ಕನ್ನಡ ರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡುವ ಉಸ್ತುವಾರಿ ಸಚಿವರ, ಜಿಲ್ಲಾಧಿಕಾರಿಗಳ ಪಟ್ಟಿ ಬಿಡುಗಡೆ
ಬೆಂಗಳೂರು, ಅ. 29: ಕನ್ನಡ ರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ನೆವಂಬರ್ 1 ರಂದು ಧ್ವಜಾರೋಹಣ ಮಾಡಲು ಜಿಲ್ಲಾ ಉಸ್ತುವಾರಿ ಸಚುವರುಗಳನ್ನು ನಿಯೋಜಿಸಿ ಸರ್ಕಾರ ಸೂಚನೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಲಭ್ಯವಿಲ್ಲದ ಕಡೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸುವಂತೆ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಿಬ್ಬಂದಿ ಇಲಾಖೆ ತಿಳಿಸಿದೆ. ಬೆಂಗಳೂರು ನಗರನ ಜಿಲ್ಲೆ ಹೊರತು ಪಡಿಸಿ ಉಳಿದ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡುವವರನ್ನು ನೇಮಕ ಮಾಡಿದೆ.
ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣಕ್ಕೂ ಕಲಬುರಗಿ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ತೆರಳುತ್ತಿಲ್ಲ. ಬಾಗಲಕೋಟೆ ಜಿಲ್ಲಾ ಉಸ್ತುವಾರಿಯನ್ನು ನಿರ್ವಹಿಸುತ್ತಿರುವುದರಿಂದ ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ್ ಕಾರಜೋಳ್ ಕನ್ನಡ ರಾಜ್ಯೋತ್ಸವದಂದು ಧ್ವಜಾರೋಹಣ ಮಾಡುತ್ತಿದ್ದಾರೆ. ಉಳಿದಂತೆ ಆಯಾ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡುವವರ ಪಟ್ಟಿ ಹೀಗಿದೆ.
65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ
* ಬಾಗಲಕೋಟೆ : ಗೋವಿಂದ್ ಕಾರಜೋಳ
* ರಾಮನಗರ : ಡಾ. ಸಿ.ಎನ್. ಅಶ್ವಥ್ ನಾರಾಯಣ್
* ಶಿವಮೊಗ್ಗ : ಕೆ.ಎಸ್. ಈಶ್ವರಪ್ಪ
* ಬೆಂಗಳೂರು (ಗ್ರಾ) : ಆರ್. ಅಶೋಕ್
* ಧಾರವಾಡ : ಜಗದೀಶ್ ಶೆಟ್ಟರ್
* ಚಿತ್ರದುರ್ಗ : ಬಿ. ಶ್ರೀರಾಮುಲು
* ಚಾಮರಾಜನಗರ : ಎಸ್. ಸುರೇಶ್ ಕುಮಾರ್
* ಕೊಡಗು : ವಿ. ಸೋಮಣ್ಣ
* ಚಿಕ್ಕಮಗಳೂರು : ಸಿ.ಟಿ. ರವಿ
* ಹಾವೇರಿ : ಹಾವೇರಿ
* ದಕ್ಷಿಣ ಕನ್ನಡ : ಕೋಟ ಶ್ರೀನಿವಾಸ್ ಪೂಜಾರಿ
* ತುಮಕೂರು : ಜೆ.ಸಿ. ಮಾಧುಸ್ವಾಮಿ
* ಗದಗ್ : ಸಿ.ಸಿ. ಪಾಟೀಲ್
* ಕೋಲಾರ : ಎಚ್. ನಾಗೇಶ್
* ಬೀದರ್ : ಪ್ರಭು ಚೌವ್ಹಾಣ್
* ವಿಜಯಪುರ : ಶಶಿಕಲಾ ಜೊಲ್ಲೆ
* ಬಳ್ಳಾರಿ : ಆನಂದ್ ಸಿಂಗ್
* ದಾವಣಗೆರೆ : ಭೈರತಿ ಬಸವರಾಜು
* ಮೈಸೂರು : ಎಸ್.ಟಿ. ಸೋಮಶೇಖರ್
* ಕೊಪ್ಪಳ : ಬಿ.ಸಿ. ಪಾಟೀಲ್
* ಚಿಕ್ಕಬಳ್ಳಾಪುರ : ಡಾ. ಕೆ. ಸುಧಾಕರ್
* ಮಂಡ್ಯ : ಕೆ.ಸಿ. ನಾರಾಯಣಗೌಡ
* ಉತ್ತರ ಕನ್ನಡ : ಶಿವರಾಂ ಹೆಬ್ಬಾರ್
* ಬೆಳಗಾವಿ : ರಮೇಶ್ ಜಾರಕಿಹೊಳಿ
* ಹಾಸನ : ಕೆ. ಗೋಪಾಲಯ್ಯ
* ಕಲಬುರಗಿ : ಶ್ರೀಮಂತ ಪಾಟೀಲ್
* ಉಡುಪಿ : ಜಿಲ್ಲಾಧಿಕಾರಿಗಳು
* ಯಾದಗಿರಿ : ಜಿಲ್ಲಾಧಕಾರಿಗಳು