ಕರ್ನಾಟಕದಲ್ಲಿ ಕೇರಳ ಮತ್ತು ಮಹಾರಾಷ್ಟ್ರದ ಪ್ರಯಾಣಿಕರ ಬಗ್ಗೆ ಕಟ್ಟೆಚ್ಚರ
ಬೆಂಗಳೂರು,
ನವೆಂಬರ್
28:
ದಕ್ಷಿಣ
ಆಫ್ರಿಕಾದಲ್ಲಿ
ಕಾಣಿಸಿಕೊಂಡಿರುವ
ಕೊವಿಡ್-19
ಹೊಸ
ರೂಪಾಂತರ
ಓಮ್ರಿಕಾನ್
ಭಾರತದಲ್ಲೂ
ಭೀತಿ
ಹುಟ್ಟಿಸುತ್ತಿದೆ.
ಅತ್ಯಂತ
ಅಪಾಯಕಾರಿ
ಎಂದು
ಹೇಳಲಾದ
ಹೊಸ
ರೂಪಾಂತರವನ್ನು
ನಿಯಂತ್ರಿಸುವ
ನಿಟ್ಟಿನಲ್ಲಿ
ಸೋಮವಾರ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ನೇತೃತ್ವದಲ್ಲಿ
ತುರ್ತು
ಸಭೆ
ನಡೆಸಲಾಯಿತು.
|
ಬೆಂಗಳೂರಿನ
ಸಿಎಂ
ಗೃಹ
ಕಚೇರಿ
ಕೃಷ್ಣಾದಲ್ಲಿ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿಯವರು
ಕೋವಿಡ್
19
ನಿಯಂತ್ರಣಕ್ಕೆ
ಸಂಬಂಧಿಸಿದಂತೆ
ಅಧಿಕಾರಿಗಳೊಂದಿಗೆ
ಸಭೆ
ನಡೆಸಿದರು.
ಬಿಬಿಎಂಪಿ
ಸೇರಿದಂತೆ
ಬೆಂಗಳೂರು
ನಗರ
ಜಿಲ್ಲೆ,
ಧಾರವಾಡ,
ದಕ್ಷಿಣ
ಕನ್ನಡ,
ಉಡುಪಿ,
ಚಾಮರಾಜನಗರ
,
ಕೊಡಗು,
ಮೈಸೂರು
ಸೇರಿ
ಏಳು
ಜಿಲ್ಲೆಗಳ
ಜಿಲ್ಲಾಧಿಕಾರಿಗಳೊಂದಿಗೆ
ವೀಡಿಯೊ
ಸಂವಾದ
ನಡೆಸಿದರು.
ಹೊಸ ಕೋವಿಡ್ ರೂಪಾಂತರದ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿ..
ಸಿಎಂ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಚಿವ ಆರ್.ಅಶೋಕ್, ಡಾ:ಸಿ.ಎನ್.ಅಶ್ವತ್ಥ್ ನಾರಾಯಣ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಆಯುಕ್ತ ರಂದೀಪ್ ಹಾಗೂ ಹಿರಿಯ ಅಧಿಕಾರಿಗಳು ಹಾಜರಾಗಿದ್ದರು.
ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.
ಕರ್ನಾಟಕದಲ್ಲಿ
ಕೊವಿಡ್-19
ನಿಯಂತ್ರಣಕ್ಕೆ
ಕಠಿಣ
ಕ್ರಮ:
•
ಕೇರಳ
ಮತ್ತು
ಮಹಾರಾಷ್ಟ್ರ
ಗಡಿ
ಜಿಲ್ಲೆಗಳಲ್ಲಿ
ಕಟ್ಟೆಚ್ಚರ.
*
ರಾಷ್ಟ್ರೀಯ
ಹೆದ್ದಾರಿಗಳಲ್ಲಿ
ಬಿಗಿ
ವಿಚಕ್ಷಣೆ
ಕೈಗೊಳ್ಳುವುದು
*
ಕೇರಳ
ಮತ್ತು
ಮಹಾರಾಷ್ಟ್ರದಿಂದ
ರಾಜ್ಯ
ಪವೇಶಿಸುವವರಿಗೆ
ಆರ್.ಟಿ.ಪಿ.ಸಿ.
ಆರ್.
ನೆಗೆಟಿವ್
ವರದಿ
ಕಡ್ಡಾಯ.
*
ಗಡಿ
ಜಿಲ್ಲೆಗಳಲ್ಲಿ
ಎಲ್ಲ
ಇಲಾಖೆಗಳ
ಸಹಕಾರವನ್ನು
ಪಡೆದುಕೊಂಡು
ಮೂರು
ಶಿಫ್ಟ್
ಗಳಲ್ಲಿ
ಕಾರ್ಯ
ನಿರ್ವಹಿಸುವಂತೆ
ಸೂಚನೆ
*
16
ನಗಳ
ಹಿಂದೆ
ಕೇರಳದಿಂದ
ಬಂದ
ವಿದ್ಯಾರ್ಥಿಗಳಿಗೆ
ಮತ್ತೊಮ್ಮೆ
ಆರ್.ಟಿ.ಪಿ.ಸಿ.ಆರ್
ಪರೀಕ್ಷೆ
ಮಾಡಿಸಬೇಕು.
*
ಹಾಸ್ಟೆಲ್
ಗಳಲ್ಲಿ
ವಾಸಿಸುತ್ತಿರುವ
ವಿದ್ಯಾರ್ಥಿಗಳಿಗೆ
ನೆಗಟಿವ್
ವರದಿ
ಬಂದ
ನಂತರದ
7ನೇ
ದಿನಕ್ಕೆ
ಮತ್ತೊಮ್ಮೆ
RT-PCR
ಪರೀಕ್ಷೆ
ಮಾಡುವುದು.
•
ಕೇರಳ
ಮತ್ತು
ಮಹಾರಾಷ್ಟ್ರದಿಂದ
ರಾಜ್ಯಕ್ಕೆ
ಆಗಮಿಸುವವರನ್ನು
ಕಡ್ಡಾಯವಾಗಿ
ಪರೀಕ್ಷೆಗೊಳಪಡಿಸಬೇಕು.
*ಹೋಟೇಲ್,
ರೆಸ್ಟೋರೆಂಟ್ಗಳು,
ಸಿನಿಮಾ
ಹಾಲ್ಗಳು,
ಈಜುಕೊಳ,
ಸಾರ್ವಜನಿಕ
ಗ್ರಂಥಾಲಯ,
ಮೃಗಾಲಯಗಳು
ಮತ್ತು
ಜೈವಿಕ
ಉದ್ಯಾನವನಗಳಲ್ಲಿ
ಕೆಲಸ
ಮಾಡುವವರು
ಕಡ್ಡಾಯವಾಗಿ
ಎರಡು
ಡೋಸ್
ಲಸಿಕೆ
ಪಡೆದುಕೊಂಡಿರಬೇಕು.
*
ವೈದ್ಯಕೀಯ
ಕಾಲೇಜು
ಮತ್ತು
ನರ್ಸಿಂಗ್
ಕಾಲೇಜುಗಳ
ವಿದ್ಯಾರ್ಥಿಗಳಿಗೆ
ಕೊವಿಡ್-19
ಪರೀಕ್ಷೆಗಳನ್ನು
ಹೆಚ್ಚಿಸುವುದು.
•
ಸರ್ಕಾರಿ
ಕಚೇರಿಗಳಲ್ಲಿ
ಹಾಗೂ
ಮಾಲ್ಗಳಲ್ಲಿ
ಕೆಲಸ
ಮಾಡುವವರು
ಕಡ್ಡಾಯವಾಗಿ
ಎರಡು
ಡೋಸ್
ಲಸಿಕೆ
ಪಡೆಯಬೇಕು.
*
ಸರ್ಕಾರಿ
ಕಚೇರಿ
ಹಾಗೂ
ಮಾಲ್ಗಳಲ್ಲಿಯೇ
ಲಸಿಕೆ
ನೀಡಲು
ವ್ಯವಸ್ಥೆ
ಕಲ್ಪಿಸುವುದು.
•
ಅಂತರಾಷ್ಟ್ರೀಯ
ವಿಮಾನ
ನಿಲ್ದಾಣದಲ್ಲಿ
ಪರೀಕ್ಷೆಯನ್ನು
ತೀವ್ರಗೊಳಿಸುವುದು,
ನೆಗಟಿವ್
ಇದ್ದವರಿಗೆ
ನಗರ
ಪ್ರವೇಶಕ್ಕೆ
ಅನುಮತಿ
ನೀಡುವುದು,
ಪಾಸಿಟಿವ್
ಇದ್ದವರಿಗೆ
ಚಿಕಿತ್ಸೆಗಾಗಿ
ಆಸ್ಪತ್ರೆಗೆ
ರವಾನಿಸುವುದು.
ಸಚಿವ
ಆರ್
ಅಶೋಕ್
ನೀಡಿದ
ಸಲಹೆಗಳು:
*
ಕರ್ನಾಟಕದಲ್ಲಿ
ಕೊವಿಡ್-19
ಸೋಂಕಿತ
ಪ್ರಕರಣಗಳು
ಹೆಚ್ಚುತ್ತಿರುವ
ಪ್ರದೇಶಗಳಲ್ಲಿ
ನಿಗಾ
ವಹಿಸುವುದು.
ಅಂಥ
ಪ್ರದೇಶಗಳಿಗೆ
ಜಿಲ್ಲಾಧಿಕಾರಿಗಳು
ದಿಢೀರ್
ಭೇಟಿ
ನೀಡಿ
ಪರಿಶೀಲನೆ
ನಡೆಸಬೇಕು
*
ಶಾಲಾ-ಕಾಲೇಜುಗಳಲ್ಲಿ
ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು
ಆಯೋಜಿಸಲಾಗುತ್ತಿದ್ದು,
ಪೋಷಕರಿಗೂ
ಆಹ್ವಾನ
ನೀಡಲಾಗುತ್ತಿದೆ.
ಈಗಾಗಲೇ
ನಿಗದಿಪಡಿಸಿದ
ಕಾರ್ಯಕ್ರಮಗಳನ್ನು
ಮಾಡಿರಿ,
ಹೊಸದಾಗಿ
ಮಾಡುವುದು
ಬೇಡ.
ರಾಜ್ಯದ
ಎಲ್ಲ
ಶಾಲಾ-ಕಾಲೇಜುಗಳಿಗೆ
ಹೊಸ
ಮಾರ್ಗಸೂಚಿಯನ್ನು
ಕಳುಹಿಸಲಾಗುವುದು.
*
ಮದುವೆ
ಮತ್ತು
ಇತರೆ
ಸಮಾರಂಭಗಳಲ್ಲಿ
ಸಾರ್ವಜನಿಕರು
ಮಾಸ್ಕ
ಧರಿಸುತ್ತಿಲ್ಲ.
ಎಲ್ಲರೂ
ಕಡ್ಡಾಯವಾಗಿ
ಮದುವೆ
ಹಾಗೂ
ಸಮಾರಂಭಗಳಲ್ಲಿ
ಮಾಸ್ಕ್
ಹಾಕಿಕೊಳ್ಳಬೇಕು
*
ಕೊವಿಡ್-19
ಸೋಂಕಿತ
ಪ್ರಕರಣಗಳನ್ನು
ಗಮನದಲ್ಲಿಟ್ಟುಕೊಂಡು
ಮುಂದಿನ
ತೀರ್ಮಾನ
ತೆಗೆದುಕೊಳ್ಳಲಾಗುವುದು.
*
ಕ್ರಿಸ್
ಮಸ್
ಮತ್ತು
ಹೊಸ
ವರ್ಷಾಚರಣೆ
ದಿನ
ಮೋಜು
ಮಸ್ತಿಗೆ
ಸೇರಿದಂತೆ
ಅವಕಾಶ
ನೀಡಬೇಕೇ
ಬೇಡವೇ
ಎಂಬುದನ್ನು
ಮುಖ್ಯಮಂತ್ರಿ
ನೇತೃತ್ವದಲ್ಲಿ
ಮತ್ತೊಂದು
ಸುತ್ತಿನ
ಸಭೆಯ
ನಂತರ
ತೀರ್ಮಾನಿಸಲಾಗುತ್ತದೆ.
Recommended Video