ಸೋಮವಾರದಿಂದ ಕೇರಳ, ತಮಿಳುನಾಡಿಗೆ ಕೆಎಸ್ಆರ್ಟಿಸಿ ಬಸ್ ಸೇವೆ
ಬೆಂಗಳೂರು,
ಆಗಸ್ಟ್
22:
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಏರಿಕೆ
ಭೀತಿ
ನಡುವೆ
ಸೋಮವಾರದಿಂದ
ಕೇರಳ
ಮತ್ತು
ತಮಿಳುನಾಡಿಗೆ
ಕರ್ನಾಟಕ
ರಾಜ್ಯ
ರಸ್ತೆ
ಸಾರಿಗೆ
ನಿಗಮದ
ಬಸ್
ಸೇವೆ
ಪುನಾರಂಭಗೊಳಿಸಲಾಗುವುದು
ಎಂದು
ರಾಜ್ಯ
ಸರ್ಕಾರ
ತಿಳಿಸಿದೆ.
ಕೇರಳ
ಮತ್ತು
ತಮಿಳುನಾಡಿಗೆ
ಸಂಚರಿಸುವ
ಪ್ರಯಾಣಿಕರು
72
ಗಂಟೆಗಳೊಗೆ
ನಡೆಸಿದ
RT-PCR
ಪರೀಕ್ಷೆಯ
ನೆಗೆಟಿವ್
ವರದಿ
ಅಥವಾ
ಕರ್ನಾಟಕ
ಸರ್ಕಾರದ
ಮಾರ್ಗಸೂಚಿ
ಅನ್ವಯ
ಕನಿಷ್ಠ
ಒಂದು
ಡೋಸ್
ಲಸಿಕೆ
ಪಡೆದುಕೊಂಡಿರುವುದು
ಕಡ್ಡಾಯವಾಗಿದೆ.
"ತಮಿಳುನಾಡಿಗೆ
ಕರ್ನಾಟಕ
ರಾಜ್ಯ
ರಸ್ತೆ
ಸಾರಿಗೆ
ನಿಗಮದ
ಬಸ್
ಸೇವೆಯನ್ನು
ನಾಳೆಯಿಂದ
ಪುನಾರಂಭಿಸಲಾಗುವುದು.
ರಾಜ್ಯದ
ವಿವಿಧ
ಮಾರ್ಗಗಳಲ್ಲಿ
250
ಬಸ್ಸುಗಳು
ಸಂಚರಿಸಲಿವೆ,"
ಎಂದು
ಕೆಎಸ್ಆರ್
ಟಿಸಿ
ಟ್ವೀಟ್
ಮಾಡಿದೆ.
ಪ್ರತಿನಿತ್ಯ
ಕೇರಳಕ್ಕೆ
ಪ್ರಯಾಣಿಸುವ
ವಿದ್ಯಾರ್ಥಿಗಳು,
ಉದ್ಯೋಗಿಗಳು
ಹಾಗೂ
ಇತರರು
15
ದಿನಗಳಿಗೊಮ್ಮೆ
ಕೊವಿಡ್-19
ಪರೀಕ್ಷೆ
ಮಾಡಿಸಿಕೊಳ್ಳಬೇಕು.
ಪ್ರಯಾಣದ
ಸಂದರ್ಭದಲ್ಲಿ
RT-PCR
ವರದಿಯನ್ನು
ಕಡ್ಡಾಯವಾಗಿ
ಇಟ್ಟುಕೊಂಡಿರಬೇಕು.
ಕೊವಿಡ್-19
ಇಳಿಮುಖ:
ಕರ್ನಾಟಕದಲ್ಲಿ
ಒಂದೇ
ದಿನ
1189
ಮಂದಿಗೆ
ಸೋಂಕು
ಕರ್ನಾಟಕದ
ಈ
ನಿಲ್ದಾಣಗಳಿಂದ
ಬಸ್
ಸಂಚಾರ:
ಬೆಂಗಳೂರು,
ಮೈಸೂರು,
ಮಂಗಳೂರು,
ಪುತ್ತೂರು
ಸೇರಿದಂತೆ
ಅಗತ್ಯವಿರುವ
ವಿವಿಧ
ಪ್ರದೇಶಗಳಿಂದ
ನೆರೆ
ರಾಜ್ಯಗಳಿಗೆ
ಕರ್ನಾಟಕ
ರಾಜ್ಯ
ರಸ್ತೆ
ಸಾರಿಗೆ
ನಿಗಮದ
ಬಸ್ಸುಗಳು
ಸಂಚರಿಸಲಿವೆ.
ಪ್ರಯಾಣಿಕರ
ಅನುಕೂಲಕ್ಕಾಗಿ
ಈ
ಸೇವೆಯನ್ನು
ಪುನಾರಂಭಿಸಲಾಗಿದೆ
ಎಂದು
ಕೆಎಸ್ಆರ್
ಟಿಸಿ
ಪ್ರಕಟಣೆಯಲ್ಲಿ
ತಿಳಿಸಿದೆ.
ಕೊವಿಡ್-19
ಸೋಂಕಿತ
ಪ್ರಕರಣಗಳು
ಹೆಚ್ಚಾದ
ಹಿನ್ನೆಲೆ
ಕಳೆದ
ಏಪ್ರಿಲ್
27ರಂದು
ನೆರೆ
ರಾಜ್ಯಗಳಿಗೆ
ಬಸ್
ಸಂಚಾರವನ್ನು
ಸ್ಥಗಿತಗೊಳಿಸಲಾಗಿತ್ತು.
Recommended Video
ಕರ್ನಾಟಕದಲ್ಲಿ
ಇಳಿಮುಖವಾಗಿ
ಕೊವಿಡ್-19:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತರ
ಸಂಖ್ಯೆ
ಕೊಂಚ
ಇಳಿಮುಖವಾಗಿದೆ.
ರಾಜ್ಯದಲ್ಲಿ
ಕೊವಿಡ್-19
ಸೋಂಕಿತ
ಪ್ರಕರಣಗಳ
ಪ್ರಮಾಣ
ಶೇ.0.94ರಷ್ಟಿದ್ದು,
ಸಾವಿನ
ಸಂಖ್ಯೆಯ
ಶೇಕಡಾವಾರು
ಪ್ರಮಾಣ
1.85ರಷ್ಟಿದೆ.
ರಾಜ್ಯದಲ್ಲಿ
ಒಂದು
ದಿನದಲ್ಲಿ
1189
ಮಂದಿಗೆ
ಕೊರೊನಾವೈರಸ್
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ಇದೇ
ಅವಧಿಯಲ್ಲಿ
1408
ಸೋಂಕಿತರು
ಗುಣಮುಖರಾಗಿದ್ದು,
22
ಮಂದಿ
ಪ್ರಾಣ
ಬಿಟ್ಟಿದ್ದು,
ಸಾವಿನ
ಸಂಖ್ಯೆ
37145ಕ್ಕೆ
ಏರಿಕೆಯಾಗಿದೆ.
ಭಾನುವಾರದ
ಅಂಕಿ-ಅಂಶಗಳ
ಪ್ರಕಾರ,
ರಾಜ್ಯದಲ್ಲಿ
ಒಟ್ಟು
ಸೋಂಕಿತ
ಪ್ರಕರಣಗಳ
ಸಂಖ್ಯೆ
2938616ಕ್ಕೆ
ಏರಿಕೆಯಾಗಿದೆ.
ಒಟ್ಟು
2880889
ಸೋಂಕಿತರು
ಗುಣಮುಖರಾಗಿದ್ದು.
20556
ಕೊವಿಡ್-19
ಸಕ್ರಿಯ
ಪ್ರಕರಣಗಳಿವೆ
ಎಂದು
ರಾಜ್ಯ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಇಲಾಖೆ
ಮಾಹಿತಿ
ನೀಡಿದೆ.