Assembly Session Day 2 Live Updates: ನೆರೆ ಸಂತ್ರಸ್ತರ ಪರಿಹಾರದ ಲೆಕ್ಕ ಕೊಟ್ಟ ಸರ್ಕಾರ, ಸಾಕಾಗದೆಂದ ವಿಪಕ್ಷ
Recommended Video
ಬೆಂಗಳೂರು, ಅಕ್ಟೋಬರ್ 11: ರಾಜ್ಯದಲ್ಲಿ ಕಳೆದ ಎರಡು ತಿಂಗಳು ಸುರಿದ ಭಾರಿ ಮಳೆಯಿಂದ ಉಂಟಾದ ನೆರೆ ಪರಿಸ್ಥಿತಿಯಿಂದ ಆದ ಅನಾಹುತದ ಬಗ್ಗೆ ಚರ್ಚಿಸುವ ವಿಚಾರವಾಗಿ ವಿರೋಧಪಕ್ಷಗಳು ಮತ್ತು ಆಡಳಿಯ ಪಕ್ಷಗಳ ನಡುವೆ ಗುರುವಾರ ವಾಗ್ವಾದ ನಡೆದಿತ್ತು. ಚರ್ಚೆಯನ್ನು ಶುಕ್ರವಾರ ನಡೆಸೋಣ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮುಂದೂಡಿದ್ದರು.
ಮೊದಲ ದಿನದ ಕಲಾಪ; ಡೈಲಾಗ್ ಕಿಂಗ್ ಆದ ಸಿದ್ದರಾಮಯ್ಯ!
ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸೋಣ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಗುರುವಾರ ನಿಲುವಳಿ ಸೂಚನೆ ಮಂಡಿಸಿದ್ದವು. ನಿಯಮ 60ರ ಅನ್ವಯ ಈ ಬಗ್ಗೆ ವಿವರವಾದ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದವು. ಆದರೆ ನೆರೆ ವಿಚಾರ ಸೂಕ್ತವಾಗಿ ಚರ್ಚೆಗೆ ಬರಲಿಲ್ಲ. ಮೊದಲ ಅವಧಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆಗೆ ಮೀಸಲಾದರೆ ಮಧ್ಯಾಹ್ನದ ಬಳಿಕ ಧನ ವಿನಿಯೋಗ ಮತ್ತು ಹಣಕಾಸು ಲೆಕ್ಕಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದರು.
ನಂತರ ಶುಕ್ರವಾರ ಬೆಳಿಗ್ಗೆಯಿಂದ ನೆರೆ ಪರಿಹಾರದ ವಿಚಾರ ಚರ್ಚಿಸೋಣ ಎಂದುದ ಪ್ರತಿಪಕ್ಷಗಳು ಬೇಡಿಕೆ ಇರಿಸಿದವು. ಅದಕ್ಕೆ ಆಡಳಿತ ಪಕ್ಷದವರು ತಡವಾದರೂ ಇಂದೇ ಚರ್ಚಿಸೋಣ ಎಂದು ಪ್ರತಿಕ್ರಿಯೆ ನೀಡಿದ್ದರು. ಕೊನೆಗೆ ಸದನವನ್ನು ಮುಂದೂಡಲಾಗಿತ್ತು. ಶುಕ್ರವಾರ ಪ್ರವಾಹ ಸಂಕಷ್ಟದ ಕುರಿತು ಚರ್ಚೆ ನಡೆಯಲಿದೆ.