ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಶಾಸಕರು ಅನರ್ಹ, ಬಿಎಸ್ವೈ ಸಿಎಂ, ಸದನದ ಬಲಾಬಲ?

|
Google Oneindia Kannada News

ಬೆಂಗಳೂರು, ಜುಲೈ, 26: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಜ್ಯಾಧ್ಯಕ್ಷ, ಶಿಕಾರಿಪುರದ ಶಾಸಕ ಬಿ.ಎಸ್ ಯಡಿಯೂರಪ್ಪ 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು ಸಂಜೆ 6 ಗಂಟೆ ನಂತರ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದಾರೆ.

ಸರ್ಕಾರ ರಚನೆ, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲ ವಜುಭಾಯಿ ವಾಲ ಅವರ ಅನುಮತಿಯನ್ನು ಯಡಿಯೂರಪ್ಪ ಪಡೆದುಕೊಂಡಿದ್ದಾರೆ. ಆದರೆ, ಈ ನಡುವೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ, ಸರ್ಕಾರ ಉಳಿಸಿಕೊಳ್ಳಲು ಅಗತ್ಯ ಸಂಖ್ಯಾಬಲವನ್ನು ವಿಧಾನಸಭೆಯಲ್ಲಿ ಹೊಂದಿದೆಯೇ?

<span class="ಶಿಸ್ತಿನ ಸಿಪಾಯಿ" ಯಡಿಯೂರಪ್ಪ ರಾಜಕೀಯ ಬದುಕಿನ ಚಿತ್ರಣ" title=""ಶಿಸ್ತಿನ ಸಿಪಾಯಿ" ಯಡಿಯೂರಪ್ಪ ರಾಜಕೀಯ ಬದುಕಿನ ಚಿತ್ರಣ" />"ಶಿಸ್ತಿನ ಸಿಪಾಯಿ" ಯಡಿಯೂರಪ್ಪ ರಾಜಕೀಯ ಬದುಕಿನ ಚಿತ್ರಣ

ನಿನ್ನೆ ದಿನ ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ ಬಳಿಕ, ಸದನದ ಸಂಖ್ಯಾಬಲದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ, ರಾಜ್ಯ ರಾಜಕೀಯದಲ್ಲಿ ಅತೃಪ್ತ ಶಾಸಕರು, ಯಡಿಯೂರಪ್ಪ ಹಾಗೂ ಸ್ಪೀಕರ್ ಮುಂದಿನ ನಡೆ ಕುತೂಹಲಕಾರಿಯಾಗಲಿದೆ.

Karnataka House strength: Can B S Yeddyurappa tide over in the assembly?

10 ಕಾಂಗ್ರೆಸ್, 3 ಜೆಡಿಎಸ್ ಹಾಗೂ 2 ಪಕ್ಷೇತರ ಶಾಸಕರ ರಾಜೀನಾಮೆಯಿಂದ 225 ಸಂಖ್ಯಾಬಲದ 15ನೇ ವಿಧಾನಸಭೆಯ ಸಂಖ್ಯಾಬಲವು ಕುಸಿದಿತ್ತು. ಜುಲೈ 25ರಂದು ರಾತ್ರಿ ಸ್ಪೀಕರ್ ರಮೇಶ್ ಕುಮಾರ್ ಅವರು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್ ಶಂಕರ್ ಅವರನ್ನು 15ನೇ ವಿಧಾನಸಭೆ ಅವಧಿ(2023) ಮುಗಿಯುವ ತನಕ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು.

76ರ ಬಿಎಸ್ವೈ ಸಿಎಂ ಆಗಲು ಅನುಮತಿ ನೀಡಿ ನಿಯಮ ಗಾಳಿಗೆ ತೂರಿತೆ ಬಿಜೆಪಿ?76ರ ಬಿಎಸ್ವೈ ಸಿಎಂ ಆಗಲು ಅನುಮತಿ ನೀಡಿ ನಿಯಮ ಗಾಳಿಗೆ ತೂರಿತೆ ಬಿಜೆಪಿ?

ಜುಲೈ 26ರಂದು
ವಿಧಾನಸಭೆ ಬಲಾಬಲ 222
ಮ್ಯಾಜಿಕ್ ನಂಬರ್: 112
ಬಿಜೆಪಿ : 105+1 (ಎಚ್ ನಾಗೇಶ್ ಬೆಂಬಲ)
ಬಿಎಸ್ಪಿ : 1 ತಟಸ್ಥ
ಕಾಂಗ್ರೆಸ್: 76
ಜೆಡಿಎಸ್ : 37
ಮೈತ್ರಿ : 112
ಅನರ್ಹ :3

ಸಂಜೆ ಆರು ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಸಂಜೆ ಆರು ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ

ಬಿಜೆಪಿ ಬಹುಮತ ಸಾಬೀತುಪಡಿಸಲು 5 ಶಾಸಕರ ಕೊರತೆ ಎದುರಿಸಲಿದೆ. ಸ್ಪೀಕರ್ ರಮೇಶ್ ಅವರು ಆತುರವಾಗಿ ರಾಜೀನಾಮೆ ನೀಡಿದ ಉಳಿದ 14 ಶಾಸಕರ ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ನಿರ್ಧಾರ ಕೈಗೊಂಡರೆ ಮತ್ತೊಮ್ಮೆ ಸಂಖ್ಯಾಬಲ ವ್ಯತ್ಯಾಸವಾಗಲಿದೆ.

ಅಥವಾ ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಿದ ಜುಲೈ 23(ಮಂಗಳವಾರ)ದಂದೆ ಅಧಿವೇಶನಕ್ಕೆ 20 ಮಂದಿ ಶಾಸಕರು ಗೈರಾದರೆ, 208 ಸದಸ್ಯರ ಸಂಖ್ಯಾಬಲದಲ್ಲಿ 103 ಮ್ಯಾಜಿಕ್ ನಂಬರ್ ದಾಟುವುದು 105 ಬಲ ಹೊಂದಿರುವ ಬಿಜೆಪಿಗೆ ಕಷ್ಟವಾಗದು, ರಾಜೀನಾಮೆ ನೀಡಿರುವ 14 ಮಂದಿ ಶಾಸಕರನ್ನು ಮುಂಬೈನಲ್ಲೇ ಉಳಿಯುವಂತೆ ನೋಡಿಕೊಂಡರೂ, ಯಡಿಯೂರಪ್ಪಗೆ ವಿಶ್ವಾಸಮತ ಗೆಲ್ಲಲು ಸಾಧ್ಯವಾಗಲಿದೆ.

English summary
What is the Karnataka House strength as B S Yeddyurappa set to take oath as the chief minister of Karnataka later today(July 26).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X