NEETನಲ್ಲಿ ಕನ್ನಡ ಸೇರಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ನೀಡದಿರುವುದು ತಪ್ಪು, ಈ ಕುರಿತಂತೆ ಪ್ರತಿಭಟನಾ ಪತ್ರವೊಂದನ್ನು ಕೇಂದ್ರ ಸರ್ಕಾರಕ್ಕೆ ಕಳಿಸುವುದಾಗಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು, ಡಿಸೆಂಬರ್ 23: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ನೀಡದಿರುವುದು ತಪ್ಪು, ಈ ಕುರಿತಂತೆ ಪ್ರತಿಭಟನಾ ಪತ್ರವೊಂದನ್ನು ಕೇಂದ್ರ ಸರ್ಕಾರಕ್ಕೆ ಕಳಿಸುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮೈಸೂರು
ವಿಮಾನ
ನಿಲ್ದಾಣದಲ್ಲಿ
ಸುದ್ದಿಗಾರರ
ಜೊತೆ
ಮಾತನಾಡಿದ
ಅವರು,
ಈ
ಕುರಿತು
ಸಂಬಂಧಿಸಿದವರ
ಜೊತೆ
ಮಾತುಕತೆ
ನಡೆಸುವಂತೆ
ವೈದ್ಯ
ಶಿಕ್ಷಣ
ಸಚಿವ
ಶರಣಪ್ರಕಾಶ್
ಪಾಟೀಲ್
ಅವರಿಗೆ
ಸೂಚಿಸಲಾಗಿದೆ.
ಜೊತೆಗೆ
ಕೇಂದ್ರಕ್ಕೆ
ಪತ್ರ
ಬರೆಯಲು
ಸರ್ಕಾರದ
ಮುಖ್ಯ
ಕಾರ್ಯದರ್ಶಿಯವರಿಗೆ
ಹೇಳಿದ್ದೇನೆ
ಎಂದರು.
ಎಂಟು ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಕನ್ನಡವನ್ನು ಮಾತ್ರ ನಿರಾಕರಿಸಲಾಗಿದೆ. ಕೇಂದ್ರ ಸರ್ಕಾರ ಈ ರೀತಿ ಮಾಡವಾಗ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿ ಸಂಸದರು ಮತ್ತು ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಕೇಳಿದರು.
ಕನ್ನಡ ರಾಷ್ಟ್ರೀಯ ಭಾಷೆ. ಅದರೂ ಕೇಂದ್ರ ಸರ್ಕಾರ ನಮ್ಮ ಭಾಷೆಗೆ ಅವಕಾಶ ನೀಡದೆ ತಪ್ಪು ಮಾಡಿದೆ. ಇದನ್ನು ಪ್ರತಿಭಟಿಸಿ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ನಿವೃತ್ತಿ ನಂತರದ ಸೌಲಭ್ಯಗಳಿಗಾಗಿ ರಂಗಾಯಣದ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿಯವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.