ಎತ್ತಿನಹೊಳೆ, ಮಹದಾಯಿ ಯೋಜನೆಗೆ ಯಡಿಯೂರಪ್ಪ ಬಂಪರ್ ಕೊಡುಗೆ!
ಬೆಂಗಳೂರು, ಮಾರ್ಚ್ 05: ಪ್ರಸಕ್ತ ಸಾಲಿನ ಆಯ ವ್ಯಯ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ್ದಾರೆ. ಹಣಕಾಸು ಸಚಿವರು ಕೂಡ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯದ ಈ ಬಾರಿಯ ಬಜೆಟ್ ಗಾತ್ರ 2 ಲಕ್ಷದ 37 ಸಾವಿರ ಕೋಟಿ ರೂಪಾಯಿ ಆಗಿದೆ. ಹಸಿರು ಶಾಲು ಹೊದ್ದು ಬಜೆಟ್ ಮಂಡಿಸಿದ ಬಿ.ಎಸ್.ಯಡಿಯೂರಪ್ಪ ನೀರಾವರಿ ಕ್ಷೇತ್ರಕ್ಕಾಗಿ ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ 'ರೈತ ನಾಯಕ' ಯಡಿಯೂರಪ್ಪ ನೀಡಿದ ಕೊಡುಗೆ ಏನು?
ತಮ್ಮ ಬಜೆಟ್ ನಲ್ಲಿ ಮಹದಾಯಿ ಯೋಜನೆಗೆ 500 ಕೋಟಿ ರೂಪಾಯಿ ಅನುದಾನವನ್ನು ಘೋಷಣೆ ಮಾಡಿರುವ ಬಿ.ಎಸ್.ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ.
'ಕರ್ನಾಟಕ ಬಜೆಟ್ 2020'ಯಲ್ಲಿ ಬಿ.ಎಸ್.ಯಡಿಯೂರಪ್ಪ ನೀರಾವರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಇಂತಿವೆ:
ಮಹಾದಾಯಿ ಯೋಜನೆಗೆ 500 ಕೋಟಿ ಅನುದಾನ
* ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 500 ಕೋಟಿ ರೂಪಾಯಿ ಅನುದಾನ.
*
ಸೂಕ್ಷ್ಮ
ನೀರಾವರಿಗೆ
627
ಕೋಟಿ
ರೂಪಾಯಿ
ಅನುದಾನ.
*
ರಾಜ್ಯದ
ಪ್ರತಿ
ಗ್ರಾಮದಲ್ಲಿ
'ಜಲಗ್ರಾಮ
ಕ್ಯಾಲೆಂಡರ್'
ಸಿದ್ಧಪಡಿಸಲು
ಕ್ರಮ.
*
ಕರಾವಳಿ
ಪ್ರದೇಶದಲ್ಲಿ
ಪಶ್ಚಿಮ
ಘಟ್ಟದ
ನದಿಗಳಿಗೆ
ಅಡ್ಡಲಾಗಿ
'ಕಿಂಡಿ
ಅಣೆಕಟ್ಟು
ಯೋಜನೆ'ಗಳ
(Vented
Dams)
ವ್ಯಾಪಕ
ಅನುಷ್ಠಾನಕ್ಕೆ
ಮಾಸ್ಟರ್
ಪ್ಲಾನ್.
ಫ್ಲಡ್ ಇರಿಗೇಷನ್ ಪದ್ದತಿ ಜಾರಿ
*
ಅಟಲ್
ಭೂ-ಜಲ
ಯೋಜನೆಯಡಿ
1202
ಕೋಟಿ
ರೂಪಾಯಿಗಳನ್ನು
ಬಳಸಿಕೊಂಡು
ರಾಜ್ಯದ
ಆಯ್ದ
ಜಿಲ್ಲೆಗಳ
ಅಂತರ್ಜಲ
ಮಟ್ಟ
ಹೆಚ್ಚಿಸಲು
ಕ್ರಮ.
*
ರಾಜ್ಯದ
ಬೃಹತ್
ನೀರಾವರಿ
ಯೋಜನೆಯಡಿಯಲ್ಲಿನ
ಅಚ್ಚುಕಟ್ಟು
ಪ್ರದೇಶಗಳಲ್ಲಿ
Flood
Irrigation
ಪದ್ಧತಿಯನ್ನು
ಇಸ್ರೇಲ್
ಮಾದರಿಯಲ್ಲಿ
ಸೂಕ್ಷ್ಮ
ನೀರಾವರಿಗೆ
ಪರಿವರ್ತಿಸಲು
ಕ್ರಮ.
*
ಜಲಸಂಪನ್ಮೂಲ
ಇಲಾಖೆಯ
ಮೂಲಕ
ಒಂದು
ಲಕ್ಷ
ಎಕರೆ
ಜಮೀನಿಗೆ
ನೀರಾವರಿ
ಸೌಲಭ್ಯ.
ಕರ್ನಾಟಕ ಬಜೆಟ್; ಉತ್ತರ ಕರ್ನಾಟಕಕ್ಕೆ ಯಡಿಯೂರಪ್ಪ ಕೊಡುಗೆ
ಎತ್ತಿನಹೊಳೆ ಯೋಜನೆಗೆ 1500 ಕೋಟಿ ಅನುದಾನ
*
'ಎತ್ತಿನಹೊಳೆ
ಯೋಜನೆ'ಗೆ
1500
ಕೋಟಿ
ರೂಪಾಯಿ
ಅನುದಾನ.
ಮೊದಲನೆಯ
ಹಂತದ
Lift
component
ಕಾಮಗಾರಿಗಳನ್ನು
ಪೂರ್ಣಗೊಳಿಸಿ
ಮುಂದಿನ
ಮುಂಗಾರು
ಹಂಗಾಮಿನಲ್ಲಿ
ಪ್ರಾಯೋಗಿಕವಾಗಿ
ಚಾಲನೆಗೊಳಿಸಲು
ಕ್ರಮ.
*
ಹೂಳು
ತುಂಬಿರುವ
ತುಂಗಭದ್ರಾ
ಜಲಾಶಯದ
ನೀರಿನ
ಸಂಗ್ರಹಣಾ
ಸಾಮರ್ಥ್ಯದ
ಕೊರತೆಯನ್ನು
ನೀಗಿಸಲು
ಪರ್ಯಾಯ
ಹರಿವು
ನಾಲೆ
ಮೂಲಕ
ನವಲೆ
ಹತ್ತಿರ
ಸಮತೋಲನಾ
ಜಲಾಶಯ
ನಿರ್ಮಾಣದ
ವಿಸ್ತೃತ
ಯೋಜನಾ
ವರದಿ
ತಯಾರಿಕೆಗೆ
20
ಕೋಟಿ
ರೂಪಾಯಿ
ಅನುದಾನ
ಏತ ನೀರಾವರಿ ಯೋಜನೆ
*
ರಾಜ್ಯದಲ್ಲಿ
5000
ಕೋಟಿ
ರೂಪಾಯಿಗಳ
ವೆಚ್ಚದಲ್ಲಿ
ಹೊಸ
ಏತ
ನೀರಾವರಿ
ಯೋಜನೆಗಳ
ಅನುಷ್ಠಾನ.
*
ರಾಯಚೂರು,
ಯಾದಗಿರಿ,
ಕಲಬುರಗಿ
ಜಿಲ್ಲೆಗೆ
ಕುಡಿಯುವ
ನೀರು
ಪೂರೈಕೆಗೆ
ತಿಂತಿಣಿ
ಬ್ರಿಡ್ಜ್
ಬಳಿ
ಕೃಷ್ಣಾ
ನದಿಗೆ
ಜಲಾಶಯ
ನಿರ್ಮಾಣ-
ವಿಸ್ತೃತ
ಯೋಜನಾ
ವರದಿ
ತಯಾರಿಕೆಗೆ
ಕ್ರಮ.