ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ 2017ರ 24 ಪ್ರಮುಖ ಅಂಶಗಳು..

|
Google Oneindia Kannada News

ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ನೇ ಸಾಲಿನ ಬಜೆಟ್ ಜನಪ್ರಿಯ ಬಜೆಟ್ ಎಂಬುದರಲ್ಲಿ ಅನುಮಾನವೇ ಇಲ್ಲ. ಕಳೆದ ಸಾಲಿನ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಈ ಬಾರಿ ಶೇ 14ರಷ್ಟು ಹೆಚ್ಚಾಗಿದೆ. ಆದರೆ ಬಂಡವಾಳ ವೆಚ್ಚ (33,630) ಅಂದರೆ ಆ ಖರ್ಚಿನಿಂದ ಮತ್ತೆ ಆದಾಯ ಬರುವಂಥದ್ದು ಕಡಿಮೆ ಅನಿಸುತ್ತದೆ.

ಕೃಷಿಗಾಗಿ ಮೀಸಲಿಟ್ಟಿರುವ ಹಣದ ಪ್ರಮಾಣ ಹೆಚ್ಚಿದೆ. ಇರಲಿ ಹೀಗೆ ಬಿಡಿಬಿಡಿಯಾಗಿ ಹೇಳುವ ಬದಲು ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ತುಂಬ ಪ್ರಮುಖವಾದವು ಎನಿಸಿದ 24 ಅಂಶಗಳನ್ನು ಆರಿಸಿ, ನಿಮ್ಮ ಮುಂದೆ ಇಡುತ್ತಿದ್ದೇವೆ.

Karanataka budget 2017, 24 highlight points

* ಕೃಷಿ ಕ್ಷೇತ್ರಕ್ಕೆ 5080 ಕೋಟಿ ರುಪಾಯಿ
* ಮೊದಲ ವರ್ಷದ ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಕಾಲೇಜಿಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
* ಕಡಿಮೆ ದರದಲ್ಲಿ ತಿಂಡಿ ಹಾಗೂ ಊಟ ಒದಗಿಸುವ ನಮ್ಮ ಕ್ಯಾಂಟಿನ್ ಬೆಂಗಳೂರಿನಲ್ಲಿ, ರಾಜ್ಯದ ಇತರ ಎಲ್ಲ ಜಿಲ್ಲೆಗಳಲ್ಲೂ ಸವಿರುಚಿ ಮೊಬೈಲ್ ಕ್ಯಾಂಟಿನ್
* ಮೈಸೂರಿನ ಹಿಮ್ಮಾವಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆ [ಬಜೆಟ್: ಸಾಲ ಮನ್ನಾ ಇಲ್ಲ, ನೀರಾಕ್ಕೆ ಲೈಸೆನ್ಸ್, ಕೃಷಿಗೆ ಸಿದ್ದು ನೀಡಿದ್ದೇನು?]

Karanataka budget 2017, 24 highlight points
* ಐದು ಲಕ್ಷ ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುವ ಹೊಸ ಯೋಜನೆ
* ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರವೇಶ ಶುಲ್ಕ ಗರಿಷ್ಠ 200 ರುಪಾಯಿಗೆ ಮಿತಿ.
* ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ಅನುದಾನ. ಏಕೀಕರಣದ ಅರವತ್ತು ವರ್ಷಗಳ ನೆನಪಿಗಾಗಿ ವಿಶ್ವಕನ್ನಡ ಸಮ್ಮೇಳನ
* ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಏಳನೇ ವೇತನ ಆಯೋಗ
Karanataka budget 2017, 24 highlight points

* ತಾಪಂ ಅಧ್ಯಕ್ಷರ ಗೌರವಧನ 6 ಸಾವಿರಕ್ಕೆ, ಜಿಪಂ ಸದಸ್ಯರದು 5 ಸಾವಿರಕ್ಕೆ, ತಾಪಂ ಸದಸ್ಯರದು 3 ಸಾವಿರಕ್ಕೆ ಹಾಗೂ ಗ್ರಾಪಂ ಸದಸ್ಯರ ಗೌರವಧನ 1 ಸಾವಿರಕ್ಕೆ ಏರಿಕೆ

Karanataka budget 2017, 24 highlight points
* ರಾಜ್ಯದ 16 ಪ್ರವಾಸಿ ಕೇಂದ್ರಗಳು ವಿಶ್ವದರ್ಜೆಗೆ
* ನಿವೃತ್ತ ಪತ್ರಕರ್ತರ ಮಾಸಾಶನ 8ರಿಂದ 10 ಸಾವಿರಕ್ಕೆ ಏರಿಕೆ. ಜಿಲ್ಲಾ ಕೇಂದ್ರಗಳಲ್ಲಿನ ಪತ್ರಕರ್ತರಿಗೆ ಉಚಿತ ಬಸ್ ಪಾಸ್
* 2 ಸ್ಟ್ರೋಕ್ ಆಟೋಗಳ ರದ್ದತಿಗೆ ಕ್ರಮ. 4 ಸ್ಟ್ರೋಕ್ ಎಲ್ ಪಿಜಿಯ ಹತ್ತು ಸಾವಿರ ಆಟೋಗಳಿಗೆ 30 ಸಾವಿರ ಸಹಾಯಧನ
* ಎರಡು ಹಂತಗಳಲ್ಲಿ 1191 ಪಿಯು ಉಪನ್ಯಾಸಕರ ನೇಮಕ
* ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವೈಫೈ. ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆ

Karanataka budget 2017, 24 highlight points
* ರಾಜ್ಯದಲ್ಲಿ ನೀರಾ ನೀತಿ ಜಾರಿ, ಅಬಕಾರಿ ಕಾಯ್ದೆಗೆ ತಿದ್ದುಪಡಿ
* 21 ಜಿಲ್ಲೆಗಳಲ್ಲಿ ಹೊಸ ತಾಲೂಕುಗಳ ಘೋಷಣೆ
* 25 ಲಕ್ಷ ರೈತರಿಗೆ 13,500 ಕೋಟಿ ಕೃಷಿ ಸಾಲ ನೀಡುವ ಗುರಿ
* ರಾಜ್ಯದ ಪ್ರತಿ ಮಾಂಸದ ಅಂಗಡಿಗೆ 1.25 ಲಕ್ಷ ಅನುದಾನ

Karanataka budget 2017, 24 highlight points
* ಬೆಂಗಳೂರಿನಲ್ಲಿ ಉಪನಗರ ಯೋಜನೆ. ರಾಜ್ಯದಲ್ಲಿ ಹೊಸದಾಗಿ 460 ಗ್ರಾಮಪಂಚಾಯತಿ
* ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರುಪಾಯಿ ವಿಶೇಷ ಗೌರವಧನ
* ಭಾಗ್ಯಜ್ಯೋತಿ ಯೋಜನೆಯಡಿ ನೀಡುವ ಉಚಿತ ವಿದ್ಯುತ್ 18ರಿಂದ 40 ಯೂನಿಟ್ ಗೆ ಏರಿಕೆ

Karanataka budget 2017, 24 highlight points
* ಶಬರಿ ಮಲೆಯಲ್ಲಿ ಕರ್ನಾಟಕದ ಉಪಕಚೇರಿ ಅರಂಭ. ವೈದ್ಯಕೀಯ ಸೌಲಭ್ಯ, ಸಹಾಯವಾಣಿ
* ಜನೌಷಧಿ ಜೆನರಿಕ್ ಔಷಧಿ ಮಳಿಗೆ ಯೋಜನೆ ಅಡಿ 200 ಮೆಡಿಕಲ್ ಷಾಪ್
* ಸ್ವಾತಂತ್ರ್ಯ ಯೋಧರ ಮಾಸಾಶನ 10 ಸಾವಿರ, ಗೋವಾ ವಿಮೋಚನಾ ಹೋರಾಟಗಾರರ ಮಾಸಾಶನ 4 ಸಾವಿರಕ್ಕೆ ಹೆಚ್ಚಳ
English summary
Here is the 24 highlights of Karnataka budget 2017 by chief minister Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X