ತನ್ವೀರ್ ಅರೆನಗ್ನ ಚಿತ್ರ ವೀಕ್ಷಣೆ, ಸಿದ್ದರಾಮಯ್ಯ, ಪರಂ ಗರಂ
ರಾಯಚೂರಿನಲ್ಲಿ ಟಿಪ್ಪು ಜಯಂತಿ ಆಚರಣೆ ಸಮಾರಂಭದ ವೇದಿಕೆಯಲ್ಲಿ ಕುಳಿತು ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ಸಚಿವ ತನ್ವೀರ್ ಸೇಠ್ ಅವರ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರೆ.
ಬೆಂಗಳೂರು, ನವೆಂಬರ್ 11:'ಅರೆನಗ್ನ ಚಿತ್ರಗಳನ್ನು ವೀಕ್ಷಿಸಿಲ್ಲ. ಯಾವುದೇ ತನಿಖೆಗೆ ಸಿದ್ಧ' ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ರಾಯಚೂರಿನಲ್ಲಿ
ಟಿಪ್ಪು
ಜಯಂತಿ
ಆಚರಣೆ
ಸಮಾರಂಭದ
ವೇದಿಕೆಯಲ್ಲಿ
ಕುಳಿತು
ಅಶ್ಲೀಲ
ಚಿತ್ರಗಳನ್ನು
ವೀಕ್ಷಿಸಿದ
ಸಚಿವ
ತನ್ವೀರ್
ಸೇಠ್
ಅವರ
ವಿರುದ್ಧ
ಸಿಎಂ
ಸಿದ್ದರಾಮಯ್ಯ
ಅವರು
ಗರಂ
ಆಗಿದ್ದಾರೆ.
ಈ
ಬಗ್ಗೆ
ವರದಿ
ಪಡೆದು
ನಂತರ
ಮಾತನಾಡುತ್ತೇನೆ
ಎಂದು
ಬರಪೀಡಿತ
ಜಿಲ್ಲೆಗಳ
ಪ್ರವಾಸ
ನಿರತ
ಸಿದ್ದರಾಮಯ್ಯ
ಅವರು
ಹೇಳಿದರು.[ವಿಧಾನಸಭೇಲಿ
ನೋಡಿದ್ದು,
ಸಾರ್ವಜನಿಕ
ಸಮಾರಂಭದಲ್ಲಿ
ನೋಡೋದು
ಒಂದೇ
ಅಲ್ಲ]
ತನ್ವೀರ್
ಸೇಠ್
ಪ್ರಕರಣದ
ಬಗ್ಗೆ
ವರದಿಯನ್ನು
ಎಐಸಿಸಿ
ಪ್ರಧಾನ
ಕಾರ್ಯದರ್ಶಿ
ಹಾಗೂ
ರಾಜ್ಯ
ಕಾಂಗ್ರೆಸ್
ಉಸ್ತುವಾರಿ
ದಿಗ್ವಿಜಯ್
ಸಿಂಗ್
ಅವರು
ಮುಖ್ಯ
ಮಂತ್ರಿ
ಮತ್ತು
ಕೆಪಿಸಿಸಿ
ಅಧ್ಯಕ್ಷರಿಗೆ
ನೀಡುವಂತೆ
ಗೃಹ
ಸಚಿವ
ಜಿ
ಪರಮೇಶ್ವರ
ಅವರಿಗೆ
ಸೂಚಿಸಲಾಗಿದೆ.
ಪ್ರತಿಭಟನೆ:
ರಾಜ್ಯದ
ಹಲವಡೆ
ತನ್ವೀರ್
ಸೇಠ್
ಪ್ರಕರಣವನ್ನು
ಮುಂದಿಟ್ಟುಕೊಂಡು
ಬಿಜೆಪಿ
ಪ್ರತಿಭಟನೆ
ನಡೆಸುತ್ತಿದೆ.ಬಿಜೆಪಿ
ಜತೆಗೆ
ಎಬಿವಿಪಿ
ಕೂಡಾ
ಕೆಲವೆಡೆ
ಪ್ರತಿಭಟನೆ
ಹಮ್ಮಿಕೊಂಡಿದೆ.[ಅಶ್ಲೀಲ
ಮಂತ್ರಿ'
ಗೆ
ಮರ್ಯಾದೆ
ಇದ್ದರೆ
ರಾಜೀನಾಮೆ
ಕೊಡಲಿ:
ಪುಟ್ಟಣ್ಣ]
ಮಾಧ್ಯಮಗಳ ವರದಿಗೆ ಪ್ರತಿಕ್ರಿಯೆ ನೀಡಿರುವ ತನ್ವೀರ್ ಸೇಥ್ ಅವರು, ವಾಟ್ಸಾಪ್ ನಲ್ಲಿ ಬಂದಿರುವ ಚಿತ್ರಗಳನ್ನು ವೀಕ್ಷಿಸುತ್ತಿದ್ದೆ. ನಾನು ಸುಸಂಸ್ಕೃತ ಕುಟುಂಬದಿಂದ ಬಂದವನು.ಅರೆನಗ್ನ ಚಿತ್ರಗಳನ್ನು ನೋಡುವ ಕೆಲಸ ಮಾಡಿಲ್ಲ. ಪ್ರಚಲಿತ ವಿದ್ಯಮಾನಗಳನ್ನು ತಿಳಿಯುವುದು ನನ್ನ ಕರ್ತವ್ಯ. ಕಳೆದ ಬಾರಿ ಟಿಪ್ಪು ಜಯಂತಿ ದಿನದಂದು ನಡೆದ ಘರ್ಷಣೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿತ್ತು. ಈ ಬಗ್ಗೆ ಸುದ್ದಿ ಬಂದಿರಬಹುದು ಎಂದು ವೀಕ್ಷಿಸುತ್ತಿದೆ. ವಾಟ್ಸಾಪ್ನಲ್ಲಿ ಬಂದಿರುವ ಚಿತ್ರಗಳ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರನ್ನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಘಟನೆಯ ಬಗ್ಗೆ ಮುಖ್ಯ ಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಪಷ್ಟ ನೀಡಿದ್ದೇನೆ ಎಂದಿದ್ದಾರೆ.