ಪರಿಷತ್ಗೆ ಸೋಮಣ್ಣ, ಸುಬ್ಬಣ್ಣ : ಯಾರಂತ ಗೊತ್ತಿಲ್ಲ ಕಣಣ್ಣ!
ಬೆಂಗಳೂರು, ಮೇ 23 : ವಿಧಾನಪರಿಷತ್ ಚುನಾವಣೆಗೆ ಕರ್ನಾಟಕ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ವಿಫಲವಾಗಿದೆ. ಭಾನಿವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಿದೆ. ಆದರೆ, ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಕರ್ನಾಟಕ
ಬಿಜೆಪಿ
ಅಧ್ಯಕ್ಷ
ಬಿ.ಎಸ್.ಯಡಿಯೂರಪ್ಪ
ನೇತೃತ್ವದಲ್ಲಿ
ನಡೆದ
ಸಭೆಯಲ್ಲಿ
ರಾಜ್ಯಸಭೆ
ಚುನಾವಣೆಗೆ
ಕೇಂದ್ರ
ಸಚಿವ
ಎಂ.ವೆಂಕಯ್ಯ
ನಾಯ್ಡು
ಅವರ
ಹೆಸರನ್ನು
ಅಂತಿಮಗೊಳಿಸಲಾಗಿದೆ.
ಆದರೆ,
ಪರಿಷತ್
ಅಭ್ಯರ್ಥಿಗಳ
ಪರ
ಲಾಬಿ
ನಡೆಯುತ್ತಿದ್ದು,
ಹೆಸರು
ಅಂತಿಮವಾಗಿಲ್ಲ.
[ಕರ್ನಾಟಕದಿಂದ
ರಾಜ್ಯಸಭೆಗೆ
ಮತ್ತೆ
ಎಂ
ವೆಂಕಯ್ಯನಾಯ್ಡು]
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಲು 29 ಮತಗಳ ಅಗತ್ಯವಿದೆ. ಕರ್ನಾಟಕ ವಿಧಾನಸಭೆಯಲ್ಲಿ 44 ಶಾಸಕರ ಬಲ ಹೊಂದಿರುವ ಬಿಜೆಪಿ ಒಬ್ಬರು ಸದಸ್ಯರನ್ನು ಆಯ್ಕೆ ಮಾಡಬಹುದು. ಜೆಡಿಎಸ್ ಬೆಂಬಲ ಪಡೆದರೆ ಇಬ್ಬರನ್ನು ಆಯ್ಕೆ ಮಾಡಿ ಕಳಿಸಬಹುದಾಗಿದೆ. [ಪರಿಷತ್ತಿಗೆ ವಿ.ಸೋಮಣ್ಣ ಮರು ಆಯ್ಕೆ ಇಲ್ಲ?]
ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿ.ಸೋಮಣ್ಣ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆರಿಸಿ ಕಳಿಸಲಾಗಿತ್ತು. ಈ ಬಾರಿ ಅವರನ್ನು ಪುನರಾಯ್ಕೆ ಮಾಡದೆ ಬೆಂಗಳೂರು ಬಿಜೆಪಿ ಘಟಕದ ಅಧ್ಯಕ್ಷ ಸುಬ್ಬಣ್ಣ ಅವರಿಗೆ ಅವಕಾಶ ನೀಡಬೇಕು ಎಂಬುದು ಒಂದು ಬಣದ ವಾದ, ಸೋಮಣ್ಣ ಪರವಾಗಿಯೂ ಹಿರಿಯ ನಾಯಕರು ಬ್ಯಾಟಿಂಗ್ ಮಾಡಿದ್ದಾರೆ. ಅತ್ತ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಹೆಸರು ಕೇಳಿಬರುತ್ತದೆ. ಲೆಹರ್ ಸಿಂಗ್ ಅವರ ಹೆಸರು ಪಟ್ಟಿಯಲ್ಲಿದೆ. [ಹನೂರು ಕ್ಷೇತ್ರದಲ್ಲಿ ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿ!]
ಈ ಕುರಿತ ಗೊಂದಲಗಳಿಂದಾಗಿ ಭಾನುವಾರದ ಸಭೆಯಲ್ಲಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಿಲ್ಲ. ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತದೆಯೋ? ಅವರನ್ನು ಅಭ್ಯರ್ಥಿಯಾಗಿಸಲು ನಿರ್ಧರಿಸಲಾಗಿದೆ. ದೇವೇಗೌಡರ ಜೊತೆ ಮಾತುಕತೆ ನಡೆಸುವ ಹೊಣೆಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಮಾಜಿ ಸಚಿವ ಆರ್.ಅಶೋಕ್ ಅವರಿಗೆ ನೀಡಲಾಗಿದೆ.
ಜೂನ್ 10ರಂದು ವಿಧಾನಸಭೆಯಿಂದ ಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಬಿಜೆಪಿ ನಾಯಕರು ಮತ್ತೊಮ್ಮೆ ಸಭೆ ಸೇರಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.