ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಬೆಂಗಳೂರು, ಆಗಸ್ಟ್ 17: ಕರ್ನಾಟಕದಲ್ಲಿ ಸತತವಾಗಿ ಭಾರಿ ಮಳೆ ಸುರಿಯುತ್ತಿದ್ದು, ಜಲಪ್ರವಾಹದ ಭೀತಿಗೊಳಗಾಗಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು, ಭೂ ಕುಸಿತ ಉಂಟಾಗಿ, ಪ್ರಮುಖ ಹೆದ್ದಾರಿಗಳ ಸಂಪರ್ಕ ಕಳೆದು ಹೋಗಿದೆ. ಜಲ ಪ್ರಳಯದ ಸ್ಥಿತಿಯಲ್ಲಿ ಸಿಲುಕಿ ತತ್ತರಿಸುತ್ತಿರುವ ಜನತೆಯನ್ನು ಕೈ ಎತ್ತಿ ಹಿಡಿಯಲು ನೆರವಾಗಬೇಕಿದೆ.
ಕೊಡಗಿನಲ್ಲಿ ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ, ಶನಿವಾರ ಸಂತೆ, ಮಾಂದಲ್ ಪಟ್ಟಿ ಸೇರಿದಂತೆ ವಿವಿಧೆಡೆ ನಿರಂತರ ಮಳೆಗೆ ಜನತೆ ತತ್ತರಿಸಿದ್ದಾರೆ.
ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ
ಕನ್ನಡದ ಕೆಚ್ಚೆದೆ ವೀರರ ನಾಡು ಕೊಡಗಿನ ಪರಿಸ್ಥಿತಿ ಸುಧಾರಿಸಲು ನೆರವಾಗಿ ಎಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ದರ್ಶನ್ ತೂಗುದೀಪ ಹಾಗೂ ಕಿಚ್ಚ ಸುದೀಪ ಅವರು ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹಪೀಡಿತ ಜನರಿಗೆ ಅಕ್ಕಿ, ಗೋಧಿ, ರೆಡಿ ಟು ಈಟ್ ಫುಡ್, ಟೂತ್ ಪೇಸ್ಟ್, ಸೋಪು, ಟಾರ್ಚ್, ಮ್ಯಾಚ್ ಬಾಕ್ಸ್, ಕ್ಯಾಂಡಲ್, ಸ್ಯಾನಿಟರಿ ಪ್ಯಾಡ್, ಬ್ಲಾಂಕೇಟ್ ಹೀಗೆ ಅಗತ್ಯ ವಸ್ತುಗಳನ್ನು ನೀಡಬಹುದು.
ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಕಾಫಿತೋಟ
ಸಿಎಂ ಪರಿಹಾರ ನಿಧಿ: ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಗಿರುವ ಹಾನಿಯನ್ನು ಸರಿಪಡಿಸಲು ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು 200 ಕೋಟಿ ರು ಪರಿಹಾರ ನೀಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಗೆ ದೇಣಿಗೆ ನೀಡಲು ಬಯಸುವವರು ನೇರವಾಗಿ ಸಿಎಂ ಕಚೇರಿಗೆ ಭೇಟಿ ನೀಡಬಹುದು ಅಥವಾ ಅಂಚೆ ಮೂಲಕ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಲುಪಿಸಬಹುದು.
Karnataka
Chief
Minister's
Relief
Fund-Calamity
ಹೆಸರಿನಲ್ಲಿ
ಚೆಕ್
ಅಥವಾ
ಡಿಡಿ
ನೀಡಬಹುದು.
ವಿಳಾಸ:
ಮುಖ್ಯಮಂತ್ರಿಗಳ
ಪರಿಹಾರ
ನಿಧಿ
ಮುಖ್ಯಮಂತ್ರಿಗಳ
ಕಚೇರಿ
ಕರ್ನಾಟಕ
ಸರ್ಕಾರ
ವಿಧಾನಸೌಧ
ಬೆಂಗಳೂರು-560
001.
ರಾಷ್ಟ್ರ ರಕ್ಷಣೆಗೆ ಪ್ರತಿ ಮನೆಯಿಂದಲೂ ವೀರರನ್ನ ಕಳುಹುವ, ಅತಿಥಿ ಸತ್ಕಾರಕ್ಕೆ ಹೆಸರಾದ ಮಡಿಕೇರಿಯ ಜನ ಇಂದು ಪ್ರವಾಹ, ಭೂಕುಸಿತಗಳಿಂದಾಗಿ ತತ್ತರಿಸಿದ್ದಾರೆ. ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೆ ಮಳೆಯೂ ಹಗಲಿರುಳೆನ್ನದೇ ನಿರಂತರವಾಗಿ ಸುರಿಯುತ್ತಲೇ ಇದೆ. ಈಗಾಗಲೇ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿ, ಪ್ರಾಣಹಾನಿಯಾಗಿದೆ. ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದ್ದರೂ ಇನ್ನೂ ಬಹಳ ಮಂದಿ ಅಪಾಯದಲ್ಲಿದ್ದಾರೆ.
ಮಡಿಕೇರಿ ಮಳೆಯಲ್ಲಿ ಸಿಲುಕಿದವರ ಕರುಣಾಜನಕ ಕಥೆ
ಸಂತ್ರಸ್ತರಿಗೆ ಆಹಾರ, ಬಟ್ಟೆ, ಔಷಧಿ ಇತ್ಯಾದಿ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಕೆಲವಾರು ಸಂಘಟನೆಗಳು, ಸ್ವಯಂಸೇವಕರು ಕಾರ್ಯನಿರತರಾಗಿದ್ದಾರೆ.
ರಜೆ ಬಂದರೆ ತಟ್ಟನೆ ಕೊಡಗಿನ ರಮ್ಯ ತಾಣಗಳಿಗೆ ಪ್ರವಾಸ ಹೊರಡುವ ನಾವು ಈಗ ಅಷ್ಟೇ ಸಕ್ರಿಯರಾಗಿ ಪರಿಹಾರ ಕಾರ್ಯದಲ್ಲಿ ಕೈಜೋಡಿಸೋಣ ಬನ್ನಿ! ನಿಮಗೆ ಸಾಧ್ಯವಾಗುವ ಯಾವುದೇ ರೀತಿಯಲ್ಲಿ ಸಹಕರಿಸಲು ಅವಕಾಶವಿದೆ.
ಧನಸಹಾಯ ಮಾಡಲು ಇಚ್ಛಿಸುವವರು ಕೆಳಗಿನ ಖಾತೆಗಳಿಗೆ ಜಮಾ ಮಾಡಬಹುದಾಗಿದೆ👍
ರಾಷ್ಟ್ರೀಯ ಸ್ವಯಂಸೇವಕ ಸಂಘ (ಸೇವಾಭಾರತಿ), ಮಡಿಕೇರಿ
"Rashtriya Swayamsewak Sangh"
Union
Bank
of
India
SB
A/C
No.
348602010009876
IFSCode:
UBIN0534862
"ROTARY
MISTY
HILLS"
Vijaya
Bank
A/c
No.142601011001886
G.
T.Road,
Madikeri
Branch,
Karnataka
571201
IFSC : VIJB0001426
ಬೆಂಗಳೂರಿನಿಂದ ಪ್ರವಾಹ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ಕಳುಹಿಸಲಿಚ್ಛಿಸುವವರು ಅವುಗಳನ್ನು ಈ ವಿಳಾಸಕ್ಕೆ ತಲುಪಿಸಬಹುದು.
ಕೊಡಗಿಗೆ ನೆರವಾಗಿ ಎಂದು ದರ್ಶನ್, ಕಿಚ್ಚ ಸುದೀಪ ಮನವಿ
ಸಂದೀಪ್
ಕುಮಾರ್
ಶೆಟ್ಟಿ,
ಅಕ್ಷಯ
ನಿಲಯ,
ಫರ್ಸ್ಟ್
ಕ್ರಾಸ್,
ಕುವೆಂಪು
ನಗರ
(Land
Mark
ಮಿನಿ
ತಾಜ್
ಮಹಲ್)
ರಾಮಮೂರ್ತಿ
ನಗರ,
ಬೆಂಗಳೂರು
-
16
Ph: 8147953299
#KodaguFloods
— Rosh💃 (@Roshini_11) August 17, 2018
They need your help!!🙏 #Kodagu #Karnatakarains #KeralaFloodRelief pic.twitter.com/2wFw0xTjW1
ಕೊಡಗು ಪರಿಹಾರ ಕಾರ್ಯಾಚರಣೆ: ಮುಖ್ಯ ಕಾರ್ಯದರ್ಶಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ- ನಾಳೆ ಉನ್ನತ ಮಟ್ಟದ ಸಭೆ ---- ಕೊಡಗಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾಪಡೆ,ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಕಾರ್ಯನಿರ್ವಹಿಸುತ್ತಿವೆ. #KarnatakaRains
ಅಗತ್ಯವಿರುವ ಕಡೆ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಾಟಿಕೇರಿಯಲ್ಲಿ ಸಿಲುಕಿದ್ದ 200, ಕಾಂಡನಕೊಲ್ಲಿಯಲ್ಲಿ 80 ಜನರನ್ನು ರಕ್ಷಿಸಲಾಗಿದೆ. #KarnatakaRains pic.twitter.com/nAATIdDB7o
— CM of Karnataka (@CMofKarnataka) August 17, 2018
ದರ್ಶನ್ ತೂಗುದೀಪ ಅವರಿಂದ ಟ್ವೀಟ್, ಕೊಡವ ಸಮಾಜಕ್ಕೆ ಭೇಟಿ ನೀಡಿ ನೆರವು ಕೊಡಿ.
My prayers are with people of kodagu... they need our prayers and support as well.. let's do our best...For Kodagu #supportcoorg #KodaguFloods pic.twitter.com/vVCFUfE4BS
— Darshan Thoogudeepa (@dasadarshan) August 17, 2018
#Kodagu #Madikeri #Kodagufloods helpline numbers pic.twitter.com/9oWiVTGXSP
— BCP MAN (@HMLokesh) August 17, 2018
ರೋಟರಿ
ಮೈಸೂರ್
ನಿಂದ
ನೆರವಿಗೆ
ಮನವಿ
#KodaguFloods | You can make your contributions here... pic.twitter.com/UMca6LbwmM
— Star Of Mysore (@Star_Of_Mysore) August 17, 2018
ಪುನೀತ್ ರಾಜ್ ಕುಮಾರ್ ಫ್ಯಾನ್ ಕ್ಲಬ್ ನಿಂದ ಟ್ವೀಟ್: ಡಾ. ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಎಲ್ ಸರ್ವೀಸಸ್ ವತಿಯಿಂದ ಮನವಿ
#KodaguFloods#KERALAFLOODS
— Puneeth Official Fan Club™ (@PRK_FC) August 17, 2018
Let's donate and help our brothers and sisters pic.twitter.com/IzIdhjgHGv
ಜೆಡಿಎಸ್ ಐಟಿ ವಿಂಗ್
Volunteers are required urgently to go to #Coorg to help those suffering in the floods under the guidence of DC Coorg. Those willing, please contact Shiva Shankar @ 9448855199#KarnatakaRains #KodaguFloods
— JDS State IT Wing (@JDS_ITWing) August 17, 2018
ಮಲ್ಲೇಶ್ವರಂನ ಶಾಸಕ ಡಾ. ಅಶ್ವಥನಾರಾಯಣ ಅವರಿಂದ ಟ್ವೀಟ್
Kodagu needs us! #KodaguFloods
— Dr. Ashwathnarayan (@drashwathcn) August 17, 2018
Let us do our bit to help the people of #Kodagu. Details below👇 pic.twitter.com/NuxyW9JcC2
ಜಯನಗರ ಶಾಸಕಿ ಸೌಮ್ಯರೆಡ್ಡಿ ಅವರಿಂದ ಮನವಿ
Please donate!! Prayers for the people affected by floods in Kerala and kodagu. Please support!🙏 #KodaguFloods #SOSKodagu #KeralaFloods #SOSKerala pic.twitter.com/Wtx14Bkfl3
— Sowmya Reddy (@Sowmyareddyr) August 17, 2018
ಸೇವಾಭಾರತಿಯಿಂದ
ನೆರವಿಗೆ
ಮನವಿ
#KodaguFloods
— Rajalakshmi Joshi (@rajalakshmij) August 17, 2018
Donate relief materials for people affected by Floods in #Kodagu simply by online ordering.
Buy items online via Amazon, FlipKart etc & ship to the address below. Our helpline team will take care of delivering them to the needy. @Swamy39 @vhsindia#SOSKodagu pic.twitter.com/0EkNxtozia