ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು
ಬೆಂಗಳೂರು, ನವೆಂಬರ್ 13 : ಕರ್ನಾಟಕ ಜನರು ಬಹುದಿನದಿಂದ ಕಾಯುತ್ತಿದ್ದ ತೀರ್ಪನ್ನು ಬುಧವಾರ ಸುಪ್ರೀಂಕೋರ್ಟ್ ನೀಡಿದೆ. 17 ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶವನ್ನು ಭಾಗಶಃ ಎತ್ತಿಹಿಡಿದ ಸುಪ್ರೀಂಕೋರ್ಟ್, ಶಾಸಕರು ಉಪ ಚುಣಾವಣಾ ಕಣಕ್ಕಿಳಿಯಲು ಅವಕಾಶ ನೀಡಿದೆ.
17 ಅನರ್ಹ ಶಾಸಕರ ಅರ್ಜಿ; ಸುಪ್ರೀಂ ತೀರ್ಪಿಗೆ ದಿನಾಂಕ ನಿಗದಿ
ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಅನರ್ಹ ಶಾಸಕರು, ಕಾಂಗ್ರೆಸ್, ಜೆಡಿಎಸ್, ಸ್ಪೀಕರ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಬುಧವಾರ ಪ್ರಕರಣದ ತೀರ್ಪನ್ನು ನೀಡಿದೆ.
ಸ್ಪೀಕರ್ ಆದೇಶದ ಪ್ರಕಾರ 17 ಅನರ್ಹ ಶಾಸಕರು ಹದಿನೈದನೇ ವಿಧಾನಸಭೆ ಅವಧಿ ಮುಗಿಯುವ 2023ರ ತನಕ ಚುನಾವಣೆಗೆ ಸ್ಫರ್ಧೆ ಮಾಡುವಂತಿರಲಿಲ್ಲ. ಆದರೆ, ಈ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಆತಂಕದಲ್ಲಿಯೇ ದೆಹಲಿ ವಿಮಾನ ಹತ್ತಿದ ಅನರ್ಹ ಶಾಸಕರು
ಸುಪ್ರೀಂಕೋರ್ಟ್ ತೀರ್ಪು, ಕರ್ನಾಟಕದ ರಾಜಕೀಯ ಬೆಳವಣಿಗೆ, ಉಪ ಚುನಾವಣಾ ಚಿತ್ರಣ, ರಾಜಕೀಯ ನಾಯಕರ ಹೇಳಿಕೆ ಮುಂತಾದ ಸಮಗ್ರ ಮಾಹಿತಿ ಈ ಪುಟದಲ್ಲಿ ಓದುಗರಿಗೆ ಸಿಗಲಿದೆ.
15 ಕ್ಷೇತ್ರದ ಉಪ ಚುನಾವಣೆ ಚಿತ್ರಣ ಬದಲಿಸಿದ ತೀರ್ಪು; 5 ಅಂಶಗಳು
ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಅನರ್ಹತೆ ಎನ್ನುವುದೇ ಒಂದು ಕಳಂಕ.
— Karnataka Congress (@INCKarnataka) November 13, 2019
ಮಾನ್ಯ ಸ್ಪೀಕರ್ ಅವರು 17 ಶಾಸಕರು ತಪ್ಪಿತಸ್ಥರು ಎಂದು ಹೇಳಿ ಅನರ್ಹತೆಗೊಳಿಸಿದ್ದರು.
ಈಗ ಸುಪ್ರೀಂ ಕೋರ್ಟ್ ಕೂಡ ಅವರನ್ನು ತಪ್ಪಿತಸ್ಥರು ಎಂದು ಹೇಳಿ ಅನರ್ಹತೆಯನ್ನು ಎತ್ತಿ ಹಿಡಿದಿದೆ.@BJP4Karnataka ಕ್ಕೆ ನೈತಿಕತೆ ಇದ್ದರೆ ಈ ಅನರ್ಹರಿಗೆ ಟಿಕೆಟ್ ನೀಡಬಾರದು.
ನನಗೆ ನಿಮ್ಮ ಆಶೀರ್ವಾದ ಬೇಕಾಗಿದೆ. ನನ್ನ ವಿಜಯೋತ್ಸವಕ್ಕೆ ಪ್ರಾರ್ಥಿಸಿ. ನನ್ನ ಕ್ಷೇತ್ರ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ನನ್ನ ಸೇವೆಯನ್ನು ಅರ್ಪಿಸುತ್ತೇನೆ. ಈ ನಿಟ್ಟಿನಲ್ಲಿ ನನಗೆ ಇನ್ನಷ್ಟು ಸರ್ವಶಕ್ತಿಯನ್ನು ನೀಡಿ ಆಶೀರ್ವದಿಸಲು ಬೇಡುತ್ತೇನೆ.
— Dr Sudhakar K (@mla_sudhakar) November 13, 2019