Karnataka Budget 2021 Live Updates; ಕರ್ನಾಟಕ ಬಜೆಟ್ 2021 ಕ್ಷಣ-ಕ್ಷಣದ ಮಾಹಿತಿ
ಬೆಂಗಳೂರು, ಮಾರ್ಚ್ 08: ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2021ನೇ ಸಾಲಿನ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡನೆ ಮಾಡದಿದ್ದರೂ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಮಧ್ಯಾಹ್ನ 12 ಗಂಟೆಗೆ ವಿಧಾನಸಭೆಯಲ್ಲಿ 2021ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ. ಹಣಕಾಸು ಸ್ಥಿತಿ ಸುಧಾರಿಸಲು ಯಾವ ಕ್ರಮ ಕೈಗೊಂಡಿದ್ದಾರೆ? ಎಂಬ ಕುತೂಹಲವಿದೆ.
ಈ ಬಾರಿ ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡಿಸುತ್ತಿಲ್ಲ. ಆದರೆ, ತಮ್ಮದು ರೈತ ಪರ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಬಜೆಟ್ನಲ್ಲಿ ರೈತರಿಗೆ ಯಾವ ಕೊಡುಗೆ ನೀಡಲಿದೆ? ಎಂದು ಕಾದು ನೋಡಬೇಕು. ಆರೋಗ್ಯ, ಕೈಗಾರಿಕೆ, ಬೆಂಗಳೂರು ಅಭಿವೃದ್ಧಿ ಬಗ್ಗೆಯೂ ಅಪಾರವಾದ ನಿರೀಕ್ಷೆಗಳಿವೆ.
ನೀರಾವರಿ, ಮೂಲಸೌಕರ್ಯ ಅಭಿವೃದ್ಧಿ ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಕರ್ನಾಟಕ ಬಜೆಟ್ 2021ರ ಕ್ಷಣ-ಕ್ಷಣದ ಮಾಹಿತಿ, ಚಿತ್ರ, ವಿಡಿಯೋ, ಪ್ರತಿಕ್ರಿಯೆಗಳು ಈ ಪುಟದಲ್ಲಿ ಓದುಗರಿಗೆ ಲಭ್ಯವಿದೆ.
Recommended Video
ಸಬಲ ಮಹಿಳೆ, ಸಮೃದ್ಧ ಸಮಾಜ – ಕರ್ನಾಟಕ ವಿಕಾಸದತ್ತ ಮತ್ತೊಂದು ದಿಟ್ಟ ಹೆಜ್ಜೆ#KarnatakaVikasaPatra2021 #KarnatakaBudget2021 #ಕರ್ನಾಟಕವಿಕಾಸಪತ್ರ2021 #ಕರ್ನಾಟಕಬಜೆಟ್2021 pic.twitter.com/a63uTWKPJQ
— CM of Karnataka (@CMofKarnataka) March 8, 2021
ಕೃಷಿ ಕ್ಷೇತ್ರದ ಅಭ್ಯುದಯ, ಅನ್ನದಾತ ರೈತರ ಕಲ್ಯಾಣವೇ ಧ್ಯೇಯ – ಕರ್ನಾಟಕ ವಿಕಾಸದತ್ತ ಮತ್ತೊಂದು ದಿಟ್ಟ ಹೆಜ್ಜೆ#KarnatakaVikasaPatra2021 #KarnatakaBudget2021 #ಕರ್ನಾಟಕವಿಕಾಸಪತ್ರ2021 #ಕರ್ನಾಟಕಬಜೆಟ್2021 pic.twitter.com/RpSEo1Y9gq
— CM of Karnataka (@CMofKarnataka) March 8, 2021