ಕೊಡಗು ಪ್ರವಾಹ: ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಬರೆದ ಪತ್ರದಲ್ಲೇನಿದೆ?
Recommended Video
ಬೆಂಗಳೂರು, ಆಗಸ್ಟ್ 25: ಪ್ರವಾಹಕ್ಕೆ ತತ್ತರಿಸಿರುವ ಕೊಡಗು ಮತ್ತು ಕಕರ್ನಾಟಕದ ಕೆಲಭಾಗಗಳಲ್ಲಿ ಸಮಭವಿಸಿರುವ ತೀವ್ರ ಹಾನಿಯ ಕುರಿತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಪ್ರವಾಹದಿಂದಾದ ನಷ್ಟವನ್ನು ಸರಿಪಡಿಸಲು 2000 ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೊಡಗು ಪ್ರವಾಹದಿಂದ 3 ಸಾವಿರ ಕೋಟಿ ನಷ್ಟ: ಕುಮಾರಸ್ವಾಮಿ
"ನೀವು ಫೋನ್ ಮಾಡಿ ಕೊಡಗು ಪ್ರವಾಹದ ಕುರಿತು ಮಾಹಿತಿ ಪಡೆದಿದ್ದು, ಮತ್ತು ರಕ್ಷಣಾ ಕಾರ್ಯದ ಸಮಯದಲ್ಲಿ ಕೇಂದ್ರದಿಂದ ನೆರವು ನೀಡಿದ್ದಕ್ಕೆ ನಮ್ಮ ಕೃತಜ್ಞತೆಗಳು" ಎಂದೇ ಪತ್ರವನ್ನು ಆರಂಭಿಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕೇಂದ್ರದಿಂದ ಹಣಕಾಸಿನ ನೆರವಿನ ಅಗತ್ಯವಿದೆ ಎಂದು ಕೋರಿದ್ದಾರೆ.
Karnataka CM HD Kumaraswamy has written a letter to PM Narendra Modi, in which he has appealed to him to release a sum of Rs 2000 crores for interim relief to begin the rehabilitation process of the flood-affected areas. #KarnatakaFloods pic.twitter.com/WIpA04MYE7
— ANI (@ANI) August 24, 2018
ಕೊಡಗು ಪ್ರವಾಹದಿಂದ ಸುಮಾರು 3000 ಕೋಟಿ ರೂ. ನಷ್ಟವಾಗಿದೆ ಎಂದು ಎಚ್ ಡಿ ಕುಮಾರಸ್ವಾಮಿ ಅವರೇ ತಿಳಿಸಿದ್ದಾರೆ. ನಿನ್ನೆ(ಆ.25) ತಾನೇ ಕೊಡಗಿಗೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗಿನ ಪರಿಸ್ಥಿತಿಯನ್ನು ಅವಲೋಕಿಸಿ, ನೆರವಿನ ಭರವಸೆ ನೀಡಿದರು.