ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಮಾರಸ್ವಾಮಿ ನೇತೃತ್ವದ ಸಂಸದರ ಸಭೆಗೆ ಹಲವು ಪ್ರಮುಖರು ಗೈರು
ಬೆಂಗಳೂರು, ಡಿಸೆಂಬರ್ 04: ಕುಮಾರಸ್ವಾಮಿ ನೇತೃತ್ವದ ಸಂಸದರ ಸಭೆಗೆ ಹಲವು ಪ್ರಮುಖ ಸಂಸದರು, ರಾಜ್ಯಸಭಾ ಸದಸ್ಯರು ಗೈರಾಗಿದ್ದಾರೆ.
ಬಿಜೆಪಿಯಿಂದ ಕೇಂದ್ರ ಸಚಿವ ಡಿವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್, ರಮೇಶ್ ಜಿಗಜಣಗಿ, ಅನಂತ್ಕುಮಾರ್ ಹೆಗಡೆ ಇವರುಗಳು ಗೈರಾಗಿದ್ದರೆ. ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ಸಂಸದ ದೇವೇಗೌಡ ಅವರು ಸಹ ಸಭೆಗೆ ಗೈರಾಗಿದ್ದಾರೆ.
ಕೇಂದ್ರದ ಮೇಲೆ ಒತ್ತಡ ತನ್ನಿ: ರಾಜ್ಯದ ಸಂಸದರಿಗೆ ಎಚ್ಡಿಕೆ ಆಗ್ರಹ
ಜಲ ವಿವಾದಗಳು, ರೈಲ್ವೆ ಇಲಾಖೆ ಯೋಜನೆಗಳು, ಎನ್ಡಿಆರ್ಎಫ್ ಅನುದಾನ, ಕೊಡಗು ಸಂತ್ರಸ್ಥರಿಗೆ ನೆರವು ಇನ್ನೂ ಹಲವು ಕೇಂದ್ರ ಮತ್ತು ರಾಜ್ಯ ಸಂಬಂಧಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು.
ರೈತರ ಸಾಲಮನ್ನಾ: ಕುಮಾರಣ್ಣ ನೀಡಿದ್ದ ಡೆಡ್ ಲೈನ್ ಮುಗೀತು!
ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಪುಟ್ಟರಂಗ ಶೆಟ್ಟಿ, ಶಿವಾನಂದ ಪಾಟೀಲ್ ಇನ್ನೂ ಹಲವು ಭಾಗವಹಿಸಿದ್ದಾರೆ.
Comments
English summary
CM Kumaraswamy called for parliament members of Karnataka meeting in Bengaluru today. Many BJP MPs were absent in the meeting. Mallikarjun Kharge and Deve Gowda also absent.