ಮೋದಿ ಸವಾಲಿಗೆ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಪ್ರತಿ ಸವಾಲು
ಬೆಂಗಳೂರು, ಮೇ 02: "ಪ್ರಧಾನಿ ಮೋದಿಯವರೇ, ಬಿ ಎಸ್ ಯಡಿಯೂರಪ್ಪ ಅವರ ಸಾಧನೆಯನ್ನು 15 ನಿಮಿಷಗಳಲ್ಲಿ ಓದಿ ಹೇಳಿ" ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವಿಟ್ಟರ್ ನಲ್ಲಿ ಸವಾಲೆಸೆದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ಕನ್ನಡದ ತಪ್ಪು ಉಚ್ಚಾರಣೆ: ರಾಹುಲ್ ಆಯ್ತು ಈಗ ಮೋದಿ ಸರದಿ
ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ನಿಮಿತ್ತ ನಿನ್ನೆ(ಮೇ 01) ಚಾಮರಾಜನಗರ ಜಿಲ್ಲೆಯಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ರಾಹುಲ್ ಗಾಂಧಿಯವರನ್ನು ಅಣುಕಿಸಿದ್ದರು.
Dear PM @narendramodi ji,
— Siddaramaiah (@siddaramaiah) May 2, 2018
I challenge you to speak about the achievements of B S Yeddyurappa’s Govt in Karnataka for 15 minutes by looking at a paper.
Sincerely
Siddaramaiah https://t.co/zSkja6eURO
'ಕಾಗದ ನೋಡಿಕೊಂಡು ಭಾಷಣ ಓದುವ ರಾಹುಲ್ ಗಾಂಧಿ, ಕೇವಲ 15 ನಿಮಿಷ ಕಾಗದ ನೋಡದೆ ಮಾತನಾಡಲಿ ನೋಡೋಣ' ಎಂದು ಮೋದಿ ಸವಾಲೆಸೆದಿದ್ದರು.
ಈ ಸವಾಲಿಗೆ ಪ್ರತಿಸವಾಲೆಸೆದ ಸಿದ್ದರಾಮಯ್ಯ, "ಬಿ ಎಸ್ ಯಡಿಯೂರಪ್ಪ ಸರ್ಕಾರ ಕರ್ನಾಟಕದಲ್ಲಿ ಮಾಡಿದ ಸಾಧನೆಯನ್ನು 15 ನಿಮಿಷಗಳಲ್ಲಿ ಕಾಗದ ನೋಡಿಯೇ ಹೇಳಿ ನೋಡೋಣ" ಎಂದಿದ್ದಾರೆ.
ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವುದರಿಂದ ನಾಯಕರ ಪರಸ್ಪರ ಕೆಸರೆರಚಾಟಕ್ಕೆ ಕರ್ನಾಟಕ ವೇದಿಕೆಯಾಗಿದ್ದು, ರಾಜ್ಯದಲ್ಲಿ ಪ್ರಧಾನಿ ಮೋದಿಯವರು ಒಂದು ವಾರಗಳ ಕಾಲ ಸುಮಾರು 20-25 rally ನಡೆಸಲಿರುವುದು ರಾಜಕೀಯಕ್ಕೆ ಮತ್ತಷ್ಟು ರಂಗು ತಂದಿದೆ.