ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸದನದಲ್ಲಿ ಏನೆಲ್ಲ ನಡೆಯಲಿದೆ?
ಬೆಂಗಳೂರು, ಮೇ 18: ಒಂದು ಕಡೆ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಯತ್ನಿಸುತ್ತಿದ್ದರೆ, ಬಹುಮತವಿಲ್ಲದ ಸರ್ಕಾರ ಬೀಳಿಸಲು ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಸಜ್ಜಾಗಿದೆ. ಮೇ 19ರಂದು ಸಂಜೆ ವಿಶ್ವಾಸಮತ ಯಾಚನೆ ನಡೆಯಲಿದೆ.
ನಾಳೆ ದಿನ ವಿಧಾನಸಭೆಯಲ್ಲಿ ಏನೆಲ್ಲ ಘಟನಾವಳಿಗಳು ನಡೆಯಲಿವೆ. ವಿಶ್ವಾಸಯತ ಯಾಚನೆ ಪ್ರಕ್ರಿಯೆ ಹೇಗೆ ನಡೆಯಲಿದೆ?
ಶನಿವಾರ ಸದನದಲ್ಲಿ ಸಂಭವಿಸಬಹುದಾದ ಮೂರು ಸಾಧ್ಯತೆಗಳು
ಈ ಹಿಂದೆ ವಿಶ್ವಾಸಮತ ಪ್ರಕ್ರಿಯೆ ನಡೆಸುವಲ್ಲಿ ಸ್ವಜನಪಕ್ಷಪಾತ ನಡೆಸಿದ್ದ ಆರೋಪ ಹೊತ್ತಿದ್ದ ವಿರಾಜಪೇಟೆ ಶಾಸಕ ಕೆಜ್ ಬೋಪಯ್ಯ ಅವರು ಮತ್ತೊಮ್ಮೆ ಸ್ಪೀಕರ್ ಆಗಿ ನಾಳಿನ ಪ್ರಕ್ರಿಯೆಯನ್ನು ನೋಡಿಕೊಳ್ಳಲಿದ್ದಾರೆ.
ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು?
ಪಕ್ಷಗಳ
ಬಲಾಬಲ
:
ವಿಧಾನಸಭೆಯಲ್ಲಿ
ಶಾಸಕರ
ಸಂಖ್ಯಾಬಲ
221/224
ಬಹುಮತಕ್ಕೆ
ಬೇಕಾದ
ಮ್ಯಾಜಿಕ್
ಸಂಖ್ಯೆ
111.
ಬಿಜೆಪಿಯ
ಬಳಿ
ಇರುವ
ಶಾಸಕರು:
104
ಕಾಂಗ್ರೆಸ್
78
ಜೆಡಿಎಸ್
ಪ್ಲಸ್:38
ಇತರೆ:
2
ಪ್ರತಿಪಕ್ಷದ
ಸಂಖ್ಯಾಬಲ
116.
ಕರ್ನಾಟಕ ರಣಾಂಗಣ : ವಿಶ್ವಾಸಮತವನ್ನು ಹೇಗೆ ನಡೆಸಲಾಗುತ್ತದೆ?
ಗಮನಿಸಿ:
ಕುಮಾರಸ್ವಾಮಿ
ಅವರು
ಎರಡು
ಕ್ಷೇತ್ರಗಳಲ್ಲಿ
ಸ್ಪರ್ಧಿಸಿ
ಗೆದ್ದಿದ್ದು,
ಒಂದು
ಕ್ಷೇತ್ರವನ್ನು
ಪರಿಗಣಿಸಲಾಗುತ್ತದೆ.
*
ಜಯನಗರ
ಹಾಗೂ
ರಾಜರಾಜೇಶ್ವರಿ
ನಗರ
ಕ್ಷೇತ್ರಗಳ
ಚುನಾವಣೆ
ನಡೆದಿಲ್ಲ.
ಕೆಜೆ
ಬೋಪಯ್ಯ
ಅವರ
ಅಧಿಕಾರ
ವ್ಯಾಪ್ತಿಯ
ಪ್ರಕ್ರಿಯೆ:
*
ರಾಜ್ಯಪಾಲರ
ನಿರ್ದೇಶನದಂತೆ
ವಿಧಾನಸಭೆಯ
ವಿಶೇಷ
ಸದನ
ಕರೆಯಲಾಗುತ್ತದೆ.
ಸುಪ್ರೀಂಕೋರ್ಟ್
ಆದೇಶದಂತೆ
ನಾಳೆ
ಬೆಳಗ್ಗೆ
ನೂತನ
ಶಾಸಕರ
ಪ್ರಮಾಣ
ವಚನ
ಹಾಗೂ
ಸಂಜೆ
4
ಗಂಟೆಗೆ
ವಿಶ್ವಾಸಮತ
ಯಾಚನೆ
ನಡೆಯಲಿದೆ.
*
ಹಂಗಾಮಿ
ವಿಧಾನಸಭೆ
ಸಭಾಪತಿ
ನೇಮಕವಾಗಲಿದೆ.
ಬಿಜೆಪಿಯಿಂದ
ಕೆಜೆ
ಬೋಪಯ್ಯ
ನೇಮಕವಾಗಿದ್ದಾರೆ.
*
ವಿಶೇಷ
ಸದನ
ಕರೆಯುವಂತೆ
ಸಿಎಂ
ಬಿಎಸ್
ಯಡಿಯೂರಪ್ಪ
ಅವರಿಂದ
ಕೂಡಾ
ಮನವಿ.
*
ಹಂಗಾಮಿ
ಸ್ಪೀಕರ್
ಬೋಪಯ್ಯ
ಅವರು
ನೂತನ
ಶಾಸಕರಿಗೆ
ಪ್ರಮಾಣ
ವಚನ
ಬೋಧಿಸಲಿದ್ದಾರೆ.
*
ಈಗಿನ
ಪರಿಸ್ಥಿತಿಯಲ್ಲಿ
ಬೋಪಯ್ಯ
ಅವರು
ಸುಪ್ರೀಂಕೋರ್ಟ್
ನಿರ್ದೇಶನದಂತೆ
ಪ್ರಕ್ರಿಯೆ
ನಡೆಸಲಿದ್ದಾರೆ.
*
ಸಿಎಂ
ಯಡಿಯೂರಪ್ಪ
ಅವರ
ಭಾಷಣ,
ನಂತರ
ವಿಪಕ್ಷ
ನಾಯಕ
ಜಿ
ಪರಮೇಶ್ವರ
ಅವರ
ಭಾಷಣ,
ಚರ್ಚೆ.
*
ಉಭಯ
ಪಕ್ಷಗಳ
ಹಿರಿಯ
ನಾಯಕರಿಗೂ
ಭಾಷಣದ
ಅವಕಾಶವಿರುತ್ತದೆ.
*
ವಿಶ್ವಾಸಮತ
ಯಾಚನೆಗೆ
ಸ್ಪೀಕರ್
ನಿಂದ
ಕರೆ.
*
ವಿಶ್ವಾಸಮತ
ಹೇಗೆ
ನಡೆಸಬೇಕು
ಎಂಬುದನ್ನು
ಸ್ಪೀಕರ್
ನಿರ್ಧರಿಸಲಿದ್ದಾರೆ.
ಹಾಜರಿರುವ
ಸದಸ್ಯರು
ಕೈ
ಎತ್ತಿ
ಧ್ವನಿಮತ
ಕೂಗಬಹುದು.
*
ಮತದಾನ
ಪ್ರಕ್ರಿಯೆ
ಬಳಿಕ,
ಸ್ಪೀಕರ್
ಅವರು
ಫಲಿತಾಂಶ
ಘೋಷಿಸಲಿದ್ದಾರೆ.
*
ಯಡುಯೂರಪ್ಪ
ಅವರು
ವಿಶ್ವಾಸಮತ
ಗಳಿಸಿದರೆ,
ಸರ್ಕಾರ
ಉಳಿಯಲಿದೆ.
ಇಲ್ಲದಿದ್ದರೆ,
ವಿಪಕ್ಷಗಳು(ಮೈತ್ರಿಕೂಟ)
ಮತ್ತೊಮ್ಮೆ
ರಾಜ್ಯಪಾಲರ
ಮೊರೆ
ಹೊಕ್ಕು,
ಸರ್ಕಾರ
ರಚನೆ,
ವಿಶ್ವಾಸಮತ
ಯಾಚನೆಗೆ
ಅವಕಾಶ
ಕೋರಬಹುದು.
*
ರಾಜ್ಯಪಾಲರು
ಸೂಚಿಸಿದ
ದಿನದಂದು
ವಿಶ್ವಾಸಮತ
ಯಾಚನೆ
ಮತ್ತೊಮ್ಮೆ
ನಡೆಯಲಿದೆ.
* ವಿಶ್ವಾಸಮತ ಯಾಚನೆ ದಿನದಂದು ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ನೌಕರರು ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೆ ಅರ್ಧ ದಿನ ರಜೆ
*
ಮಾಧ್ಯಮ
ಪ್ರತಿನಿಧಿಗಳಿಗೆ
ಪ್ರವೇಶವಿರುತ್ತದೆ.
ಆದರೆ,
ಒಬ್ಬ
ವರದಿಗಾರ
ಒಬ್ಬ
ಕ್ಯಾಮರಾ
ಮನ್
ಗೆ
ಸೀಮಿತ.
*
ವಿಧಾನಸಭಾಂಗಣದಲ್ಲಿ
ಸುಮಾರು
150ಕ್ಕೂ
ಅಧಿಕ
ಮಾರ್ಷಲ್ಲುಗಳಿರುತ್ತಾರೆ.
*
ಗನ್
ಮ್ಯಾನ್,
ಸಚಿವರ
ಆಪ್ತ
ಕಾರ್ಯದರ್ಶಿಗಳಿಗೆ
ಪ್ರವೇಶವಿರುವುದಿಲ್ಲ.