ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು. 4ಕ್ಕೆ ಕಾರ್ಯಕರ್ತರನ್ನು ಉದ್ದೇಶಿಸಿ ಬಿ. ಎಲ್. ಸಂತೋಷ್ ಭಾಷಣ

|
Google Oneindia Kannada News

ಬೆಂಗಳೂರು, ಜೂನ್ 30 : ಕರ್ನಾಟಕದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಭಾಷಣ ಮಾಡಲಿದ್ದಾರೆ. ಕರ್ನಾಟಕ ಜನಸಂವಾದ ಸಮಾರೋಪ ಸಮಾರಂಭ ನಡೆಯಲಿದೆ.

Recommended Video

Dr Sudhakar shares his experience after finishing his quarantine period | Oneindia Kannada

ಜುಲೈ 4ರ ಶನಿವಾರ ಸಂಜೆ 5ಗಂಟೆಗೆ ಕರ್ನಾಟಕ ಜನಸಂವಾದದ ಸಮಾರೋಪ ಸಮಾರಂಭ ನಡೆಯಲಿದೆ. ಬಿ. ಎಲ್. ಸಂತೋಷ್ ವಿಡಿಯೋ ಕಾನ್ಪರೆನ್ಸ್ ಮೂಲಕ ಸಮಾರಂಭದ ಪ್ರಮುಖ ಭಾಷಣ ಮಾಡಲಿದ್ದಾರೆ.

ಆರೆಸ್ಸೆಸ್ ಬೆಂಬಲಿತ ಕೃಷಿಕ ಸಂಘದಿಂದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಆರೆಸ್ಸೆಸ್ ಬೆಂಬಲಿತ ಕೃಷಿಕ ಸಂಘದಿಂದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ

Karnataka BJP Jan Samwad Rally Closing Ceremony On July 4

ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಸಮಾರಂಭ ಉದ್ಘಾಟಿಸಿದ್ದರು.

ಬಿಜೆಪಿ ಮೊದಲು ಚೀನಾ ಜೊತೆ ಹೋರಾಡಲಿ, ನಂತರ ಕಾಂಗ್ರೆಸ್ ಜೊತೆ! ಬಿಜೆಪಿ ಮೊದಲು ಚೀನಾ ಜೊತೆ ಹೋರಾಡಲಿ, ನಂತರ ಕಾಂಗ್ರೆಸ್ ಜೊತೆ!

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬಿಜೆಪಿ ಜನ ಸಂವಾದ ಸಮಾವೇಶವನ್ನು ಆಯೋಜನೆ ಮಾಡಿತ್ತು. ಮೋದಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎನ್‌ಪಿಪಿ ಯೂ ಟರ್ನ್; ಮಣಿಪುರದ ಬಿಜೆಪಿ ಸರ್ಕಾರ ಸುಭದ್ರ! ಎನ್‌ಪಿಪಿ ಯೂ ಟರ್ನ್; ಮಣಿಪುರದ ಬಿಜೆಪಿ ಸರ್ಕಾರ ಸುಭದ್ರ!

ಲಾಕ್ ಡೌನ್ ಪರಿಣಾಮ ಸಮಾವೇಶಗಳನ್ನು ಆಯೋಜನೆ ಮಾಡುವಂತಿಲ್ಲ. ಆದ್ದರಿಂದ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶ ನಡೆಸಲಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಕೇಂದ್ರ ಸಚಿವರು ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು.

ಕರ್ನಾಟಕ ಬಿಜೆಪಿಯ ಫೇಸ್ ಬುಕ್, ಟ್ವಿಟರ್, ಯೂ ಟ್ಯೂಬ್ ಚಾನೆಲ್‌ಗಳಲ್ಲಿ ಈ ಸಮಾರಂಭ ಪ್ರಸಾರವಾಗಲಿದೆ.

English summary
BJP national general secretary (organization) B. L. Santosh will address Karnataka party workers on closing ceremony of the Jan Samwad rally via video conferencing on July 4, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X