ವಿಶ್ವಾಸಮತ ಯಾಚನೆ: ಸಿಎಂಗೆ ಗುಡುವು ಕೊಟ್ಟ ರಾಜ್ಯಪಾಲರು
Recommended Video
ಬೆಂಗಳೂರು, ಜುಲೈ18: ಮೈತ್ರಿ ಸರ್ಕಾರ ಪತನದ ತುದಿಗೆ ಬಂದು ತಲುಪಿದೆ. ಇಂದು ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದು, ಸರ್ಕಾರ ಉಳಿಯುತ್ತದೆಯೋ? ಉರುಳುತ್ತದೆಯೋ? ನಿರ್ಧಾರವಾಗಲಿದೆ.
ಹೋಟೆಲಿಗೆ ಹಾಜರ್, ಸದನಕ್ಕೆ ಚಕ್ಕರ್, ಇದು ವಿಶ್ವಾಸಮತ ಹಾಜರಿ ಪುಸ್ತಕ!
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ 15 ಶಾಸಕರು ರಾಜೀನಾಮೆ ನೀಡಿದ್ದಾರೆ, ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಹೀಗಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಬಲ ತುಂಬಿದ ಸುಪ್ರೀಂ: ಆದೇಶದಲ್ಲಿ ಏನಿದೆ?
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆ?
ಮೇಲ್ನೋಟಕ್ಕೆ ಬಿಜೆಪಿಯು ಕೆಲವು ಶಾಸಕರ ಬೆಂಬಲವನ್ನು ಹೆಚ್ಚಿಗೆ ಹೊಂದಿದ್ದು, ಬಹುಮತವನ್ನು ಹೊಂದಿರುವಂತೆ ತೋರುತ್ತಿದೆ. ಆದರೆ ನಿನ್ನೆ ರಾತ್ರಿಯಷ್ಟೆ ರಾಮಲಿಂಗಾ ರೆಡ್ಡಿ ಅವರ ಅತೃಪ್ತತೆ ನಿವಾರಿಸಿ ಪಕ್ಷಕ್ಕೆ ವಾಪಸ್ ಕರೆದುಕೊಳ್ಳುವಂತೆ ಮಾಡಿರುವ ಮೈತ್ರಿ ನಾಯಕರು ತಾವು ಸುಲಭದಲ್ಲಿ ಸೋಲೊಪ್ಪಿಕೊಳ್ಳುವುದಿಲ್ಲವೆಂದು ಸೂಚ್ಯಗೊಳಿಸಿದ್ದಾರೆ.
ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ