ಪ್ಲಾಸ್ಟಿಕ್ ರಾಷ್ಟ್ರಧ್ವಜದ ಬಳಕೆ ನಿಷೇಧಿಸಿದ ಸರ್ಕಾರ
ಬೆಂಗಳೂರು, ಜ. 19 : ಕರ್ನಾಟಕ ಸರ್ಕಾರ ಪ್ಲಾಸ್ಟಿಕ್ ರಾಷ್ಟ್ರಧ್ವಜದ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದೆ. ಧ್ವಜವನ್ನು ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಆಡಳಿತ
ಮತ್ತು
ಸಿಬ್ಬಂದಿ
ಸುಧಾರಣಾ
ಇಲಾಖೆ
ಈ
ಆದೇಶವನ್ನು
ಹೊರಡಿಸಿದೆ.
ಭಾರತ
ಧ್ವಜ
ಸಂಹಿತೆ-2002ರ
ನಿಯಮಗಳ
ಅನ್ವಯ
ಪ್ಲಾಸ್ಟಿಕ್ನಿಂದ
ತಯಾರಿಸಿದ
ರಾಷ್ಟ್ರದ
ಧ್ವಜವನ್ನು
ಸಾರ್ವಜನಿಕವಾಗಿ
ಬಳಕೆ
ಮಾಡುವುದನ್ನು
ನಿಷೇಧಿಸಲಾಗಿದೆ.
ಸರ್ಕಾರದ ಆದೇಶದ ಅನ್ವಯ ಉಣ್ಣೆ, ಹತ್ತಿ, ರೇಷ್ಮೆ ಬಟ್ಟೆಗಳಿಂದ ತಯಾರಿಸಲಾದ ರಾಷ್ಟ್ರಧ್ವಜವನ್ನು ಮಾತ್ರ ಸಾರ್ವಜನಿಕರು ಬಳಸಬೇಕು ಎಂದು ಸ್ಪಷ್ಟಪಡಿಸಿದೆ. ರಾಷ್ಟ್ರಧ್ವಜದ ಗೌರವಕ್ಕೆ ಕುಂದು ಬರದಂತೆ ವಿದ್ಯಾರ್ಥಿಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಆದೇಶದಲ್ಲಿ ಮನವಿ ಮಾಡಲಾಗಿದೆ. [ಗಣರಾಜ್ಯೋತ್ಸವದಲ್ಲಿ ಚನ್ನಪಟ್ಟಣದ ಗೊಂಬೆಗಳ ಕಲರವ]
ನಿಷೇಧದ ನಡುವೆಯೂ ಪ್ಲಾಸ್ಟಿಕ್ ಧ್ವಜವನ್ನು ಅಂಗಡಿಗಳಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಗಣರಾಜ್ಯೋತ್ಸವ ಹತ್ತಿರವಾಗುತ್ತಿದ್ದು ರಸ್ತೆ ಬದಿಗಳಲ್ಲಿ ಮತ್ತು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಧ್ವಜವನ್ನು ಮಾರಾಟ ಮಾಡಲಾಗುತ್ತದೆ. ಇದನ್ನು ಅರಿತ ಸರ್ಕಾರ ಒಂದು ವಾರದ ಮೊದಲೇ ನಿಷೇಧದ ಆದೇಶವನ್ನು ಹೊರಡಿಸಿದೆ.