ಸಿದ್ದರಾಮಯ್ಯ ಟ್ವಿಟ್ಟರ್ ವಾರ್ : ‘ಬಿಎಸ್ವೈ ಡಮ್ಮಿ' ಎಂದು ಟ್ವೀಟ್!
Recommended Video
ಬೆಂಗಳೂರು, ಏಪ್ರಿಲ್ 25 : ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಟ್ವಿಟರ್ ವಾರ್ ಆರಂಭಿಸಿದ್ದಾರೆ. ಜನಾರ್ಧನ ರೆಡ್ಡಿ, ಬಿಜೆಪಿ ರಾಷ್ಟ್ರೀಯ ನಾಯಕರನ್ನು ಅವರು ಈ ಬಾರಿ ಟಾರ್ಗೆಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ @siddaramaiah ಖಾತೆಯಿಂದ ಬುಧವಾರ ಹಲವು ಟ್ವೀಟ್ಗಳನ್ನು ಮಾಡಿದ್ದು, ಬಿಜೆಪಿ ನಾಯಕರಿಗೆ ಹಲವು ಪ್ರಶ್ನೆಗಳನ್ನು ಎಸೆದಿದ್ದಾರೆ. ಜನಾರ್ಧನ ರೆಡ್ಡಿ ಅವರು ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡ ಬಗ್ಗೆ ಕುಟುಕಿದ್ದಾರೆ.
ಹಿಂದಿ ಟ್ವೀಟ್ಗೆ ಸಿದ್ದರಾಮಯ್ಯ ಎದಿರೇಟು, ಉಘೇ ಉಘೇ ಎಂದ ಟ್ವಿಟ್ಟಿಗರು
'ಬಿ.ಎಸ್.ಯಡಿಯೂರಪ್ಪ ಅವರು ಡಮ್ಮಿ ಅಭ್ಯರ್ಥಿ'. ಬಿಜೆಪಿ ತನ್ನ ಪ್ರಚಾರಕ್ಕೆ ಉತ್ತರ ಭಾರತದ ನಾಯಕರಿಗಾಗಿ ಕಾದು ಕುಳಿತಿದೆ ಎಂದು ಸಿದ್ದರಾಮಯ್ಯ ಅವರು ಟ್ವಿಟ್ನಲ್ಲಿ ಲೇವಡಿ ಮಾಡಿದ್ದಾರೆ. ಆದರೆ, ಅರವಿಂದ ಲಿಂಬಾವಳಿ ಹೊರತುಪಡಿಸಿ ಟ್ವಿಟ್ಗಳಿಗೆ ಪ್ರತಿಕ್ರಿಯೆ ನೀಡಿಲ್ಲ.
ಸಿದ್ದರಾಮಯ್ಯ- ಮುರಳೀಧರನ್ ಟ್ವೀಟ್ ವಾರ್ ಮುಂದುವರಿಕೆ
ಶನಿವಾರ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರು ಹಿಂದಿಯಲ್ಲಿ ಟ್ವಿಟ್ ಮಾಡಿದ್ದರು. 'ಕನ್ನಡ ಅಥವ ಇಂಗ್ಲಿಷ್ನಲ್ಲಿ ಟ್ವಿಟ್ ಮಾಡಿ, ಹಿಂದಿ ಬರೋಲ್ಲ' ಎಂದು ಸಿದ್ದರಾಮಯ್ಯ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿ ನೆಟ್ಟಿಗರ ಗಮನ ಸೆಳೆದಿದ್ದರು. ಸಿದ್ದರಾಮಯ್ಯ ಪ್ರತಿಕ್ರಿಯಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
|
ಉತ್ತರ ಭಾರತದ ನಾಯಕರು
ಉತ್ತರ ಭಾರತದಿಂದ ನಾಯಕರನ್ನು ಆಮದು ಮಾಡಿಕೊಳ್ಳಲು ಬಿಜೆಪಿ ಕಾಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕರೆತರುವ ಮೂಲಕ ರಾಜ್ಯದಲ್ಲಿ ನಾಯಕರು ಇಲ್ಲ ಎಂದು ಬಿಜೆಪಿ ಒಪ್ಪಿಕೊಂಡಿದೆ.
|
ಬಿಎಸ್ವೈ ಗೊಂಬೆ ಮುಖ್ಯಮಂತ್ರಿಯಾಗಿದ್ದರು
ರೆಡ್ಡಿ ಸಹೋದರರು 2008 ರಿಂದ 12ರ ತನಕ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಗೊಂಬೆ ತರಹ ಕುಣಿಸಿದರು. ರಾಜ್ಯವನ್ನು ಭ್ರಷ್ಟಚಾರದಲ್ಲಿ ನಂಬರ್ ಒನ್ ಮಾಡಿದರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ರಾಹುಲ್ ಗಾಂಧಿ ಉತ್ತರ ಪ್ರದೇಶದವರೇ?
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಸಿದ್ದರಾಮಯ್ಯ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದವರೇ?. ಇಲ್ಲವಾದಲ್ಲಿ ಅವರು ಇಟಲಿಯವರು ಎಂಬ ಕಟು ಸತ್ಯ ಒಪ್ಪಿಕೊಳ್ಳಿ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.
|
ಮೋಹನ್ ಭಾಗವತ್
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಿದ್ದರಾಮಯ್ಯ ಟ್ವಿಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
|
ಮತ್ತೆ ರೆಡ್ಡಿ ಬದ್ರರ್ಸ್ ಬರ್ತಾರೆ
ಹಲವು ಜನರು ಸಿದ್ದರಾಮಯ್ಯ ಟ್ವಿಟ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.