ಲೋಕಾ ಪ್ರಕರಣ: ರಾಜ್ಯಾದ್ಯಂತ ವಕೀಲರ ಪ್ರತಿಭಟನೆ
ಬೆಂಗಳೂರು, ಜು. 01: ಭ್ರಷ್ಟಾಚಾರ ಆರೋಪ ಹೊತ್ತಿರುವ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಕೀಲರು ಪಟ್ಟು ಹಿಡಿದಿದ್ದಾರೆ. ಬುಧವಾರ ಕೋರ್ಟ್ ಕಲಾಪ ಬಹಿಷ್ಕಾರ ಮಾಡಿರುವ ವಕೀಲರು ಲೋಕಾಯುಕ್ತ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ವಿವಿಧ ಕನ್ನಡಪರ ಸಂಘಟನೆಗಳು ರಾವ್ ರಾಜೀನಾಮೆಗೆ ಒತ್ತಾಯ ಮಾಡಿವೆ.
ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕಲು ವಕೀಲರು ಮುಂದಾದರು. ಈ ವೇಳೆ ಪೊಲೀಸರು ಮತ್ತು ವಕೀಲರ ನಡುವೆ ಮಾತಿನ ಚಕಮಕಿ ನಡೆಯಿತು. ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿದ ವಕೀಲರ ಸಂಘದ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ ನೇತೃತ್ವದ ವಕೀಲರ ನಿಯೋಗ ರಾಜೀನಾಮೆಗೆ ಒತ್ತಡ ಹೇರಿ ಹೊರಬಂದಿತು.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಕೃಷ್ಣರಾವ್ ಗುರುತು ಪತ್ತೆ]
ಸುದ್ದಿಗಾರರೊಂದಿಗೆ ಮಾತನಾಡಿದ ಸುಬ್ಬಾರೆಡ್ಡಿ, ನಮ್ಮ ಹೋರಾಟವನ್ನು ಯಾವ ಕಾರಣಕ್ಕೂ ಹಿಂದಕ್ಕೆ ಪಡೆಯಲ್ಲ. ನಾಳೆಯೂ ಪ್ರತಿಭಟನೆ ನಡೆಸಲಿದ್ದೇವೆ. ಆರೋಪ ಬಂದ ಕಾರಣ ರಾಜೀನಾಮೆ ನೀಡುವುದು ಒಳಿತು. ಎಲ್ಲರು ಲೋಕಾಯುಕ್ತ ಸಂಸ್ಥೆ ಉಳಿವಿಗೆ ಶ್ರಮಿಸಬೇಕಿದೆ ಎಂದು ಹೇಳಿದರು.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಮುಂದೇನು?]
ಒಂದು ಕೋಟಿ ರು. ಭ್ರಷ್ಟಾಚಾರಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಲೋಕಾಯುಕ್ತ ಸಂಸ್ಥೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಹೈ ಕೋರ್ಟ್ ನಲ್ಲಿ ಪಿಐಎಲ್ ಒಂದು ಸಲ್ಲಿಕೆಯಾಗಿದೆ. ತನಿಖೆಯನದ್ನು ಸ್ವತಂತ್ರ ಸಂಸ್ಥೆಯಿಂದ ನಿಷ್ಪಕ್ಷಪಾತವಾಗಿ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ವಕೀಲರ ಪ್ರತಿಭಟನೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಮೈಸೂರಿನಲ್ಲೂ
ಪ್ರತಿಭಟನೆ
ಮೈಸೂರು
ಜಿಲ್ಲಾ
ವಕೀಲರ
ಸಂಘ
ಲೋಕಾಯುಕ್ತರ
ರಾಜೀನಾಮೆಗೆ
ಆಗ್ರಹಿಸಿ
ಪ್ರತಿಭಟನೆ
ನಡೆಸಿತು.
ನಗರದ
ಪ್ರಮುಖ
ರಸ್ತೆಗಳಲ್ಲಿ
ಮೆರವಣಿಗೆ
ಮಾಡಿದ
ವಕೀಲರು
ಭ್ರಷ್ಟಾಚಾರದ
ತನಿಖೆಗೆ
ಆಗ್ರಹಿಸಿದರು.
ಮಂಗಳೂರಿನಲ್ಲಿ
ಬುಧವಾರ
ಕೋರ್ಟ್
ಕಲಾಪಗಳು
ನಡೆದಿಲ್ಲ.
ಉಳಿದಂತೆ
ಅನೇಕ
ಜಿಲ್ಲಾ
ಕೇಂದ್ರಗಳಲ್ಲೂ
ವಕೀಲರು
ಕಲಾಪ
ಬಹಿಷ್ಕಾರ
ಮಾಡಿ
ಪ್ರತಿಭಟನೆ
ನಡೆಸುತ್ತಿದ್ದಾರೆ.