊಲೀಸ್ ಅಧಿಕಾರಿಗಳನ್ನು ಗೃಹ ಇಲಾಖೆಯ ಪ್ರತಿಷ್ಠಿತ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉತ್ತಮ ತನಿಖೆ ಕೈಗೊಂಡ ಅಧಿಕಾರಿಗಳಿಗೆ ಈ ಪದಕಗಳನ್ನು ನೀಡಲಾಗುತ್ತದೆ.
ಬುಧವಾರ ಕೇಂದ್ರ ಗೃಹ ಇಲಾಖೆ ಈ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಎಸಿಪಿ ಸುಧೀರ್ ಎಂ. ಹೆಗ್ಡೆ, ಡಿವೈಎಸ್ಪಿ ಅಶೋಕ ಡಿ., ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಡಿ. ಎಂ. ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಹೆಚ್. ಎಸ್. ಕರ್ನಾಟಕದಿಂದ ಪದಕಕ್ಕೆ ಭಾಜನರಾಗಿದ್ದಾರೆ.
ತೂತುಕುಡಿ ಲಾಕಪ್ ಡೆತ್: ಆರೋಪಿ ಪೊಲೀಸ್ ಅಧಿಕಾರಿ ಕೊರೊನಾ ವೈರಸ್ಗೆ ಬಲಿ
ಇಬ್ಬರು ಸಿಬಿಐ ಅಧಿಕಾರಿಗಳಾದ ಇನ್ಸ್ಪೆಕ್ಟರ್ ರಾಕೇಶ್ ರಂಜನ್ ಮತ್ತು ವಿಜಯ ವೈಶಾನಿ ಅವರು ಸಹ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಬೆಂಗಳೂರು ಸಿಬಿಐ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಬಿಹಾರ ಪೊಲೀಸ್ ಕ್ವಾರಂಟೈನ್: ನ್ಯಾಯಾಲಯಕ್ಕೆ ಹೋಗಲು ನಿರ್ಧಾರ
ಉತ್ತಮ ತನಿಖೆ ಕೈಗೊಂಡ ಅಧಿಕಾರಿಗಳನ್ನು ಗೌರವಿಸಲು 2018ರಲ್ಲಿ ಕೇಂದ್ರ ಗೃಹ ಇಲಾಖೆ ಈ ಪದಕ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ಬಾರಿಯ ಆಯ್ಕೆಯಾಗಿರುವ 120 ಪೊಲೀಸ್ ಅಧಿಕಾರಿಗಳಲ್ಲಿ 21 ಮಹಿಳಾ ಅಧಿಕಾರಿಗಳು ಸೇರಿದ್ದಾರೆ.
ಧಾರವಾಡ; ಪೊಲೀಸ್ ತರಬೇತಿ ಶಾಲೆ ಕೋವಿಡ್ ಹಾಟ್ ಸ್ಪಾಟ್
ಈ ಬಾರಿಯ ಪದಕ ಪ್ರಶಸ್ತಿ ಪಟ್ಟಿಯಲ್ಲಿ ಸಿಬಿಐ ಅಧಿಕಾರಿಗಳೇ ಹೆಚ್ಚಿದ್ದಾರೆ. ಒಟ್ಟು 15 ಸಿಬಿಐ ಅಧಿಕಾರಿಗಳಿಗೆ ಪ್ರಶಸ್ತಿ ಸಿಗುತ್ತಿದೆ. ಎನ್ಐಎಯ ಐವರು ಸಿಬ್ಬಂದಿಗಳಿಗೆ ಪದಕ ಸಿಗುತ್ತಿದೆ.