ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನಗೆ ಬಿಜೆಪಿಯಿಂದ ಯಾವುದೇ ಕರೆಬಂದಿಲ್ಲ: ಎಚ್ ವಿಶ್ವನಾಥ್
ಮೈಸೂರು ಮೇ 18: "ಬಿಜೆಪಿ ನಾಯಕರು ತನಗೆ ಕರೆ ಮಾಡಿ ಬಿಜೆಪಿಗೆ ಬರಲು ಒತ್ತಡ ಹೇರಿದ್ದಾರೆ" ಎಂಬ ಸುದ್ದಿಯನ್ನು ಮೈಸೂರಿನ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಎಚ್ ವಿಶ್ವನಾಥ್ ತಳ್ಳಿಹಾಕಿದ್ದಾರೆ.
ಎಚ್ ವಿಶ್ವನಾಥ್ ಗೂ ಬಿಜೆಪಿ ಗಾಳ? ಪುತ್ರನಿಂದ ಹೊರಬಿತ್ತು ಸತ್ಯ!
ಈ ಕುರಿತು ನಿನ್ನೆ ಫೇಸ್ ಬುಕ್ ಸ್ಟೇಟಸ್ ಹಾಕಿದ್ದ ಎಚ್. ವಿಶ್ವನಾಥ್ ಪುತ್ರ ಪೂರ್ವಜ್, ಬಿಜೆಪಿ ಬೆಂಬಲಿಗರು ಹಲವರು ತನಗೆ ಫೋನಾಯಿಸಿ ತಂದೆಯವರಿಗೆ ಬಿಜೆಪಿಗೆ ಬೆಂಬಲ ನೀಡುವಂತೆ ಹೇಳಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ನಾವು ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತರು. ಯಾವ ಕಾರಣಕ್ಕೂ ಆಮಿಷಗಳಿಗೆ ಕಿವಿಗೊಡುವುದಿಲ್ಲ ಎಂದು ಪೋಸ್ಟ್ ಮಾಡಿದ್ದರು.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ವಿಶ್ವನಾಥ್ ನನಗೆ ಯಾವುದೇ ರೀತಿಯ ಕರೆ ಬಂದಿಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ತಲೆದೋರಿದ ಹಿನ್ನೆಲೆಯಲ್ಲಿ ಮೇ 19 ರಂದು ವಿಶ್ವಾಸ ಮತ ಯಾಚಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
Comments
karnataka election results 2018 h vishwanath jds bjp ಚುನಾವಣೆ ಫಲಿತಾಂಶ ವಿಶ್ವನಾಥ್ ಜೆಡಿಎಸ್ ಬಿಜೆಪಿ karnataka assembly elections 2018 ಕರ್ನಾಟಕ ವಿಧಾನಸಭೆ ಚುನಾವಣೆ 2018
English summary
Karnataka Election results 2018: BJP leaders have not called me, says H Vishwanath who is an MLA of Hunsur constituency in Mysuru.
Story first published: Friday, May 18, 2018, 15:54 [IST]