ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಮ್ಮ ಫೋನ್ ಟ್ಯಾಪ್ ಮಾಡ್ತಿದ್ದಾರೆ: ಬಿಜೆಪಿ ನಾಯಕರ ದೂರು
ಬೆಂಗಳೂರು, ಮೇ 16: ಅತಂತ್ರ ವಿಧಾನಸಭೆ ಸೃಷ್ಟಿಯಾದ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜಕಾರಣ ಬಿರುಸುಕೊಂಡಿದೆ. ಇದೇ ವೇಳೆ ಕೆಸರೆರಚಾಟ ರಾಜಕಾರಣವೂ ನಡೆಯುತ್ತಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆಗೆ ಬಿಜೆಪಿ ನಾಯಕರು ದೂರು ನೀಡಿದ್ದು, ನಮ್ಮ ಫೋನ್ ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಚುನಾವಣಾ ಕಣದಲ್ಲಿದ್ದ ಸಂಸದರು, ಎಂಎಲ್ಸಿಗಳ ರಿಪೋರ್ಟ್ ಕಾರ್ಡ್
ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ, ಜಿಎಂ ಸಿದ್ದೇಶ್ವರ ಮತ್ತು ಪಿಸಿ ಮೋಹನ್ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು, ಕರ್ನಾಟಕ ರಾಜ್ಯ ಸರಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ನಮ್ಮ ಮೊಬೈಲ್ ಫೋನ್ ಗಳನ್ನು ಟ್ಯಾಪಿಂಗ್ ಮಾಡುತ್ತಿದೆ," ಎಂದು ದೂರಿತ್ತಿದ್ದಾರೆ.
ಮಾತ್ರವಲ್ಲ ಈ ನಾಯಕರು, "ಇದು ಮೂಲಭೂತ ಹಕ್ಕಾದ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಸ್ಪಷ್ಟ ಉಲ್ಲಂಘನೆ," ಎಂದು ಪತ್ರದಲ್ಲಿ ಹೇಳಿದ್ದಾರೆ.
Comments
bjp mp shobha karandlaje karnataka assembly elections 2018 karnataka election results 2018 ಬಿಜೆಪಿ ಶೋಭಾ ಕರಂದ್ಲಾಜೆ ಕರ್ನಾಟಕ ವಿಧಾನಸಭೆ ಚುನಾವಣೆ 2018
English summary
Karnataka BJP MPs Shobha Karandlaje, GM Siddeshwara and PC Mohan write to Home minister Rajnath Singh stating, 'we have every reason to believe that Karnataka govt is misusing its power and tapping our mobile phones. This is clear violation of our fundamental right to privacy.'