ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

|
Google Oneindia Kannada News

ಬೆಂಗಳೂರು, ನವೆಂಬರ್ 28 : ಕರ್ನಾಟಕ ಸರ್ಕಾರ 2018ರ ಕನ್ನಡ ರಾಜ್ಯೋತ್ಸವ ಪಶಸ್ತಿಯನ್ನು ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ನವೆಂಬರ್ ಅಂತ್ಯಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಬುಧವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 63 ಗಣ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಾಡಿಕೆಯಂತೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಬೇಕಿತ್ತು.

ನಿಜವಾದ ಕನ್ನಡ ಪ್ರೇಮಿ ಯಾರು, ಎನ್ನಾರೈ ಕನ್ನಡಿಗನ ಅನುಭವಾಮೃತ ನಿಜವಾದ ಕನ್ನಡ ಪ್ರೇಮಿ ಯಾರು, ಎನ್ನಾರೈ ಕನ್ನಡಿಗನ ಅನುಭವಾಮೃತ

63ನೇ ಕನ್ನಡ ರಾಜ್ಯೋತ್ಸವ ಆಗಿರುವ ಕಾರಣ 63 ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 29 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

Kannada rajyotsava award 2018 list

ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎಲ್.ದತ್ತು, ಹಿರಿಯ ನಟ ಜೈ ಜಗದೀಶ್, ಹಿರಿಯ ಕಾಂಗ್ರೆಸ್‌ ನಾಯಕಿ ಮಾರ್ಗರೇಟ್ ಆಳ್ವಾ ಸೇರಿದಂತೆ 63 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದವರ ಪಟ್ಟಿ ಇಲ್ಲಿದೆ....

ಸಾಹಿತ್ಯ
* ಎಂ.ಎಸ್.ಪ್ರಭಾಕರ (ಕಾಮರೂಪಿ)
* ಹಸನ್ ನಯೀಂ ಸುರಕೋಡ್
* ಚ.ಸರ್ವಮಂಗಳ
* ಚಂದ್ರಶೇಖ ತಾಳ್ಯ

ರಂಗಭೂಮಿ
* ಎಸ್‌.ಎನ್.ರಂಗಸ್ವಾಮಿ
* ಪುಟ್ಟಸ್ವಾಮಿ
* ಪಂಪಣ್ಣ ಕೋಗಳಿ

ಸಂಗೀತ
* ಅಣ್ಣು ದೇವಾಡಿಗ

ನೃತ್ಯ

* ಎಂ.ಆರ್‌.ಕೃಷ್ಣಮೂರ್ತಿ

ಜಾನಪದ
* ಗುರುವ ಕೊರಗ
* ಗಂಗ ಹುಚ್ಚಮ್ಮ
* ಚನ್ನಮಲ್ಲೇಗೌಡ
* ಶರಣಪ್ಪ ಬೂತೇರ
* ಶಂಕ್ರಮ್ಮ ಮಹಾದೇವಪ್ಪಾ
* ಬಸವರಾಜ ಅಲಗೂಡ
* ಚೂಡಾಮಣಿ ರಾಮಚಂದ್ರ

ಶಿಲ್ಪಕಲೆ
* ಯಮನಪ್ಪ ಚಿತ್ರಗಾರ
* ಬಸಣ್ಣ ಕಾಳಪ್ಪ ಕಂಚಗಾರ

ಚಿತ್ರಕಲೆ
* ಬಸವರಾಜ ರೇವಣ್ಣಸಿದ್ದಪ್ಪ ಉಪ್ಪಿನ

ಕ್ರೀಡೆ
* ಕೆನೆತ್ ಪೊವೆಲ್
* ವಿನಯ್ ವಿ.ಎಸ್.
* ಚೇತನ್ ಆರ್.

ಯಕ್ಷಗಾನ
* ಹಿರಿಯಡ್ಕ ಗೋಪಾಲ ರಾವ್
* ಸೀತಾರಾಮ ಕುಮಾರ ಕಟೀಲು

ಬಯಲಾಟ
* ಯಲ್ಲಲ್ವಾ ರೊಡ್ಡಪ್ಪನವರ
* ಭೀಮರಾಯ ಬೋರಗಿ

ಚಲನಚಿತ್ರ
* ಭಾರ್ಗವ
* ಜೈ ಜಗದೀಶ್
* ರಾಜನ್
* ದತ್ತುರಾಜ್

ಶಿಕ್ಷಣ
* ಗೀತಾ ರಾಮಾನುಜಂ
* ಎ.ವಿ.ಎಸ್.ಮೂರ್ತಿ
* ಡಾ.ಕೆ.ಪಿ.ಗೋಪಾಲಕೃಷ್ಣ
* ಶಿವಾನಂದ ಕೌಜಲಗಿ

ಇಂಜಿನಿಯರಿಂಗ್
ಪ್ರೊ.ಸಿ.ಇ.ಜಿ.ಜಸ್ಟೋ

ಸಂಕೀರ್ಣ
* ಆರ್.ಎಸ್.ರಾಜಾರಾಂ
* ಮೇಜರ್ ಪ್ರದೀಪ್ ಆರ್ಯ
* ಸಿ.ಕೆ.ಜೋರಾಪುರ
* ನರಸಿಂಹಯ್ಯ
* ಡಿ.ಸುರೇಂದ್ರ ಕುಮಾರ್
* ಶಾಂತಪ್ಪನವರ್ ಪಿ.ಬಿ.
* ನಮಶಿವಾಯಂ ರೇಗುರಾಜ್
* ಪಿ.ರಾಮದಾಸ್
* ಎಂ.ಜೆ.ಬ್ರಹ್ಮಯ್ಯ

ಪತ್ರಿಕೋದ್ಯಮ
* ಜಿ.ಎನ್.ರಂಗನಾಥರಾವ್
* ಬಸವರಾಜಸ್ವಾಮಿ
* ಅಮ್ಮೆಂಬಳ ಆನಂದ

ಸಹಕಾರ
* ಸಿ.ರಾಮುಸಮಾಜ ಸೇವೆ
* ಆನಂದ್ ಸಿ. ಕುಂದರ್
* ರಾಚಪ್ಪ ಹಡಪದ
* ಕೃಷ್ಣಕುಮಾರ ಪೂಂಜ
* ಮಾರ್ಗರೇಟ್ ಆಳ್ವಾ

ಕೃಷಿ
* ಮಹಾದೇವಿ ಅಣ್ಣಾರಾವ ವಣದೆ
* ಮೂಕಪ್ಪ ಪೂಜಾರ್

ಪರಿಸರ
* ಕಲ್ಮನೆ ಕಾಮೇಗೌಡ

ಸಂಘ-ಸಂಸ್ಥೆ
* ರಂಗದೊರೆ ಸ್ಮಾರಕ ಆಸ್ಪತ್ರೆ

ವೈದ್ಯಕೀಯ
* ಡಾ.ನಾಡಗೌಡ ಜೆ.ವಿ.
* ಡಾ.ಸೀತಾರಾಮ ಭಟ್
* ಪಿ.ಮೋಹನರಾವ್
* ಡಾ.ಎಂ.ಜಿ.ಗೋಪಾಲ್

ನ್ಯಾಯಾಂಗ
* ಎಚ್.ಎಲ್.ದತ್ತು

ಹೊರನಾಡು
* ಡಾ.ಎ.ಎ.ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರರು
* ಬಸವರಾಜ ಬಿಸರಳ್ಳಿ

English summary
Karnataka government announced the Rajyotsava award 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X