ಬರ ಅಧ್ಯಯನ : ಯಡಿಯೂರಪ್ಪ ಹೇಳಿಕೆ ಖಂಡಿಸಿದ ಕಾಂಗ್ರೆಸ್
ಬೆಂಗಳೂರು, ಜೂನ್ 09 : ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಬರ ಅಧ್ಯಯನ ಪ್ರವಾಸದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಯಡಿಯೂರಪ್ಪ ಅವರು ಸರ್ಕಾರಿ ಅಧಿಕಾರಿಗಳಿಗೆ ಕಪಾಳಮೋಕ್ಷ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. 'ರಾಜ್ಯದ ಬರಸ್ಥಿತಿ ಬಗ್ಗೆ ಯಡಿಯೂರಪ್ಪ ಅವರು ಅಧಿಕಾರಿಗಳಿಂದ ಮಾಹಿತಿ ಪಡೆಯುವುದು ಪ್ರತಿಪಕ್ಷ ನಾಯಕರಾಗಿ ಅವರ ಜವಾಬ್ದಾರಿ. ಆದರೆ, ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿರುವಂತೆ ಬಿಂಬಿಸುವುದು ಸರಿಯಲ್ಲ' ಎಂದು ಕಾಂಗ್ರೆಸ್ ಹೇಳಿದೆ.
ಬಿಎಸ್ವೈ ಬರ ಪ್ರವಾಸ ರಾಜಕೀಯ ಗಿಮಿಕ್: ಎಂಬಿ ಪಾಟೀಲ್
'ಅಧಿಕಾರಿಗಳಿಗೆ ಕಪಾಳ ಮೋಕ್ಷ' ಮಾಡುತ್ತೇನೆಂದು ಯಡಿಯೂರಪ್ಪ ಅವರು ನೀಡಿರುವ ಹೇಳಿಕೆ ದುರಹಂಕಾರದ ಪರಮಾವಧಿ. ಬಿಜೆಪಿಯವರು ಬೇಜವಾಬ್ದಾರಿಗಳೆಂದು ತೋರಿಸುತ್ತದೆ' ಎಂದು ಕಾಂಗ್ರೆಸ್ ಟ್ವೀಟ್ನಲ್ಲಿ ಹೇಳಿದೆ.
ಸಿದ್ದರಾಮಯ್ಯ ಕ್ಷೇತ್ರದಿಂದ ಯಡಿಯೂರಪ್ಪ ಬರ ಪ್ರವಾಸ ಶುರು
ರಾಯಚೂರಿನಲ್ಲಿ ಶನಿವಾರ ಬರ ಅಧ್ಯಯನ ಪ್ರವಾಸವನ್ನು ಯಡಿಯೂರಪ್ಪ ಕೈಗೊಂಡಿದ್ದರು. 'ಬರ ನಿರ್ವಹಣೆ ವಿಷಯದಲ್ಲಿ ತಪ್ಪು ಮಾಹಿತಿ ಕೊಡುವ ಅಧಿಕಾರಿಗಳಿಗೆ ಕಪಾಳಮೋಕ್ಷ ಮಾಡುತ್ತೇನೆ' ಎಂದು ಹೇಳಿದ್ದರು.
ಬರ ಪೀಡಿತ ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ವರದಾನ
ಮುದಗಲ್ ತಾಲೂಕಿನ ರಾಮಾಜೀ ನಾಯಕ ತಾಂಡಾಗೆ ಯಡಿಯೂರಪ್ಪ ಭೇಟಿ ನೀಡಿದ್ದರು. ನೀರಿನ ಸಮಸ್ಯೆ ವಿಪರೀತವಾಗಿದೆ ಎಂದು ನಿವಾಸಿಗಳು ದೂರಿದರು. 'ತಾಂಡದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ' ಎಂದು ಅಧಿಕಾರಿಗಳು ಹೇಳಿದರು.
ರಾಜ್ಯದ ಬರಸ್ಥಿತಿ ಬಗ್ಗೆ @BSYBJP ಅವರು ಅಧಿಕಾರಿಗಳಿಂದ ಮಾಹಿತಿ ಪಡೆಯುವುದು ಪ್ರತಿಪಕ್ಷ ನಾಯಕರಾಗಿ ಅವರ ಜವಾಬ್ದಾರಿ.
— Karnataka Congress (@INCKarnataka) June 9, 2019
ಆದರೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿರುವಂತೆ ಬಿಂಬಿಸುವುದು ಸರಿಯಲ್ಲ.
'ಅಧಿಕಾರಿಗಳಿಗೆ ಕಪಾಳ ಮೋಕ್ಷ' ಮಾಡುತ್ತೇನೆಂದು ನೀಡಿರುವ ಹೇಳಿಕೆ ದುರಹಂಕಾರದ ಪರಮಾವಧಿ
ಬಿಜೆಪಿಯವರು ಬೇಜವಾಬ್ದಾರಿಗಳೆಂದು ತೋರಿಸುತ್ತದೆ
ಆಗ ಯಡಿಯೂರಪ್ಪ ಅವರು, 'ತಪ್ಪು ಮಾಹಿತಿ ಕೊಡುವ ಅಧಿಕಾರಿಗಳಿಗೆ ಕಪಾಳಮೋಕ್ಷ ಮಾಡುತ್ತೇನೆ' ಎಂದು ಹೇಳಿಕೆ ನೀಡಿದ್ದರು. ಇದನ್ನು ಕರ್ನಾಟಕ ಕಾಂಗ್ರೆಸ್ ಖಂಡಿಸಿದೆ.