ಕರ್ನಾಟಕ ಬಜೆಟ್ 2020: ಮಹಿಳಾ ಮೀನುಗಾರರಿಗೆ 'ಸ್ಕೂಟರ್' ಭಾಗ್ಯ!
ಬೆಂಗಳೂರು, ಮಾರ್ಚ್ 05: ಪ್ರಸಕ್ತ ಸಾಲಿನ ಆಯ ವ್ಯಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ್ದಾರೆ. ಹಣಕಾಸು ಸಚಿವರು ಕೂಡ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯದ ಈ ಬಾರಿಯ ಬಜೆಟ್ ಗಾತ್ರ 2 ಲಕ್ಷದ 37 ಸಾವಿರ ಕೋಟಿ ರೂಪಾಯಿ ಆಗಿದೆ. ಹಸಿರು ಶಾಲು ಹೊದ್ದು 1 ಗಂಟೆ 40 ನಿಮಿಷಗಳ ಕಾಲ ಬಜೆಟ್ ಓದಿದ ಬಿ.ಎಸ್.ಯಡಿಯೂರಪ್ಪ ಮೀನುಗಾರಿಕೆ ವಲಯಕ್ಕೆ ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ 'ರೈತ ನಾಯಕ' ಯಡಿಯೂರಪ್ಪ ನೀಡಿದ ಕೊಡುಗೆ ಇಷ್ಟು!
ತಮ್ಮ ಬಜೆಟ್ ನಲ್ಲಿ ಸಾವಿರ ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. 'ಕರ್ನಾಟಕ ಬಜೆಟ್ 2020'ಯಲ್ಲಿ ಬಿ.ಎಸ್.ಯಡಿಯೂರಪ್ಪ ಮೀನುಗಾರಿಕೆ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಇಂತಿವೆ:
ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ
* ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕೆ 1.5ಕೋಟಿ ರೂಪಾಯಿ ವೆಚ್ಚದಲ್ಲಿ 'ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ' ಜಾರಿ.
* 'ಮಹಿಳಾ ಮೀನುಗಾರರ ಸಬಲೀಕರಣ' ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂಪಾಯಿ ಅನುದಾನ.
ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ
*
ಮುಲ್ಕಿಯಲ್ಲಿ
ಎರಡು
ಕೋಟಿ
ರೂಪಾಯಿ
ವೆಚ್ಚದಲ್ಲಿ
ಹಿನ್ನೀರು
ಮೀನು
ಮರಿ
ಉತ್ಪಾದನಾ
ಕೇಂದ್ರ
ಸ್ಥಾಪನೆ.
*
ಮಂಗಳೂರು
ತಾಲ್ಲೂಕು
ಕುಳಾಯಿಯಲ್ಲಿ
ನಿರ್ಮಿಸಲಾಗುತ್ತಿರುವ
ಹೊಸ
ಮೀನುಗಾರಿಕೆ
ಬಂದರಿನಲ್ಲಿ
12.5
ಕೋಟಿ
ರೂಪಾಯಿ
ವೆಚ್ಚದಲ್ಲಿ
ಆಧುನಿಕ
ಕರಾವಳಿ
ಮೀನು
ರಫ್ತು
ಸ್ಥಾವರ
ಸ್ಥಾಪನೆ.
ಎತ್ತಿನಹೊಳೆ, ಮಹದಾಯಿ ಯೋಜನೆಗೆ ಯಡಿಯೂರಪ್ಪ ಬಂಪರ್ ಕೊಡುಗೆ!
ಮೀನುಗಾರಿಕೆ ಬಂದರು ನಿರ್ಮಾಣ
*
ಉಡುಪಿ
ಜಿಲ್ಲೆಯ
ಹೆಜಮಾಡಿಕೋಡಿಯಲ್ಲಿ
ಪರಿಷ್ಕೃತ
ಅಂದಾಜು
ವೆಚ್ಚ
181
ಕೋಟಿ
ರೂಪಾಯಿಗಳಲ್ಲಿ
ಮೀನುಗಾರಿಕೆ
ಬಂದರು
ನಿರ್ಮಾಣ.
*
ಉಡುಪಿ
ಜಿಲ್ಲೆಯ
ಹಂಗಾರಕಟ್ಟೆ
ಬಂದರು
ಅಭಿವೃದ್ಧಿಗೆ
130
ಕೋಟಿ
ರೂಪಾಯಿ
*
ಉಡುಪಿ
ಜಿಲ್ಲೆ
ಬೈಂದೂರು
ತಾಲ್ಲೂಕಿನ
ಮರವಂತೆಯ
ಹೊರ
ಬಂದರಿನ
ಎರಡನೇ
ಹಂತದ
ಕಾಮಗಾರಿ
ಪೂರ್ಣಗೊಳಿಸಲು
85
ಕೋಟಿ
ರೂಪಾಯಿ
ಅನುದಾನ.
ಮೀನುಗಾರಿಕೆ ಬಂದರು ಅಭಿವೃದ್ಧಿ
*
ಉತ್ತರ
ಕನ್ನಡ
ಜಿಲ್ಲೆಯ
ಕಾರವಾರ
ಮೀನುಗಾರಿಕಾ
ಬಂದರಿನ
ಅಭಿವೃದ್ಧಿ
ಹಾಗೂ
ಮೂಲಭೂತ
ಸೌಕರ್ಯಕ್ಕಾಗಿ
ನಾಲ್ಕು
ಕೋಟಿ
ರೂಪಾಯಿ.
*
ಉತ್ತರ
ಕನ್ನಡ
ಜಿಲ್ಲೆಯ
ತೆಂಗಿನಗುಂಡಿ
ಬಂದರಿನ
ಅಳಿವೆ
ಹೂಳೆತ್ತುವ
ಕಾಮಗಾರಿಗೆ
ಐದು
ಕೋಟಿ
ರೂಪಾಯಿ.
*
ಕೊಡೇರಿ
ಮೀನುಗಾರಿಕೆ
ಬಂದರಿನ
ಅಭಿವೃದ್ಧಿ
ಕಾಮಗಾರಿಗಳಿಗೆ
ಎರಡು
ಕೋಟಿ
ರೂಪಾಯಿ
ಅನುದಾನ.