ಕೊಪ್ಪಳ: ಸೆ.22ರಂದು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಿದ್ದರಾಮಯ್ಯ ಚಾಲನೆ
ಕೊಪ್ಪಳ ಸೆಪ್ಟೆಂಬರ್ 20: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 22ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ತೋಟಗಾರಿಕಾ ಇಲಾಖೆಯಿಂದ ಕೊಪ್ಪಳದಲ್ಲಿ ಸೆ.25ರಿಂದ ಮಧು ಮೇಳ
ಕೊಪ್ಪಳ ಜಿಲ್ಲಾಡಳಿತ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇವರ ಸಹಯೋಗದಲ್ಲಿ ಸೆಪ್ಟೆಂಬರ್ 22ರಂದು ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು.
ಉದ್ಘಾಟನೆ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಸೆ. 22 ರಂದು ಬೆಳಿಗ್ಗೆ ಕೊಪ್ಪಳ ನಗರದ ಹೊರವಲಯದಲ್ಲಿ ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಬದಿಯ ಬೃಹತ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಕೋಲಾರ ಜಿಲ್ಲಾಡಳಿತ ಭವನ ಉದ್ಘಾಟನೆ, ಒಂದೇ ಸೂರಿನಡಿ 42 ಕಚೇರಿ
ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಮಾರಂಭದ ಉದ್ಘಾಟನೆ ನೆರವೇರಿಸುವರು. ಅಲ್ಲದೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಈ ವೇಳೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸುವರು.
ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೊಳ್ಳಲಿರುವ ವಿವಿಧ ಅಭಿವೃದ್ಧಿ ಯೋಜನೆಗಳ ವಿವರ ಇಂತಿದೆ:
*
ಕೊಪ್ಪಳ
ಜಿಲ್ಲೆಯ
ಕುಷ್ಟಗಿ
ಮತ್ತು
ಯಲಬುಗಾ
ತಾಲೂಕಿನ
ಗ್ರಾಮಗಳಿಗೆ
763
ಕೋಟಿ
ರು..
ವೆಚ್ಚದಲ್ಲಿ
ಶುದ್ಧ
ಕುಡಿಯುವ
ನೀರು
ಸರಬರಾಜು
ಮಾಡುವ
ಯೋಜನೆಗೆ
ಶಂಕುಸ್ಥಾಪನೆ.
*
ಕೊಪ್ಪಳ
ಜಿಲ್ಲೆಯ
ಯಲಬುರ್ಗಾ
ಮತ್ತು
ಕೊಪ್ಪಳ
ತಾಲೂಕಿನ
ಆಯ್ದ
ಕೆರೆಗಳಿಗೆ
290
ಕೋಟಿ
ರು.
ವೆಚ್ಚದಲ್ಲಿ
ತುಂಗಭದ್ರಾ
ನದಿಯ
ನೀರನ್ನು
ತುಂಬಿಸುವ
ಯೋಜನೆಗೆ
ಶಂಕುಸ್ಥಾಪನೆ.
*
ಕೊಪ್ಪಳದಲ್ಲಿ
150
ಕೋಟಿ
ರು.
ವೆಚ್ಚದಲ್ಲಿ
ನಿರ್ಮಾಣಗೊಂಡಿರುವ
ನೂತನ
ಸರ್ಕಾರಿ
ವೈದ್ಯಕೀಯ
ವಿಜ್ಞಾನ
ಸಂಸ್ಥೆ
(ಕಿಮ್ಸ್)
ಕಟ್ಟಡದ
ಉದ್ಘಾಟನೆ.
*
ಸಿಂಗಟಾಲೂರು
ಏತ
ನೀರಾವರಿ
ಯೋಜನೆಯಡಿ
103
ಕೋಟಿ
ರು.
ವೆಚ್ಚದಲ್ಲಿ
ಬನ್ನಿಕೊಪ್ಪ
ಏತ
ನೀರಾವರಿ
ಯೋಜನೆಗೆ
ಶಂಕುಸ್ಥಾಪನೆ.
*
ಯಲಬುರ್ಗಾ
ತಾಲೂಕು
ತಳಕಲ್
ಬಳಿ
100
ಕೋಟಿ
ರು.
ವೆಚ್ಚದಲ್ಲಿ
ನಿರ್ಮಿಸಲಾಗುತ್ತಿರುವ
ಸರ್ಕಾರಿ
ಇಂಜಿನಿಯರಿಂಗ್
ಕಾಲೇಜು
ಕಟ್ಟಡದ
ಶಂಕುಸ್ಥಾಪನೆ.
*
32
ಕೋಟಿ
ರು..
ವೆಚ್ಚದಲ್ಲಿ
ನಿರ್ಮಿಸಲಾಗಿರುವ
ಆನೆಗೊಂದಿ
ಸೇತುವೆಯ
ಉದ್ಘಾಟನೆ.
*
ಗಂಗಾವತಿಯಲ್ಲಿ
25
ಕೋಟಿ
ರು.
ವೆಚ್ಚದಲ್ಲಿ
ನಿರ್ಮಿಸಲಾಗಿರುವ
ಸರ್ಕಾರಿ
ಇಂಜಿನಿಯರಿಂಗ್
ಕಾಲೇಜು
ಕಟ್ಟಡದ
ಉದ್ಘಾಟನೆ.
*
ಗಂಗಾವತಿ
ತಾಲೂಕು
ಚಿಕ್ಕಬೆಣಕಲ್
ನಲ್ಲಿ
10
ಕೋಟಿ
ರು.
ವೆಚ್ಚದಲ್ಲಿ
ನಿರ್ಮಿಸಲಾಗಿರುವ
ಹಾಸ್ಟೆಲ್
ಕಟ್ಟಡದ
ಉದ್ಘಾಟನೆ.
*
ಗಂಗಾವತಿ
ಮತಕ್ಷೇತ್ರ
ಕೊಪ್ಪಳ
ತಾಲೂಕಿನ
ಹಿರೇಹಳ್ಳ
ಯೋಜನೆಯ
ಮುದ್ಲಾಪುರ
ಗ್ರಾಮ
ಬಳಿ
10
ಕೋಟಿ
ರು.
ವೆಚ್ಚದಲ್ಲಿ
ನಿರ್ಮಿಸಲಾಗಿರುವ
ಸೇತುವೆಯ
ಉದ್ಘಾಟನೆ.
*
ಯಲಬುರ್ಗಾ
ತಾಲೂಕು
ಕುಕನೂರು
ಪಟ್ಟಣದಲ್ಲಿ
09
ಕೋಟಿ
ರು.
ವೆಚ್ಚದಲ್ಲಿ
ನಿರ್ಮಿಸಲಾಗುವ
60
ಹಾಸಿಗೆಗಳ
ಮಹಿಳಾ
ಪ್ರಸೂತಿ
ಮತ್ತು
ಮಕ್ಕಳ
ಆಸ್ಪತ್ರೆಯ
ಶಂಕುಸ್ಥಾಪನೆ.
ಹಾಗೂ
ಯಲಬುರ್ಗಾ
ತಾಲೂಕು
ಕುಕನೂರಿನಲ್ಲಿ
5
ಕೋಟಿ
ರು.
ವೆಚ್ಚದಲ್ಲಿ
ನಿರ್ಮಿಸಲಾಗಿರುವ
ನೂತನ
ಪ್ರವಾಸಿ
ಮಂದಿರದ
ಉದ್ಘಾಟನೆ.