ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಕರ್ನಾಟಕದಲ್ಲಿ ಹೇಗಿದೆ ಬಿಜೆಪಿ ನಾಯಕರ ಪ್ರತಿಕ್ರಿಯೆ?
ನವದೆಹಲಿ,
ಮೇ
21:
ದೇಶದಲ್ಲಿ
ಪೆಟ್ರೋಲ್-ಡೀಸೆಲ್
ಮೇಲಿನ
ಅಬಕಾರಿ
ಸುಂಕವನ್ನು
ಕಡಿತಗೊಳಿಸಿದ
ನಿರ್ಧಾರವು
ಜನಪರವಾಗಿದೆ
ಎಂದು
ಕರ್ನಾಟಕದ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಟ್ವೀಟ್
ಮಾಡಿದ್ದಾರೆ.
ಇಂಧನವನ್ನು
ಕಡಿತಗೊಳಿಸಿದ
ಹಿನ್ನೆಲೆ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಹಾಗೂ
ಕೇಂದ್ರ
ಹಣಕಾಸು
ಸಚಿವೆ
ನಿರ್ಮಲಾ
ಸೀತಾರಾಮನ್
ರಿಗೆ
ಧನ್ಯವಾದ
ತಿಳಿಸಿದ್ದಾರೆ.
"ಕೇಂದ್ರ
ಸರ್ಕಾರವು
ಶನಿವಾರ
ಪೆಟ್ರೋಲ್
ಮೇಲೆ
8
ರೂಪಾಯಿ
ಹಾಗೂ
ಡೀಸೆಲ್
ಮೇಲೆ
6
ರೂಪಾಯಿ
ಅಬಕಾರಿ
ಸುಂಕವನ್ನು
ಕಡಿತಗೊಳಿಸಿದೆ.
ಇದರಿಂದಾಗಿ
ದೇಶದಲ್ಲಿ
ಪೆಟ್ರೋಲ್
ದರ
ಪ್ರತಿ
ಲೀ.ಗೆ
9.50
ರೂಪಾಯಿ
ಹಾಗೂ
ಡೀಸೆಲ್
ದರ
ಪ್ರತಿ
ಲೀ.ಗೆ
7
ರೂಪಾಯಿ
ಇಳಿಕೆಯಾಗಿದ್ದಕ್ಕೆ
ಧನ್ಯವಾದ
ಅರ್ಪಿಸುತ್ತೇನೆ,"
ಎಂದು
ಟ್ವೀಟ್
ಮಾಡಿದ್ದಾರೆ.
ಪೆಟ್ರೋಲ್-ಡೀಸೆಲ್ ಇಳಿಸಿದ ಸರ್ಕಾರದ ಲೆಕ್ಕಾಚಾರ ತಿಳಿಸಿದ ಸುರ್ಜೇವಾಲಾ!
"ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 12 ಸಿಲಿಂಡರ್ಗಳವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಕ್ರಮವು ನಮ್ಮ ಮಹಿಳಾ ಸಮುದಾಯಕ್ಕೆ ಒಂದು ದೊಡ್ಡ ವರದಾನವಾಗಲಿದೆ. 'ಜನರ' ಮತ್ತು 'ಜನರಿಗಾಗಿ'ಯೇ ನಮ್ಮ ಸರ್ಕಾರ," ಎಂದು ಸಿಎಂ ಮತ್ತೊಂದು ಟ್ವೀಟ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.
Price of petrol to reduce by ₹9.5/litre & diesel by ₹7/litre. I thank Hon’ble PM @narendramodi Ji on behalf of Karnataka for reducing central excise duty by ₹8/litre on petrol & ₹6/litre on diesel & FM @nsitharaman Ji for a subsidy of ₹ 200 per gas cylinder.
— Basavaraj S Bommai (@BSBommai) May 21, 2022
1/2
ಇಂಧನ
ದರ
ಇಳಿಕೆಗೆ
ಕಟೀಲ್
ಅಭಿನಂದನೆ:
ಪೆಟ್ರೋಲ್
ಮತ್ತು
ಡೀಸೆಲ್
ಮೇಲಿನ
ಕೇಂದ್ರ
ಅಬಕಾರಿ
ಸುಂಕವನ್ನು
ಕಡಿತಗೊಳಿಸುವ
ಕೇಂದ್ರ
ಸರ್ಕಾರದ
ಕ್ರಮವನ್ನು
ಬಿಜೆಪಿ
ರಾಜ್ಯಾಧ್ಯಕ್ಷ
ನಳಿನ್
ಕುಮಾರ್
ಕಟೀಲ್
ಸ್ವಾಗತಿಸಿದ್ದಾರೆ.
ಈ
ಸಂಬಂಧ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಮತ್ತು
ಕೇಂದ್ರ
ಹಣಕಾಸು
ಸಚಿವೆ
ನಿರ್ಮಲಾ
ಸೀತಾರಾಮನ್
ಅವರಿಗೆ
ಅಭಿನಂದಿಸಿದ್ದಾರೆ.
ಪೆಟ್ರೋಲ್
ಮೇಲಿನ
ಸುಂಕವನ್ನು
ಪ್ರತಿ
ಲೀಟರ್
ಗೆ
ರೂ
8,
ಡೀಸೆಲ್
ಮೇಲಿನ
ಸುಂಕವನ್ನು
ಪ್ರತಿ
ಲೀ.ಗೆ
ರೂ.
6
ಕಡಿಮೆ
ಮಾಡುತ್ತಿರುವುದರಿಂದ
ಪೆಟ್ರೋಲ್
ಬೆಲೆಯಲ್ಲಿ
9.50
ರೂಪಾಯಿ
ಹಾಗೂ
ಡೀಸೆಲ್
ಬೆಲೆಯಲ್ಲಿ
7.50
ರೂಪಾಯಿ
ಕಡಿಮೆಯಾಗಲಿದೆ.
ರಾಜ್ಯದ
ಜನತೆಯ
ಪರವಾಗಿ
ಕೇಂದ್ರದ
ಬಿಜೆಪಿ
ಸರ್ಕಾರಕ್ಕೆ
ಕೃತಜ್ಞತೆ
ಸಲ್ಲಿಸುವುದಾಗಿ
ತಿಳಿಸಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಅಡುಗೆ ಅನಿಲದ ಪ್ರತಿ ಸಿಲಿಂಡರ್ ಗೆ 200 ರೂಪಾಯಿ ವಾರ್ಷಿಕವಾಗಿ ಒಟ್ಟು 12 ಸಿಲಿಂಡರ್ ಗಳಿಗೆ ಸಬ್ಸಿಡಿ ನೀಡಲಿರುವುದು ಬಡವರ ಪಾಲಿಗೆ ಅತ್ಯಂತ ಮಹತ್ತರವಾಗಿದೆ. ಹಣದುಬ್ಬರ ನಿಯಂತ್ರಣ ಮತ್ತು ಬೆಲೆಯೇರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಉಪಕ್ರಮವೆಂದು ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದ್ದಾರೆ.
ಕಾಂಗ್ರೆಸ್
ಅಧಿಕಾರದಲ್ಲಿರುವ
ರಾಜ್ಯಗಳಲ್ಲಿ
ದರ
ಇಳಿಕೆಗೆ
ಒತ್ತಾಯ:
ಬಿಜೆಪಿ
ಆಡಳಿತದ
ಕೇಂದ್ರ
ಹಾಗೂ
ರಾಜ್ಯ
ಸರ್ಕಾರಗಳು
ಜನಹಿತ
ದೃಷ್ಠಿಯಿಂದ
ಈಗಾಗಲೇ
ಪೆಟ್ರೋಲ್
ಮತ್ತು
ಡೀಸೆಲ್
ಬೆಲೆ
ಕಡಿತ
ಮಾಡಿರುತ್ತವೆ,
ಆದರೆ
ವಿರೋಧ
ಪಕ್ಷಗಳ
ಆಡಳಿತದ
ವಿವಿಧ
ರಾಜ್ಯಗಳಲ್ಲಿ
ಅದರಲ್ಲೂ
ಕಾಂಗ್ರೆಸ್
ಆಡಳಿತದ
ರಾಜ್ಯಗಳಲ್ಲಿ
ಕಿಂಚಿತ್ತೂ
ದರ
ಕಡಿಮೆ
ಮಾಡುವ
ಕ್ರಮ
ಕೈಗೊಳ್ಳದಿರುವುದು
ಅವರ
ಜನವಿರೋಧಿ
ನೀತಿಯನ್ನು
ತೋರಿಸುತ್ತದೆ.
ಇನ್ನಾದರೂ
ಇವರು
ಪೆಟ್ರೋಲ್
ಮತ್ತು
ಡೀಸೆಲ್
ಬೆಲೆ
ಕಡಿಮೆಗೊಳಿಸುವ
ಕ್ರಮ
ಅನುಷ್ಠಾನ
ಮಾಡಲಿ
ಎಂದು
ನಳಿನ್
ಕುಮಾರ್
ಕಟೀಲ್
ಹೇಳಿದ್ದಾರೆ.
ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ:
ಪ್ರಧಾನಮಂತ್ರಿ ಉಜ್ವಲ ಯೋಜನೆ 9 ಕೋಟಿ ಫಲಾನುಭವಿಗಳಿಗೆ ಕೇಂದ್ರ ಬಂಪರ್ ಕೊಡುಗೆ ನೀಡಿದೆ. ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ಘೋಷಿಸಿದೆ. ಪ್ರತಿವರ್ಷ ಉಜ್ವಲ ಯೋಜನೆಯ ಅಡಿಯಲ್ಲಿ 12 ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತೇವೆ. "ಈ ವರ್ಷ ನಾವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೀಡುವ ಪ್ರತಿ ಗ್ಯಾಸ್ ಸಿಲಿಂಡರ್ಗೆ 200 ಸಬ್ಸಿಡಿ ನೀಡುತ್ತೇವೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಹಣದುಬ್ಬರಕ್ಕೆ
ಕಾರಣ
ತಿಳಿಸಿದ
ನಿರ್ಮಲಾ
ಸೀತಾರಾಮನ್:
ಇಂದು
ಜಗತ್ತು
ಕಷ್ಟದ
ಕಾಲವನ್ನು
ದಾಟುತ್ತಿದೆ.
ಕೋವಿಡ್
-19
ಸಾಂಕ್ರಾಮಿಕ
ರೋಗದಿಂದ
ಜಗತ್ತು
ಚೇತರಿಸಿಕೊಳ್ಳುತ್ತಿರುವಾಗಲೂ,
ಉಕ್ರೇನ್
ಸಂಘರ್ಷವು
ಪೂರೈಕೆ
ಸರಪಳಿ
ಸಮಸ್ಯೆಗಳನ್ನು
ಮತ್ತು
ವಿವಿಧ
ಸರಕುಗಳ
ಕೊರತೆಯನ್ನು
ತಂದಿದೆ.
ಇದು
ಬಹಳಷ್ಟು
ದೇಶಗಳಲ್ಲಿ
ಹಣದುಬ್ಬರ
ಮತ್ತು
ಆರ್ಥಿಕ
ಸಂಕಷ್ಟಕ್ಕೆ
ಕಾರಣವಾಗುತ್ತಿದೆ
ಎಂದು
ಕೇಂದ್ರ
ಸಚಿವೆ
ನಿರ್ಮಲಾ
ಸೀತಾರಾಮನ್
ಹೇಳಿದ್ದಾರೆ.